डिजिटल अरेस्ट’ ही निव्वळ फसवणूक; घाबरू नका, सावध राहा! पोलीस आयुक्त भूषण बोरसे यांचे आवाहन | ಡಿಜಿಟಲ್ ಅರೆಸ್ಟ್’ ಕೇವಲ ವಂಚನೆ: ಭಯಪಡಬೇಡಿ, ಜಾಗರೂಕರಾಗಿರಿ; ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಮನವಿ
बेळगाव: सध्या देशभरात ‘डिजिटल अरेस्ट’च्या नावाखाली नागरिकांना धमकावून लाखो रुपये उकळण्याचे प्रकार वेगाने वाढत आहेत. या पार्श्वभूमीवर कर्नाटक राज्य पोलिसांनी जनतेला सतर्कतेचा इशारा दिला आहे. “पोलीस दलात ‘डिजिटल अरेस्ट’ अशी कोणतीही संकल्पना अस्तित्वात नाही. अशा प्रकारचे कॉल किंवा मेसेज पूर्णपणे बनावट आहेत,” असे स्पष्टीकरण बेळगावचे पोलीस आयुक्त भूषण बोरसे यांनी एका पत्रकाद्वारे दिले आहे.
कशी केली जाते फसवणूक?
पोलीस आयुक्तांनी दिलेल्या माहितीनुसार, सायबर भामटे स्वतःला पोलीस अधिकारी, सीबीआय किंवा अंमलबजावणी संचालनालयाचे (ED) अधिकारी असल्याचे भासवतात. “तुमच्या नावावर बेकायदेशीर पार्सल आले आहे” किंवा “तुमच्यावर गंभीर गुन्हा दाखल झाला आहे,” अशी भीती घालून नागरिकांना व्हिडिओ कॉलवर तासनतास अडकवून ठेवले जाते. यालाच ‘डिजिटल अरेस्ट’ असे नाव देऊन आरोपी पीडित व्यक्तीकडून तातडीने पैसे उकळतात.
नागरिकांसाठी महत्त्वाच्या सूचना:
- कायदेशीर प्रक्रिया: कोणतीही अटक ही प्रत्यक्ष कायदेशीर प्रक्रियेनुसार केली जाते. फोन किंवा व्हिडिओ कॉलवर कोणालाही अटक करण्याची तरतूद कायद्यात नाही.
- माहिती शेअर करू नका: अनोळखी व्यक्तींना आपला ओटीपी (OTP), बँक तपशील किंवा वैयक्तिक माहिती देऊ नका.
- घाबरू नका: धमकीला न घाबरता तातडीने संवाद तोडा आणि संशयास्पद वाटल्यास पोलिसांशी संपर्क साधा.
कुठे तक्रार कराल?
जर तुमची किंवा तुमच्या ओळखीच्या कोणाची सायबर फसवणूक झाली असेल, तर वेळ न घालवता खालील माध्यमांचा वापर करा:
- हेल्पलाईन क्रमांक: १९३० वर त्वरित संपर्क साधा.
- ऑनलाईन पोर्टल: केंद्र सरकारच्या www.cybercrime.gov.in या अधिकृत संकेतस्थळावर तक्रार नोंदवा.
- स्थानिक पोलीस: जवळच्या पोलीस ठाण्यात जाऊन लेखी तक्रार द्या.
“नागरिकांनी सजग राहणे हाच सायबर गुन्ह्यांना रोखण्याचा प्रभावी मार्ग आहे,” असे आवाहन आयुक्त भूषण बोरसे यांनी केले आहे.
‘ಡಿಜಿಟಲ್ ಅರೆಸ್ಟ್’ ಕೇವಲ ವಂಚನೆ: ಭಯಪಡಬೇಡಿ, ಜಾಗರೂಕರಾಗಿರಿ; ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಮನವಿ
ಬೆಳಗಾವಿ:
ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಜನತೆಗೆ ಎಚ್ಚರಿಕೆಯ ಸಂದೇಶ ನೀಡಿದೆ. “ಪೊಲೀಸ್ ಇಲಾಖೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಯಾವುದೇ ಕಾನೂನು ಅಥವಾ ಪರಿಕಲ್ಪನೆ ಅಸ್ತಿತ್ವದಲ್ಲಿಲ್ಲ. ಇಂತಹ ಕರೆಗಳು ಅಥವಾ ಸಂದೇಶಗಳು ಸಂಪೂರ್ಣವಾಗಿ ನಕಲಿ,” ಎಂದು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ವಂಚನೆ ಮಾಡುವ ವಿಧಾನ ಹೇಗೆ?
ವಂಚಕರು ತಮ್ಮನ್ನು ಪೊಲೀಸ್ ಅಧಿಕಾರಿಗಳು, ಸಿಬಿಐ ಅಥವಾ ಸೈಬರ್ ಕ್ರೈಮ್ ಅಧಿಕಾರಿಗಳೆಂದು ಪರಿಚಯಿಸಿಕೊಳ್ಳುತ್ತಾರೆ. “ನಿಮ್ಮ ಹೆಸರಿನಲ್ಲಿ ಅಕ್ರಮ ಪಾರ್ಸೆಲ್ ಬಂದಿದೆ” ಅಥವಾ “ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ” ಎಂದು ಹೆದರಿಸುತ್ತಾರೆ. ವಿಡಿಯೋ ಕಾಲ್ ಮೂಲಕ ನಿಮ್ಮನ್ನು ನಿರಂತರವಾಗಿ ವೀಕ್ಷಿಸುತ್ತಾ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ನಂಬಿಸುತ್ತಾರೆ. ನಂತರ ಪ್ರಕರಣದಿಂದ ಪಾರಾಗಲು ತಕ್ಷಣ ಹಣ ಪಾವತಿಸುವಂತೆ ಒತ್ತಡ ಹೇರುತ್ತಾರೆ.
ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು:
- ಕಾನೂನು ಪ್ರಕ್ರಿಯೆ: ಯಾವುದೇ ವ್ಯಕ್ತಿಯ ಬಂಧನವನ್ನು ಕಾನೂನುಬದ್ಧವಾಗಿ ಪ್ರತ್ಯಕ್ಷವಾಗಿ ಮಾಡಲಾಗುತ್ತದೆ. ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ಬಂಧಿಸುವ ಯಾವುದೇ ಅವಕಾಶ ಕಾನೂನಿನಲ್ಲಿಲ್ಲ.
- ಮಾಹಿತಿ ಹಂಚಿಕೊಳ್ಳಬೇಡಿ: ಅಪರಿಚಿತರಿಗೆ ನಿಮ್ಮ ಒಟಿಪಿ (OTP), ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ.
- ಹೆದರಬೇಡಿ: ಇಂತಹ ಬೆದರಿಕೆ ಕರೆಗಳು ಬಂದಾಗ ಗಾಬರಿಯಾಗದೆ ತಕ್ಷಣ ಸಂಪರ್ಕ ಕಡಿತಗೊಳಿಸಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿ.
ದೂರು ದಾಖಲಿಸುವುದು ಹೇಗೆ?
ಒಂದು ವೇಳೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ಅಥವಾ ಅಂತಹ ಪ್ರಯತ್ನ ನಡೆದರೆ ಈ ಕೆಳಗಿನ ಕ್ರಮ ಕೈಗೊಳ್ಳಿ:
- ಹೆಲ್ಪ್ಲೈನ್ ಸಂಖ್ಯೆ: ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
- ಆನ್ಲೈನ್ ಪೋರ್ಟಲ್: ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ www.cybercrime.gov.in ನಲ್ಲಿ ದೂರು ದಾಖಲಿಸಿ.
- ಸ್ಥಳೀಯ ಪೊಲೀಸ್ ಠಾಣೆ: ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಿ.
“ಸಾರ್ವಜನಿಕರ ಜಾಗೃತಿಯೇ ಸೈಬರ್ ಅಪರಾಧಗಳನ್ನು ತಡೆಯಲು ಇರುವ ಏಕೈಕ ಮಾರ್ಗ,” ಎಂದು ಕಮಿಷನರ್ ಭೂಷಣ್ ಬೋರಸೆ ಅವರು ತಿಳಿಸಿದ್ದಾರೆ.
