खानापूरातील 8 जणांविरोधात गोवा वनविभागाची कारवाई, धबधबा पडला महागात | ಮಹಾದಾಯಿ ಅಭಯಾರಣ್ಯಕ್ಕೆ ಅನಧಿಕೃತ ಪ್ರವೇಶ; ಖಾನಾಪುರದ 8 ಮಂದಿಯ ವಿರುದ್ಧ ಕ್ರಮ

वाळपई : गोव्यातील म्हादई वन्यजीव अभयारण्याच्या मुख्य संरक्षित क्षेत्रातील जवळणी धबधबा परिसरात बेकायदेशीररित्या प्रवेश केल्याप्रकरणी खानापूरातील आठ जणांवर गोवा वनविभागाने कारवाई केली आहे. संबंधितांविरुद्ध वन्यजीव संरक्षण अधिनियम, १९७२ अंतर्गत गुन्हा नोंद करण्यात आला असून पुढील चौकशी सुरू आहे.

वनविभागाच्या पारवाड अँटी-पोचिंग कॅम्पच्या कर्मचाऱ्यांनी ही कारवाई केली. जवळणी धबधबा हा म्हादई अभयारण्याच्या अतिसंवेदनशील ‘कोअर झोन’मध्ये येतो. या भागात वन्य प्राण्यांचा मोठ्या प्रमाणावर वावर असल्याने सुरक्षेच्या कारणास्तव पर्यटकांच्या प्रवेशावर बंदी घालण्यात आली आहे.
तरीही काही पर्यटक नियमांचे उल्लंघन करून या परिसरात प्रवेश करत असल्याचे वारंवार निदर्शनास येत आहे. वनविभागाच्या माहितीनुसार, आजच्या कारवाईनंतर जवळणी धबधबा परिसरात बेकायदेशीर प्रवेश केल्याप्रकरणी आतापर्यंत एकूण ५४ जणांवर कारवाई करण्यात आली आहे.
अशा घटनांना आळा घालण्यासाठी वनविभागाने अभयारण्याच्या सीमेलगत असलेल्या पारवाड गावाजवळ विशेष अँटी-पोचिंग कॅम्प सुरू केला आहे. या कॅम्पमधील वनरक्षक व कर्मचारी दिवस-रात्र गस्त घालून अभयारण्यातील हालचालींवर लक्ष ठेवत आहेत. विशेषतः जवळणी धबधबा परिसर, जंगलातील पायवाटा आणि सीमाभागातील प्रवेशमार्गांवर सतत देखरेख ठेवली जात आहे.
वनविभागाने नागरिकांना अभयारण्यातील प्रतिबंधित क्षेत्रात प्रवेश न करण्याचे आवाहन केले असून नियमांचे उल्लंघन करणाऱ्यांवर कठोर कारवाई करण्यात येणार असल्याचा इशाराही दिला आहे.
ಮಹಾದಾಯಿ ಅಭಯಾರಣ್ಯಕ್ಕೆ ಅನಧಿಕೃತ ಪ್ರವೇಶ; ಖಾನಾಪುರದ 8 ಮಂದಿಯ ವಿರುದ್ಧ ಕ್ರಮ
ವಾಳ್ಪೊಯಿ : ಗೋವಾದ ಮಹಾದಾಯಿ ವನ್ಯಜೀವಿ ಅಭಯಾರಣ್ಯದ ಮುಖ್ಯ ಸಂರಕ್ಷಿತ ಪ್ರದೇಶದಲ್ಲಿರುವ ಜವಳಣಿ ಜಲಪಾತದ ಸುತ್ತಮುತ್ತ ಅನಧಿಕೃತವಾಗಿ ಪ್ರವೇಶಿಸಿದ ಆರೋಪದಡಿ ಖಾನಾಪುರದ ಎಂಟು ಮಂದಿಯ ವಿರುದ್ಧ ಗೋವಾ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಸಂಬಂಧಪಟ್ಟವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಅರಣ್ಯ ಇಲಾಖೆಯ ಪಾರವಾಡ್ ಆಂಟಿ-ಪೋಚಿಂಗ್ ಕ್ಯಾಂಪ್ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಜವಳಣಿ ಜಲಪಾತವು ಮಹಾದಾಯಿ ಅಭಯಾರಣ್ಯದ ಅತಿಸೂಕ್ಷ್ಮ ಕೋರ್ ಝೋನ್ ಪ್ರದೇಶದಲ್ಲಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಆದರೂ ಕೆಲ ಪ್ರವಾಸಿಗರು ನಿಯಮ ಉಲ್ಲಂಘಿಸಿ ಈ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದು ಪದೇ ಪದೇ ಗಮನಕ್ಕೆ ಬರುತ್ತಿದೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಇಂದಿನ ಕ್ರಮದೊಂದಿಗೆ ಜವಳಣಿ ಜಲಪಾತ ಪ್ರದೇಶಕ್ಕೆ ಅನಧಿಕೃತ ಪ್ರವೇಶ ಮಾಡಿದ ಪ್ರಕರಣಗಳಲ್ಲಿ ಇದುವರೆಗೆ ಒಟ್ಟು 54 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಅಭಯಾರಣ್ಯದ ಗಡಿಭಾಗದಲ್ಲಿರುವ ಪಾರವಾಡ್ ಗ್ರಾಮದ ಸಮೀಪ ವಿಶೇಷ ಆಂಟಿ-ಪೋಚಿಂಗ್ ಕ್ಯಾಂಪ್ ಸ್ಥಾಪಿಸಲಾಗಿದೆ. ಈ ಕ್ಯಾಂಪಿನ ಅರಣ್ಯ ರಕ್ಷಕರು ಮತ್ತು ಸಿಬ್ಬಂದಿ ಹಗಲು-ರಾತ್ರಿ ಗಸ್ತು ತಿರುಗಿ ಅಭಯಾರಣ್ಯದ ಚಟುವಟಿಕೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ.
ವಿಶೇಷವಾಗಿ ಜವಳಣಿ ಜಲಪಾತದ ಸುತ್ತಮುತ್ತಲಿನ ಪ್ರದೇಶ, ಕಾಡಿನ ಕಾಲುದಾರಿಗಳು ಹಾಗೂ ಗಡಿಭಾಗದ ಪ್ರವೇಶ ಮಾರ್ಗಗಳ ಮೇಲೆ ನಿರಂತರ ನಿಗಾ ಇಡಲಾಗಿದೆ. ಅಭಯಾರಣ್ಯದ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸದಂತೆ ಸಾರ್ವಜನಿಕರಿಗೆ ಅರಣ್ಯ ಇಲಾಖೆ ಮನವಿ ಮಾಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

