“निस्वार्थ समाजसेवा हीच खरी देशसेवा” : निट्टूरचे सुपुत्र नागेश नार्वेकर यांचा के.एल.ई. संस्थेकडून सत्कार | ನಿಸ್ವಾರ್ಥ ಸಮಾಜ ಸೇವೆಯೇ ನಿಜವಾದ ದೇಶ ಸೇವೆ” : ನಿಟ್ಟೂರಿನ ನಾಗೇಶ ಗಣಪತಿ ನಾರ್ವೇಕರ್ ಅವರಿಗೆ ಕೆ.ಎಲ್.ಇ ಸಂಸ್ಥೆಯಿಂದ ಸನ್ಮಾನ
खानापूर: निट्टूर (ता. खानापूर) येथील शेती उद्योजक, सामाजिक कार्यकर्ते आणि श्री भूतनाथ समाज सेवा संघाचे अध्यक्ष श्री. नागेश गणपती नार्वेकर यांचा के.एल.ई. संस्थेतर्फे नुकताच गौरव करण्यात आला. ‘राष्ट्रीय डॉक्टर दिना’चे औचित्य साधून आयोजित कार्यक्रमात त्यांच्या निस्वार्थ समाजसेवेची दखल घेत हा सन्मान करण्यात आला.

समाजसेवेचा वसा: गेल्या सात-आठ वर्षांपासून नागेश नार्वेकर हे कोणत्याही भेदभावाशिवाय गरजू रुग्णांना वैद्यकीय मदत मिळवून देत आहेत. दिवस असो वा रात्र, वैद्यकीय आणीबाणीच्या प्रसंगी ते स्वतः धावून जाऊन रुग्णांना तातडीने रुग्णालयात दाखल करतात. ग्रामीण भागातील रुग्णांना ‘आयुष्यमान भारत’, ‘आरोग्य कर्नाटक’ आणि ‘यशस्विनी’ यांसारख्या सरकारी योजनांचा लाभ मिळवून देण्यात त्यांचा मोलाचा वाटा आहे. त्यांनी आतापर्यंत सुमारे ३०-३५ हृदयविकारग्रस्त आणि २०-२५ अर्धांगवायू (पॅरालिसिस) रुग्णांना उपचार मिळवून दिले आहेत.
आरोग्यसेवेसाठी पुढाकार: निट्टूर, गर्लगुंजी, बरगांव आणि बैलूर या चार ग्रामपंचायतींना मोफत आरोग्य तपासणीसाठी के.एल.ई. संस्थेकडे दत्तक मिळवून देण्यातही त्यांनी महत्त्वपूर्ण भूमिका बजावली आहे. उपचारांव्यतिरिक्त गरजूंना रक्त मिळवून देण्यासाठी ते स्वतः रक्तदान करतात आणि ज्या उपचारांवर सरकारी योजना लागू होत नाहीत, तिथे स्वतः पुढाकार घेऊन खर्चात २०% सवलत मिळवून देत आहेत.
यावेळी के.एल.ई. संस्थेचे संचालक डॉ. राजशेखर, सी.ओ.ओ. नवीन एम., डॉ. विश्वनाथ भोवी, मेडिकल सुपरिटेंडंट संजय कंबार आणि अन्य मान्यवर उपस्थित होते. याप्रसंगी इंजिनिअर प्रसाद विठ्ठल पाटील यांचाही सत्कार करण्यात आला. आपल्या या कार्याचे श्रेय त्यांनी ‘श्री भूतनाथ समाज सेवा संघा’ला दिले आहे.
ಕನ್ನಡ ಸುದ್ದಿ (Kannada News)
“ನಿಸ್ವಾರ್ಥ ಸಮಾಜ ಸೇವೆಯೇ ನಿಜವಾದ ದೇಶ ಸೇವೆ” : ನಿಟ್ಟೂರಿನ ನಾಗೇಶ ಗಣಪತಿ ನಾರ್ವೇಕರ್ ಅವರಿಗೆ ಕೆ.ಎಲ್.ಇ ಸಂಸ್ಥೆಯಿಂದ ಸನ್ಮಾನ
ಖಾನಾಪುರ: ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮದ ಕೃಷಿ ಉದ್ಯಮಿ, ಸಮಾಜ ಸೇವಕ ಮತ್ತು ಶ್ರೀ ಭೂತನಾಥ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ ಗಣಪತಿ ನಾರ್ವೇಕರ್ ಅವರನ್ನು ಕೆ.ಎಲ್.ಇ ಸಂಸ್ಥೆ ಗೌರವಿಸಿದೆ. ‘ರಾಷ್ಟ್ರೀಯ ವೈದ್ಯರ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಈ ಸನ್ಮಾನ ಮಾಡಲಾಯಿತು.
ಸಮಾಜ ಸೇವೆಯ ಹಾದಿ:
ಕಳೆದ ಏಳು-ಎಂಟು ವರ್ಷಗಳಿಂದ ನಾಗೇಶ ನಾರ್ವೇಕರ್ ಅವರು ಜಾತಿ-ಧರ್ಮದ ಭೇದವಿಲ್ಲದೆ ರೋಗಿಗಳಿಗೆ ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಹಗಲಿರಲು ಎನ್ನದೆ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ‘ಆಯುಷ್ಮಾನ್ ಭಾರತ್’, ‘ಆರೋಗ್ಯ ಕರ್ನಾಟಕ’ ಮತ್ತು ‘ಯಶಸ್ವಿನಿ’ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಸುಮಾರು 30-35 ಹೃದ್ರೋಗಿಗಳು ಮತ್ತು 20-25 ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಆರೋಗ್ಯ ಸೇವೆಗೆ ಬದ್ಧತೆ:
ನಿಟ್ಟೂರು, ಗರ್ಲಗುಂಜಿ, ಬರಗಾಂವ ಮತ್ತು ಬೈಲೂರು ಗ್ರಾಮ ಪಂಚಾಯಿತಿಗಳನ್ನು ಕೆ.ಎಲ್.ಇ ಸಂಸ್ಥೆಯ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಗೆ ದತ್ತು ಪಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ರೋಗಿಗಳಿಗೆ ರಕ್ತದ ತುರ್ತು ಅಗತ್ಯವಿದ್ದಾಗ ಸ್ವತಃ ರಕ್ತದಾನ ಮಾಡುವುದು ಮತ್ತು ಸರಕಾರಿ ಸೌಲಭ್ಯವಿಲ್ಲದ ಚಿಕಿತ್ಸೆಗಳ ವೆಚ್ಚದಲ್ಲಿ ಶೇ. 20ರಷ್ಟು ರಿಯಾಯಿತಿ ಸಿಗುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಡಾ. ರಾಜಶೇಖರ್, ಸಿಒಒ ನವೀನ್ ಎಂ., ಡಾ. ವಿಶ್ವನಾಥ ಭೋವಿ, ವೈದ್ಯಕೀಯ ಅಧೀಕ್ಷಕ ಸಂಜಯ್ ಕಂಬಾರ್ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಸಮಾಜ ಸೇವಕ ಹಾಗೂ ಇಂಜಿನಿಯರ್ ಪ್ರಸಾದ್ ವಿಠ್ಠಲ್ ಪಾಟೀಲ್ ಅವರನ್ನು ಸಹ ಸನ್ಮಾನಿಸಲಾಯಿತು. ತಮ್ಮ ಈ ಯಶಸ್ಸಿನ ಶ್ರೇಯಸ್ಸನ್ನು ಅವರು ‘ಶ್ರೀ ಭೂತನಾಥ ಸಮಾಜ ಸೇವಾ ಸಂಘ’ಕ್ಕೆ ಅರ್ಪಿಸಿದ್ದಾರೆ.
