बेळगाव–बिद्दरभावी बस गर्लगुंजीजवळ अडकली; रस्त्यावर झाड कोसळल्याने प्रवाशांचा खोळंबा | ಬೆಳಗಾವಿ–ಬಿದ್ದರಭಾವಿ ಬಸ್ ಗರ್ಲಗುಂಜಿ ಬಳಿ ಸಿಲುಕಿತು; ರಸ್ತೆಗೆ ಮರ ಉರುಳಿದ್ದರಿಂದ ಪ್ರಯಾಣಿಕರ ಪರದಾಟ
खानापूर, दि. ५ जुलै : खानापूर तालुक्यात सलग सुरू असलेल्या मुसळधार पावसाचा फटका वाहतुकीलाही बसला आहे. बेळगाव–बिद्दरभावी मार्गावरील एसटी बस गर्लगुंजी गावाजवळ रस्त्यावर झाड कोसळल्यामुळे अडकून पडली असून बसमधील प्रवाशांना मोठा मनस्ताप सहन करावा लागत आहे.

सततच्या पावसामुळे तालुक्यात अनेक ठिकाणी झाडे उन्मळून रस्त्यावर पडत असून वाहतुकीत अडथळे निर्माण होत आहेत. गर्लगुंजी गावाच्या वेशीजवळ मोठे झाड रस्त्यावर कोसळल्याने बेळगाव–बिद्दरभावी मार्गावरील वाहतूक पूर्णपणे ठप्प झाली आहे. त्यामुळे एसटी बससह इतर वाहनेही जागेवरच थांबली आहेत.
रात्रीची वेळ असल्याने बसमधील महिला, लहान मुले आणि ज्येष्ठ नागरिकांच्या सुरक्षिततेचा प्रश्न निर्माण झाला आहे. प्रशासन, वनविभाग आणि संबंधित यंत्रणांनी तातडीने घटनास्थळी पोहोचून रस्त्यावर पडलेले झाड हटवून वाहतूक सुरळीत करावी, अशी मागणी बसमधील प्रवाशांनी केली आहे.
या घटनेची माहिती नुकतीच समोर आली असून प्रशासनाने तातडीने दखल घेऊन रस्ता मोकळा करावा व प्रवाशांना सुरक्षितपणे पुढील प्रवास करता यावा, अशी अपेक्षा व्यक्त होत आहे.
ಬೆಳಗಾವಿ–ಬಿದ್ದರಭಾವಿ ಬಸ್ ಗರ್ಲಗುಂಜಿ ಬಳಿ ಸಿಲುಕಿತು; ರಸ್ತೆಗೆ ಮರ ಉರುಳಿದ್ದರಿಂದ ಪ್ರಯಾಣಿಕರ ಪರದಾಟ
ಖಾನಾಪುರ, ಜು. 5 : ಕಳೆದ ಎರಡು ದಿನಗಳಿಂದ ಖಾನಾಪುರ ತಾಲ್ಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಈ ನಡುವೆ ಬೆಳಗಾವಿ–ಬಿದ್ದರಭಾವಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ (ಕೆಎಸ್ಆರ್ಟಿಸಿ) ಬಸ್ ಗರ್ಲಗುಂಜಿ ಗ್ರಾಮದ ಸಮೀಪ ರಸ್ತೆಗೆ ದೊಡ್ಡ ಮರ ಉರುಳಿದ್ದರಿಂದ ಮಧ್ಯದಲ್ಲೇ ಸಿಲುಕಿಕೊಂಡಿದೆ.
ನಿರಂತರ ಮಳೆಯಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಮರಗಳು ಧರೆಗುರುಳುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಗರ್ಲಗುಂಜಿ ಗ್ರಾಮದ ಪ್ರವೇಶದ್ವಾರದ ಸಮೀಪ ರಸ್ತೆಗೆ ಮರ ಬಿದ್ದ ಪರಿಣಾಮ ಬೆಳಗಾವಿ–ಬಿದ್ದರಭಾವಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಬಸ್ ಸೇರಿದಂತೆ ಹಲವು ವಾಹನಗಳು ರಸ್ತೆಯಲ್ಲೇ ನಿಂತಿವೆ.
ರಾತ್ರಿ ಸಮಯವಾಗಿರುವುದರಿಂದ ಬಸ್ನಲ್ಲಿದ್ದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸಂಬಂಧಿತ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣ ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಇದೀಗ ಲಭ್ಯವಾಗಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
