खानापूर

आमदार विठ्ठलराव हलगेकर यांची कृषी अधिकाऱ्यांसोबत बैठक; पीक विमा नोंदणीबाबत महत्त्वाचे निर्देश | ಬೆಳೆ ವಿಮೆ ನೋಂದಣಿಗೆ ಅಂತಿಮ ಗಡುವು: ರೈತರಿಗೆ ಶಾಸಕ ವಿಠ್ಠಲರಾವ್ ಹಲಗೇಕರ್ ಮಹತ್ವದ ಸೂಚನೆ.

खानापूर: येथील कृषी विभागाच्या कार्यालयात आमदार विठ्ठलराव हलगेकर यांच्या प्रमुख उपस्थितीत आणि मार्गदर्शनाखाली कृषी योजनांच्या अंमलबजावणीबाबत विशेष बैठक संपन्न झाली. या बैठकीत केंद्र व राज्य शासनाच्या विविध कृषी योजनांचा सविस्तर आढावा घेण्यात आला, ज्यामध्ये विशेषतः ‘कर्नाटक रयत सुरक्षा प्रधानमंत्री फसल बिमा (मुंगारू-२०२६)’ योजनेची माहिती देऊन शेतकऱ्यांनी मुदतीपूर्वी पीक विमा भरण्याचे आवाहन आमदार हलगेकर यांनी केले.

बैठकीच्या सुरुवातीला त्यांनी शेतकऱ्यांच्या अडचणी जाणून घेतल्या आणि कृषी अधिकाऱ्यांनी प्रत्येक गावात जाऊन पात्र शेतकऱ्यांना योजनांचा लाभ मिळवून देण्याचे निर्देश दिले. या योजनेअंतर्गत भात, ऊस, बटाटा, टोमॅटो, कांदा आणि हळद या पिकांसाठी ३१ जुलै २०२६, तर वेलची पिकासाठी १५ जुलै २०२६ ही अंतिम मुदत निश्चित करण्यात आली असून, बेळगाव जिल्ह्यासाठी नियुक्त करण्यात आलेल्या ‘TATA AIG GIC’ आणि ‘IFFCO Tokio General Insurance Company’ या कंपन्यांच्या माध्यमातून नजीकच्या रयत संपर्क केंद्र, ग्राम-वन केंद्र किंवा बँकेत नोंदणी करण्याचे आवाहन करण्यात आले आहे.

बैठकीत कृषी यांत्रिकीकरण, पशुपालन आणि बागायती विभागाच्या विविध योजनांचा आढावा घेण्यात आला, ज्यामध्ये ट्रॅक्टर, पॉवर टिलर, रोटाव्हेटर यांसारख्या अवजारांवर सामान्य शेतकऱ्यांना ५०%, तर अनुसूचित जाती-जमातीच्या शेतकऱ्यांना ९०% पर्यंत अनुदान देण्याबाबत माहिती देण्यात आली. पशुपालन, शेळी-मेंढी पालन, कुक्कुटपालन आणि बागायतीमधील कृषी तलाव, ग्रीनहाऊस व ठिबक सिंचनासाठी ५० ते ९० टक्के अर्थसाहाय्य उपलब्ध असल्याचे स्पष्ट करण्यात आले.

आमदार हलगेकर यांनी ठामपणे सांगितले की, शेतकरी हा अन्नदाता असून शासकीय योजनांचा लाभ देताना कोणतीही दिरंगाई खपवून घेतली जाणार नाही. पीक कर्ज असो वा नसो, नैसर्गिक आपत्तीच्या काळात आर्थिक सुरक्षेसाठी पीक विमा सर्वांसाठी अनिवार्य असल्याचे त्यांनी नमूद केले.

याप्रसंगी भाजप अध्यक्ष बसवराज सानिकोप, नेते जोतिबा रेमाणी, रमेश पाटील, कृषी विभागाचे अधिकारी आणि प्रगतशील शेतकरी उपस्थित होते.

दरम्यान, खानापूर तालुक्यात रविवारी दिवसभर सुरू असलेल्या मुसळधार पावसामुळे अनेक ओढे-नाले दुथडी भरून वाहण्याची शक्यता असून, हेमडगा, जांबोटी, चोर्ला आणि गुंजी यांसारख्या ग्रामीण भागांतील रस्ते बंद पडण्याची शक्यता वर्तवण्यात आली आहे. प्रशासनाने सतर्कतेचा इशारा देत नागरिकांना विनाकारण प्रवास टाळण्याचे, तसेच पूल किंवा पाण्याखालून जाणारे रस्ते ओलांडताना काळजी घेण्याचे आवाहन केले आहे. हवामानाची परिस्थिती लक्षात घेऊन नागरिकांनी सुरक्षित राहावे, असे निर्देश देण्यात आले आहेत.

ಖಾನಾಪುರ ಕೃಷಿ ಇಲಾಖೆ ಕಚೇರಿಯಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಪ್ರಮುಖ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಕೃಷಿ ಯೋಜನೆಗಳ ಅನುಷ್ಠಾನದ ಕುರಿತು ವಿಶೇಷ ಸಭೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು, ಇದರಲ್ಲಿ ವಿಶೇಷವಾಗಿ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ಮುಂಗಾರು-೨೦೨೬)’ ಯೋಜನೆಯ ಕುರಿತು ಮಾಹಿತಿ ನೀಡಿ, ರೈತರು ಗಡುವಿನೊಳಗೆ ಬೆಳೆ ವಿಮೆ ತುಂಬುವಂತೆ ಶಾಸಕ ಹಲಗೇಕರ್ ಕರೆ ನೀಡಿದರು. ಸಭೆಯ ಆರಂಭದಲ್ಲಿ ಅವರು ರೈತರ ಸಮಸ್ಯೆಗಳನ್ನು ಆಲಿಸಿದರು ಮತ್ತು ಕೃಷಿ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅರ್ಹ ರೈತರಿಗೆ ಯೋಜನೆಗಳ ಲಾಭ ಸಿಗುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಈ ಯೋಜನೆಯಡಿ ಭತ್ತ, ಕಬ್ಬು, ಆಲೂಗಡ್ಡೆ, ಟೊಮ್ಯಾಟೊ, ಈರುಳ್ಳಿ ಮತ್ತು ಅರಿಶಿನ ಬೆಳೆಗಳಿಗೆ ಜುಲೈ ೩೧, ೨೦೨೬ ರವರೆಗೆ, ಹಾಗೂ ಏಲಕ್ಕಿ ಬೆಳೆಗಾಗಿ ಜುಲೈ ೧೫, ೨೦೨೬ ರವರೆಗೆ ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ. ಬೆಳಗಾವಿ ಜಿಲ್ಲೆಗಾಗಿ ನೇಮಕಗೊಂಡಿರುವ ‘TATA AIG GIC’ ಮತ್ತು ‘IFFCO Tokio General Insurance Company’ ಈ ವಿಮಾ ಕಂಪನಿಗಳ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ-ಒನ್ ಕೇಂದ್ರ ಅಥವಾ ಬ್ಯಾಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಯಿತು.

ಸಭೆಯಲ್ಲಿ ಕೃಷಿ ಯಾಂತ್ರೀಕರಣ, ಪಶುಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟಾವೇಟರ್ ಮುಂತಾದ ಕೃಷಿ ಉಪಕರಣಗಳ ಮೇಲೆ ಸಾಮಾನ್ಯ ರೈತರಿಗೆ ಶೇ. ೫೦ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. ೯೦ ರವರೆಗೆ ಸಹಾಯಧನ ನೀಡುವ ಬಗ್ಗೆ ಮಾಹಿತಿ ನೀಡಲಾಯಿತು. ಪಶುಭಾಗ್ಯ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆ ಇಲಾಖೆಯ ಕೃಷಿ ಹೊಂಡ, ಹಸಿರುಮನೆ (ಗ್ರೀನ್ ಹೌಸ್) ಮತ್ತು ಹನಿ ನೀರಾವರಿಗಾಗಿ ಶೇ. ೫೦ ರಿಂದ ೯೦ ರವರೆಗೆ ಆರ್ಥಿಕ ನೆರವು ಲಭ್ಯವಿದೆ ಎಂದು ಸ್ಪಷ್ಟಪಡಿಸಲಾಯಿತು. ಶಾಸಕ ಹಲಗೇಕರ್ ಅವರು ರೈತ ಅನ್ನದಾತನಾಗಿದ್ದು, ಸರ್ಕಾರಿ ಯೋಜನೆಗಳ ಲಾಭ ನೀಡುವಾಗ ಯಾವುದೇ ವಿಳಂಬವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಬೆಳೆ ಸಾಲ ಪಡೆದಿದ್ದರೂ ಅಥವಾ ಇಲ್ಲದಿದ್ದರೂ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರ್ಥಿಕ ರಕ್ಷಣೆಗಾಗಿ ಬೆಳೆ ವಿಮೆ ಎಲ್ಲರಿಗೂ ಕಡ್ಡಾಯ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಮುಖಂಡರಾದ ಜೋತಿಬಾ ರೇಮಾಣಿ, ರಮೇಶ್ ಪಾಟೀಲ್, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.

ಈ ಮಧ್ಯೆ, ಖಾನಾಪುರ ತಾಲೂಕಿನಲ್ಲಿ ಭಾನುವಾರ ದಿನವಿಡೀ ಸುರಿದ ಭಾರೀ ಮಳೆಯಿಂದಾಗಿ ಹಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೇಮಡಗಾ, ಜಾಂಬೋಟಿ, ಚೋರ್ಲಾ ಮತ್ತು ಗುಂಜಿ ಮುಂತಾದ ಗ್ರಾಮೀಣ ಭಾಗಗಳ ರಸ್ತೆಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಆಡಳಿತವು ನಾಗರಿಕರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಹಾಗೂ ಸೇತುವೆಗಳು ಅಥವಾ ನೀರಿನ ಮಟ್ಟ ಹೆಚ್ಚಿರುವ ರಸ್ತೆಗಳನ್ನು ದಾಟುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ಸುರಕ್ಷಿತವಾಗಿರಬೇಕೆಂದು ಸೂಚಿಸಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या