भाग्यलक्ष्मी साखर कारखाना (लैला शुगर) कर्मचारी आंदोलन 7 दिवसांसाठी स्थगित; व्यवस्थापनाच्या आश्वासनानंतर निर्णय | ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಧರಣೆ 7 ದಿನ ಮುಂದೂಡಿಕೆ; ಆಡಳಿತದ ಭರವಸೆಯ ಬಳಿಕ ಸಂಘದ ನಿರ್ಧಾರ
खानापूर, दि. 7 जुलै :
कुप्पटगिरी येथील श्री भाग्यलक्ष्मी शुगर एम्प्लॉईज ( Laila sugar ) युनियनने मंगळवारी खानापूर तहसील कार्यालयासमोर आयोजित केलेले धरणे आंदोलन व्यवस्थापनाने दिलेल्या आश्वासनानंतर तात्पुरते सात दिवसांसाठी स्थगित करण्याचा निर्णय घेतला आहे.

संघटनेच्या निवेदनानुसार, हंगामी (सीझनल) कामगारांना ज्येष्ठतेच्या आधारावर पुन्हा कामावर घेण्याबाबत अनेक वेळा मागणी करण्यात आली होती. तसेच 7 व्या वेतन मंडळानुसार थकीत वेतन देण्याची मागणीही करण्यात आली होती. मात्र, या मागण्यांवर अपेक्षित कार्यवाही न झाल्याने आंदोलनाचा निर्णय घेण्यात आला होता.
दरम्यान, 7 जुलै रोजी सायंकाळी संस्थेच्या व्यवस्थापकीय संचालकांनी संघटनेचे अध्यक्ष व पदाधिकाऱ्यांना चर्चेसाठी बोलावले. या बैठकीत हंगामी कामगारांना नियमानुसार व गरजेनुसार पुन्हा नियुक्त करण्यात येईल, तसेच 7 व्या वेतन मंडळाची थकीत रक्कम अदा करण्यात येईल, अशी हमी देण्यात आली. यासंदर्भात उपकामगार आयुक्त, बेळगाव यांच्या उपस्थितीत लेखी समझोता करण्याचेही आश्वासन देण्यात आले.

या पार्श्वभूमीवर औद्योगिक शांतता व सौहार्द कायम ठेवण्याच्या उद्देशाने संघटनेने नियोजित धरणे आंदोलन सात दिवसांसाठी पुढे ढकलण्याचा निर्णय घेतला आहे.
तथापि, व्यवस्थापनाने दिलेली आश्वासने प्रत्यक्षात अमलात आणली नाहीत किंवा उपकामगार आयुक्तांच्या उपस्थितीत लेखी करार करून त्यानुसार कार्यवाही केली नाही, तर कोणत्याही नव्या मागण्या न करता पूर्वघोषित आंदोलन पुन्हा सुरू करण्यात येईल, असा इशारा संघटनेने दिला आहे.
ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಧರಣೆ 7 ದಿನ ಮುಂದೂಡಿಕೆ; ಆಡಳಿತದ ಭರವಸೆಯ ಬಳಿಕ ಸಂಘದ ನಿರ್ಧಾರ
ಖಾನಾಪುರ, ಜು. 7 :
ಕುಪ್ಪಟಗಿರಿಯ ಶ್ರೀ ಭಾಗ್ಯಲಕ್ಷ್ಮಿ ಶುಗರ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಇಂದು ಖಾನಾಪುರ ತಹಶೀಲ್ದಾರ್ ಕಚೇರಿ ಎದುರು ನಡೆಸಲು ಉದ್ದೇಶಿಸಿದ್ದ ಶಾಂತಿಯುತ ಧರಣಿ ಪ್ರತಿಭಟನೆಯನ್ನು ಕಾರ್ಖಾನೆ ಆಡಳಿತ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 7 ದಿನಗಳ ಕಾಲ ಮುಂದೂಡಲಾಗಿದೆ.
ಸಂಘದ ಪ್ರಕಟಣೆಯ ಪ್ರಕಾರ, ಹಂಗಾಮಿ (ಸೀಸನಲ್) ಕಾರ್ಮಿಕರನ್ನು ಹಿರಿಯತ್ವದ ಆಧಾರದ ಮೇಲೆ ಮರುನಿಯೋಜನೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಜೊತೆಗೆ 7ನೇ ವೇತನ ಮಂಡಳಿಯ ಬಾಕಿ ವೇತನವನ್ನು ಪಾವತಿಸಬೇಕೆಂಬ ಬೇಡಿಕೆಯನ್ನೂ ಸಂಘ ಮುಂದಿಟ್ಟಿತ್ತು. ಈ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಧರಣಿ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿತ್ತು.
ಜುಲೈ 7ರಂದು ಸಂಜೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಿದರು. ಸಭೆಯಲ್ಲಿ ಹಂಗಾಮಿ ಕಾರ್ಮಿಕರನ್ನು ನಿಯಮಾನುಸಾರ ಹಾಗೂ ಅಗತ್ಯದ ಆಧಾರದ ಮೇಲೆ ಮರುನಿಯೋಜನೆ ಮಾಡಲಾಗುವುದು ಮತ್ತು 7ನೇ ವೇತನ ಮಂಡಳಿಯ ಬಾಕಿ ವೇತನವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಿದರು. ಈ ಕುರಿತು ಬೆಳಗಾವಿಯ ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಲಿಖಿತ ಒಪ್ಪಂದ (ಸೆಟಲ್ಮೆಂಟ್) ಮಾಡಿಕೊಳ್ಳುವುದಾಗಿ ಸಹ ತಿಳಿಸಲಾಯಿತು.
ಈ ಭರವಸೆಗಳು ಹಾಗೂ ಕೈಗಾರಿಕಾ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಸಂಘವು ಧರಣಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ 7 ದಿನಗಳ ಕಾಲ ಮುಂದೂಡಲು ನಿರ್ಧರಿಸಿದೆ.
ಆದರೆ, ಆಡಳಿತ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸದಿದ್ದರೆ ಅಥವಾ ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳದಿದ್ದರೆ, ಯಾವುದೇ ಹೊಸ ಬೇಡಿಕೆಗಳನ್ನು ಮುಂದಿರಿಸದೆ ಈಗಾಗಲೇ ಘೋಷಿಸಿರುವ ಧರಣಿ ಪ್ರತಿಭಟನೆಯನ್ನು ಪುನಃ ಆರಂಭಿಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
