तहसीलदारांच्या उपस्थितीत मणतुर्गा–मणतुर्गावाडा रस्ता प्रश्नावर अखेर तोडगा; सामंजस्यातून मार्ग मोकळा | ಮಣತುರಗಾ–ಮಣತುರಗಾವಾಡಾ ರಸ್ತೆ ಸಮಸ್ಯೆಗೆ ಅಂತ್ಯ; ಸೌಹಾರ್ದಯುತ ಪರಿಹಾರದಿಂದ ಕಾಮಗಾರಿಗೆ ಹಸಿರು ನಿಶಾನೆ
खानापूर, दि. २२ जून : मणतुर्गा ते मणतुर्गावाडा या रस्त्याच्या प्रलंबित प्रश्नावर अखेर सामंजस्याने तोडगा निघाला असून रस्ता मार्गी लावण्याचा मार्ग मोकळा झाला आहे. खानापूरचे माजी आमदार तथा एआयसीसी सचिव यांच्या सूचनेनुसार प्रशासन, शेतकरी आणि स्थानिक प्रतिनिधी यांच्या उपस्थितीत जागेवर पाहणी करून हा निर्णय घेण्यात आला.
आज दुपारी सुमारे १२ वाजता तहसीलदार, सर्वे विभागाचे अधिकारी, ग्रामपंचायत विकास अधिकारी (पीडीओ), काँग्रेस पक्षाचे पदाधिकारी, पत्रकार तसेच ग्रामस्थ शेतकरी घटनास्थळी उपस्थित होते.
गेल्या अनेक दिवसांपासून हा प्रश्न प्रलंबित होता. ग्रामस्थांना रस्त्याची आवश्यकता होती, तर संबंधित शेतकऱ्यांकडून काही अडचणी आणि हरकती मांडल्या जात होत्या. रस्ता व्हावा आणि शेतकऱ्यांचे नुकसानही होऊ नये, अशी भूमिका खानापूर ब्लॉक काँग्रेसने घेतली होती. यापूर्वी तहसीलदार आणि सर्वे विभागाशी चर्चा करून वस्तुस्थिती प्रशासनाच्या निदर्शनास आणून देण्यात आली होती.
त्यानुसार तहसीलदारांनी सर्व संबंधितांना नोटीस बजावून संयुक्त पाहणी आयोजित केली. यावेळी सर्व पक्षांमध्ये सविस्तर चर्चा करून सामंजस्याचा मार्ग स्वीकारण्यात आला. भविष्यात कोणतीही अडचण निर्माण होऊ नये यासाठी बॉण्ड पेपरवर सह्या घेण्यात आल्या.
संबंधित शेतकऱ्यांचा रस्त्याला विरोध नसून रस्ता शेताच्या मध्यभागातून न नेता शेताच्या एका बाजूने घ्यावा तसेच सीडी (क्रॉस ड्रेनेज) संदर्भातील अडचणी दूर कराव्यात, अशी त्यांची मागणी होती. याबाबत ईओ आणि पीडीओ यांच्याशी चर्चा करण्यात आली असून पुढील वर्षात नवीन सीडी मंजूर करण्याबरोबरच उर्वरित रस्त्याचे कामही मंजूर करण्याची सूचना करण्यात आली. शेतकऱ्यांनीही आमचे नुकसान होणार नाही अशा पद्धतीने काम करावे, अशी भूमिका मांडली.
यावेळी अमृत शेलार, ईश्वर बोबाटे, सुभाष पाटील, ज्ञानेश्वर पाटील, भुजंग पाटील, विठ्ठल उर्फ बाळू पाटील, सुरेश भाऊ, नगरसेवक तोहीद, साईश सुतार, भूषण पाटील, अभिषेक शहापूरकर, यशवंत देसाई (कारलगा), पत्रकार वासुदेव चौगुले तसेच ग्रामस्थ मोठ्या संख्येने उपस्थित होते.
मणतुर्गा ते मणतुर्गावाडा रस्ता प्रश्नावर सामंजस्याने तोडगा निघाल्याने ग्रामस्थांमध्ये समाधानाचे वातावरण असून लवकरच रस्त्याचे काम मार्गी लागण्याची अपेक्षा व्यक्त केली जात आहे.
ಮಣತುರಗಾ–ಮಣತುರಗಾವಾಡಾ ರಸ್ತೆ ಸಮಸ್ಯೆಗೆ ಅಂತ್ಯ; ಸೌಹಾರ್ದಯುತ ಪರಿಹಾರದಿಂದ ಕಾಮಗಾರಿಗೆ ಹಸಿರು ನಿಶಾನೆ
ಖಾನಾಪುರ, ಜೂನ್ 22: ಮಣತುರಗಾ–ಮಣತುರಗಾವಾಡಾ ರಸ್ತೆಯ ಬಹುಕಾಲದ ಸಮಸ್ಯೆಗೆ ಕೊನೆಗೂ ಸೌಹಾರ್ದಯುತ ಪರಿಹಾರ ದೊರೆತಿದ್ದು, ರಸ್ತೆ ನಿರ್ಮಾಣ ಕಾಮಗಾರಿಗೆ ದಾರಿ ಸುಗಮವಾಗಿದೆ. ಖಾನಾಪುರದ ಮಾಜಿ ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿಗಳ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಆಡಳಿತ, ರೈತರು ಮತ್ತು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು.
ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ತಹಶೀಲ್ದಾರರು, ಸರ್ವೇ ಇಲಾಖೆಯ ಅಧಿಕಾರಿಗಳು, ಪಿಡಿಒ, ಕಾಂಗ್ರೆಸ್ ಮುಖಂಡರು, ಪತ್ರಕರ್ತರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಬಂಧಿತ ರೈತರೂ ಹಾಜರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಹಳ ದಿನಗಳಿಂದ ಈ ರಸ್ತೆ ವಿಚಾರ ಬಾಕಿ ಉಳಿದಿತ್ತು. ಗ್ರಾಮಸ್ಥರಿಗೆ ರಸ್ತೆಯ ಅಗತ್ಯವಿದ್ದರೆ, ರೈತರಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ಕೆಲವು ತೊಂದರೆಗಳು ಮತ್ತು ಆಕ್ಷೇಪಣೆಗಳಿದ್ದವು. ರಸ್ತೆ ನಿರ್ಮಾಣವಾಗಬೇಕು ಮತ್ತು ರೈತರ ಹಿತಾಸಕ್ತಿಗೂ ಧಕ್ಕೆ ಆಗಬಾರದು ಎಂಬ ನಿಲುವನ್ನು ಖಾನಾಪುರ ಬ್ಲಾಕ್ ಕಾಂಗ್ರೆಸ್ ತೆಗೆದುಕೊಂಡಿತ್ತು. ಈ ಹಿಂದೆ ತಹಶೀಲ್ದಾರರು ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು.
ತಹಶೀಲ್ದಾರರ ಸೂಚನೆಯಂತೆ ಎಲ್ಲಾ ಸಂಬಂಧಿತರಿಗೆ ನೋಟಿಸ್ ನೀಡಲಾಗಿದ್ದು, ಇಂದು ಸ್ಥಳ ಪರಿಶೀಲನೆ ವೇಳೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಭವಿಷ್ಯದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಬಾಂಡ್ ಪೇಪರ್ ಮೇಲೆ ಸಹಿಗಳನ್ನು ಪಡೆಯಲಾಯಿತು.
ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ ಇರಲಿಲ್ಲ. ಆದರೆ ರಸ್ತೆ ಜಮೀನಿನ ಮಧ್ಯಭಾಗದಿಂದ ಹೋಗದೆ ಒಂದು ಬದಿಯಿಂದ ನಿರ್ಮಾಣವಾಗಬೇಕು ಹಾಗೂ ಸಿಡಿ (ಕ್ರಾಸ್ ಡ್ರೈನೇಜ್) ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಕುರಿತು ಇಒ ಹಾಗೂ ಪಿಡಿಒ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ವರ್ಷ ಹೊಸ ಸಿಡಿ ನಿರ್ಮಾಣ ಹಾಗೂ ಉಳಿದ ರಸ್ತೆ ಕಾಮಗಾರಿಗೂ ಅನುಮೋದನೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಅಮೃತ ಶೇಲಾರ, ಈಶ್ವರ ಬೋಬಾಟೆ, ಸುಭಾಷ್ ಪಾಟೀಲ, ಜ್ಞಾನೇಶ್ವರ ಪಾಟೀಲ, ಭುಜಂಗ ಪಾಟೀಲ, ವಿಠ್ಠಲ (ಬಾಳು) ಪಾಟೀಲ, ಸುರೇಶ್ ಭಾವು, ನಗರಸಭಾ ಸದಸ್ಯ ತೋಹೀದ್, ಸಾಯಿಶ್ ಸುತಾರ, ಭೂಷಣ ಪಾಟೀಲ, ಅಭಿಷೇಕ ಶಹಾಪುರಕರ, ಯಶವಂತ ದೇಸಾಯಿ (ಕಾರಲಗಾ), ಪತ್ರಕರ್ತ ವಾಸುದೇವ ಚೌಗುಲೆ ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಣತುರಗಾ–ಮಣತುರಗಾವಾಡಾ ರಸ್ತೆ ಸಮಸ್ಯೆಗೆ ಒಮ್ಮತದ ಪರಿಹಾರ ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿದ್ದು, ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಮೂಡಿದೆ.

