खानापूर

खानापूर तालुक्यात पावसाचा हाहाकार; जनजीवन विस्कळीत, हब्बनहट्टीचे मारुती मंदिर पाण्याखाली | ಖಾನಾಪುರದಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ, ಹಬ್ಬನಹಟ್ಟಿಯ ಮಾರುತಿ ದೇವಸ್ಥಾನ ಜಲಮಯ

खानापूर, 5  जुलै (प्रतिनिधी): गेल्या दोन दिवसांपासून खानापूर तालुक्यात सुरू असलेल्या मुसळधार पावसामुळे जनजीवन पूर्णपणे विस्कळीत झाले आहे. पावसाचा जोर इतका प्रचंड आहे की, तालुक्यातील प्रमुख नद्या दुथडी भरून वाहत असून, अनेक गावांचा संपर्क तुटला आहे. या पावसाचा मोठा फटका हब्बनहट्टी येथील ऐतिहासिक स्वयंभू मारुती मंदिराला बसला असून, ते आता पूर्णपणे पाण्याखाली गेले आहे.

पावसाचा जोर कायम; नद्यांच्या पाणीपातळीत वाढ

जून महिना कोरडा गेल्यानंतर, जुलैच्या सुरुवातीलाच पावसाने जोरदार पुनरागमन केले आहे. पश्चिम घाट आणि खानापूर तालुक्याच्या विविध भागांत पडत असलेल्या पावसामुळे मलप्रभा, म्हादई, मंगोत्री, काळी, पांढरी आणि मार्कंडेय या नद्यांच्या पाणीपातळीत लक्षणीय वाढ झाली आहे. नदी-नाले तुडुंब भरल्याने स्थानिक नागरिकांचे जनजीवन दुस्तर झाले आहे.

वीजपुरवठा खंडित, मालमत्तेचे नुकसान

वादळी वाऱ्यासह कोसळणाऱ्या पावसामुळे अनेक ठिकाणी झाडे उन्मळून पडली आहेत. शनिवारी रात्री झालेल्या जोरदार वाऱ्यांमुळे कणकुंबी, जांबोटी, शिरोली, हेम्माडगा आणि परिसरातील गावांचा वीजपुरवठा खंडित झाला आहे. यामुळे अंधाराचे सावट पसरले असून नागरिकांना अनेक समस्यांना सामोरे जावे लागत आहे.

प्रशासनाचे सतर्कतेचे आवाहन

नद्यांची वाढती पातळी पाहता, प्रशासनाने नागरिकांना जीव धोक्यात न घालण्याचे आवाहन केले आहे. नदीपात्रात उतरणे, मासेमारी करणे किंवा धोकादायक ठिकाणी प्रवास करणे टाळावे, अशा सूचना देण्यात आल्या आहेत. दरम्यान, पावसाचा जोर असाच कायम राहिल्यास पुढील काही दिवसांत तालुक्यात पूरस्थिती उद्भवण्याची शक्यता प्रशासनाने वर्तवली आहे.

हब्बनहट्टी मंदिराची स्थिती: मलप्रभा नदीच्या पाणीपातळीत झालेल्या वाढीमुळे हब्बनहट्टी येथील स्वयंभू मारुती मंदिर पूर्णपणे जलमय झाले आहे. मंदिर परिसरात वाढत्या धोक्यामुळे पर्यटकांनी आणि स्थानिक नागरिकांनी तेथे जाणे टाळावे, असे आवाहन प्रशासनाने केले आहे.

ಖಾನಾಪುರದಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ, ಹಬ್ಬನಹಟ್ಟಿಯ ಮಾರುತಿ ದೇವಸ್ಥಾನ ಜಲಮಯ

ಖಾನಾಪುರ, ಜುಲೈ ೫: ಕಳೆದ ಎರಡು ದಿನಗಳಿಂದ ಖಾನಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಮಲಪ್ರಭಾ ನದಿ ಸೇರಿದಂತೆ ತಾಲೂಕಿನ ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿದ್ದು, ಮಳೆಯ ಆರ್ಭಟ ಮುಂದುವರಿದಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಜೂನ್ ತಿಂಗಳು ಮಳೆಯಿಲ್ಲದೆ ಒಣಗಿದ್ದರೂ, ಜುಲೈ ಆರಂಭದಲ್ಲೇ ವರುಣ ಕೃಪೆ ತೋರಿದ್ದಾನೆ. ಪಶ್ಚಿಮ ಘಟ್ಟದ ಸಾಲು ಹಾಗೂ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲಪ್ರಭಾ, ಮಹಾದಾಯಿ, ಮಂಗೋತ್ರಿ, ಕಾಳಿ, ಪಾಂಡರಿ ಹಾಗೂ ಮಾರ್ಕಂಡೇಯ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ನದಿ ಮತ್ತು ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ವಿದ್ಯುತ್ ಸಂಪರ್ಕ ಕಡಿತ, ಮರಗಳು ಧರೆಗೆ

ಬಲವಾದ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಶನಿವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕಣಕುಂಬಿ, ಜಾಂಬೋಟಿ, ಶಿರೋಲಿ, ಹೆಮ್ಮಡಗಾ ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಹಬ್ಬನಹಟ್ಟಿಯ ಮಾರುತಿ ದೇವಸ್ಥಾನ ಜಲಾವೃತ

ಮಲಪ್ರಭಾ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿರುವುದರಿಂದ, ಹಬ್ಬನಹಟ್ಟಿಯ ಐತಿಹಾಸಿಕ ಸ್ವಯಂಭೂ ಮಾರುತಿ ದೇವಸ್ಥಾನವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಕೇವಲ ಮೂರು ದಿನಗಳ ಮಳೆಗೆ ನದಿಯ ಹರಿವು ಹೆಚ್ಚಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಎರಡು ದಿನಗಳಲ್ಲಿ ನದಿಯ ನೀರು ತೀರ ದಾಟಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.

ಆಡಳಿತ ಮಂಡಳಿಯಿಂದ ಎಚ್ಚರಿಕೆ

ನದಿಗಳ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಪ್ರಾಣದ ಹಂಗು ತೊರೆದು ನದಿ ದಾಟುವುದು, ಮೀನುಗಾರಿಕೆ ಮಾಡುವುದು ಅಥವಾ ನದಿಯ ಹತ್ತಿರ ತೆರಳುವ ಸಾಹಸ ಮಾಡಬಾರದೆಂದು ತಾಲೂಕು ಆಡಳಿತ ವಿನಂತಿಸಿದೆ. ಹಬ್ಬನಹಟ್ಟಿ ದೇವಸ್ಥಾನದ ಆವರಣಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या