खानापूर

चोर्ला गावासाठी अखेर बससेवा सुरू, पंचहमी योजनेच्या पाठपुराव्याला यश  | ಪಂಚಹಮಿ ಯೋಜನೆಯ ನಿರಂತರ ಹೋರಾಟಕ್ಕೆ ಯಶಸ್ಸು; ಚೋರ್ಲಾ ಗ್ರಾಮಕ್ಕೆ ಕೊನೆಗೂ ಬಸ್ ಸೇವೆ ಆರಂಭ

खानापूर, ता.1 : तालुक्यातील पंचहमी योजनेच्या सातत्यपूर्ण पाठपुराव्याला अखेर यश आले असून, चोर्ला गावासाठी मंगळवारपासून बससेवा सुरू करण्यात आली आहे. विद्यार्थ्यांसह महिला, कामगार आणि सर्वसामान्य नागरिकांच्या सोयीसाठी सकाळच्या वेळेत बससेवा सुरू करावी, अशी मागणी पंचहमी योजनेच्या सदस्या प्रियांका गावकर यांनी योजनेच्या पहिल्या बैठकीपासून सातत्याने केली होती.

पंचहमी योजनेचे अध्यक्ष सूर्यकांत कुलकर्णी यांनी या मागणीचा सातत्याने पाठपुरावा करत संबंधित विभागाशी पत्रव्यवहार केला. तसेच खानापूर व बेळगाव येथील वरिष्ठ अधिकाऱ्यांची भेट घेऊन चोर्ला परिसरातील नागरिकांना भेडसावणाऱ्या वाहतुकीच्या समस्येची माहिती दिली. बससेवा सुरू करण्यासाठी त्यांनी प्रशासनाकडे सातत्याने मागणी केली.

योजनेचे राज्य उपाध्यक्ष एस. आर. पाटील यांनीही बेळगावच्या डीटीओ अधिकाऱ्यांशी दूरध्वनीवरून संपर्क साधून चोर्ला गावासाठी तातडीने बससेवा सुरू करण्याची मागणी केली होती. संबंधित पत्राची प्रत राज्य अध्यक्ष व राज्य उपाध्यक्षांकडेही पाठविण्यात आली होती. नुकत्याच झालेल्या पंचहमी योजनेच्या बैठकीत दोन दिवसांत बससेवा सुरू न झाल्यास वरिष्ठ पातळीवर तक्रार करण्याचा इशाराही देण्यात आला होता.

या सातत्यपूर्ण पाठपुराव्यानंतर अखेर चोर्ला गावासाठी बससेवा सुरू करण्यात आली. खानापूर आगारातून सकाळी ९.२५ वाजता बस सुटून सकाळी १०.३० वाजता चोर्ला येथे पोहोचणार आहे. सध्या ही वेळ प्रायोगिक तत्त्वावर निश्चित करण्यात आली असून, प्रवाशांचा प्रतिसाद पाहून पुढील काळात बसचा मार्ग व वेळ निश्चित करण्यात येणार आहे. बस बेळगावमार्गे चालवायची की खानापूर-चोर्ला मार्गे, याबाबत नागरिकांच्या सोयीचा विचार केला जाणार आहे.

बससेवा सुरू झाल्यानंतर पंचहमी योजनेच्या सदस्या प्रियांका गावकर यांच्या हस्ते बसचे पूजन करण्यात आले. यावेळी चालक व वाहकांचा हार घालून सत्कार करण्यात आला.

यावेळी चिखले गावचे माजी ग्रामपंचायत सदस्य संजय पाटील, धोंडीबा गावडे, माजी ग्रामपंचायत उपाध्यक्ष सीता सुतार, गणपत गावकर, रामा गावकर, महेश लक्ष्मण गावडे, लक्ष्मण नारायण गावकर, विमल गावकर, भागिरथी गेजम, सुलावंती गावकर, पार्वती गावकर यांच्यासह पंचमंडळी, महिला व अंगणवाडी कार्यकर्त्या उपस्थित होत्या.

चोर्ला गावातील नागरिक, विद्यार्थी, महिला व कामगारांची वाहतुकीची अडचण दूर करण्यासाठी बससेवा सुरू केल्याबद्दल प्रियांका गावकर यांनी कर्नाटक सरकार, खानापूर आगारप्रमुख तसेच संबंधित अधिकाऱ्यांचे आभार मानले.


ಪಂಚಹಮಿ ಯೋಜನೆಯ ನಿರಂತರ ಹೋರಾಟಕ್ಕೆ ಯಶಸ್ಸು; ಚೋರ್ಲಾ ಗ್ರಾಮಕ್ಕೆ ಕೊನೆಗೂ ಬಸ್ ಸೇವೆ ಆರಂಭ

ಖಾನಾಪುರ, ಸೆ. 1: ತಾಲ್ಲೂಕಿನ ಪಂಚಹಮಿ ಯೋಜನೆಯ ನಿರಂತರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆತಿದ್ದು, ಚೋರ್ಲಾ ಗ್ರಾಮಕ್ಕೆ ಮಂಗಳವಾರದಿಂದ ಬಸ್ ಸೇವೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಿನ ಸಮಯದಲ್ಲಿ ಬಸ್ ಸೇವೆ ಆರಂಭಿಸಬೇಕು ಎಂದು ಪಂಚಹಮಿ ಯೋಜನೆಯ ಸದಸ್ಯೆ ಪ್ರಿಯಾಂಕಾ ಗಾವಕರ ಅವರು ಯೋಜನೆಯ ಮೊದಲ ಸಭೆಯಿಂದಲೂ ನಿರಂತರವಾಗಿ ಒತ್ತಾಯಿಸುತ್ತಿದ್ದರು. ಅವರ ಬೇಡಿಕೆಗೆ ಇದೀಗ ಯಶಸ್ಸು ದೊರೆತಿದೆ.

ಪಂಚಹಮಿ ಯೋಜನೆಯ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಈ ವಿಷಯದ ಕುರಿತು ನಿರಂತರವಾಗಿ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ, ಖಾನಾಪುರ ಹಾಗೂ ಬೆಳಗಾವಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚೋರ್ಲಾ ಪ್ರದೇಶದ ಜನರು ಎದುರಿಸುತ್ತಿರುವ ಸಾರಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದರು. ಚೋರ್ಲಾ ಗ್ರಾಮಕ್ಕೆ ಬಸ್ ಸೇವೆ ಆರಂಭಿಸುವಂತೆ ಅವರು ಆಡಳಿತಕ್ಕೆ ನಿರಂತರವಾಗಿ ಮನವಿ ಮಾಡಿದ್ದರು.

ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರು ಕೂಡ ಬೆಳಗಾವಿ ಡಿಟಿಒ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಚೋರ್ಲಾ ಗ್ರಾಮಕ್ಕೆ ತುರ್ತಾಗಿ ಬಸ್ ಸೇವೆ ಆರಂಭಿಸುವಂತೆ ಒತ್ತಾಯಿಸಿದ್ದರು. ಸಂಬಂಧಿತ ಮನವಿ ಪತ್ರದ ಪ್ರತಿಯನ್ನು ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಿಗೂ ಕಳುಹಿಸಲಾಗಿತ್ತು. ಇತ್ತೀಚೆಗೆ ನಡೆದ ಪಂಚಹಮಿ ಯೋಜನೆಯ ಸಭೆಯಲ್ಲಿ ಎರಡು ದಿನಗಳೊಳಗೆ ಬಸ್ ಸೇವೆ ಆರಂಭಿಸದಿದ್ದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಈ ನಿರಂತರ ಪ್ರಯತ್ನದ ಫಲವಾಗಿ ಇದೀಗ ಚೋರ್ಲಾ ಗ್ರಾಮಕ್ಕೆ ಬಸ್ ಸೇವೆ ಆರಂಭಿಸಲಾಗಿದೆ. ಖಾನಾಪುರ ಬಸ್ ನಿಲ್ದಾಣದಿಂದ ಬೆಳಿಗ್ಗೆ 9.25ಕ್ಕೆ ಬಸ್ ಹೊರಟು 10.30ಕ್ಕೆ ಚೋರ್ಲಾ ತಲುಪಲಿದೆ. ಸದ್ಯ ಈ ಸಮಯವನ್ನು ಪ್ರಾಯೋಗಿಕವಾಗಿ ನಿಗದಿಪಡಿಸಲಾಗಿದ್ದು, ಪ್ರಯಾಣಿಕರಿಂದ ದೊರೆಯುವ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬಸ್‌ನ ಮಾರ್ಗ ಹಾಗೂ ಸಮಯವನ್ನು ಅಂತಿಮಗೊಳಿಸಲಾಗುವುದು. ಬಸ್ ಬೆಳಗಾವಿ ಮಾರ್ಗವಾಗಿ ಸಂಚರಿಸಬೇಕೇ ಅಥವಾ ಖಾನಾಪುರ-ಚೋರ್ಲಾ ಮಾರ್ಗವಾಗಿ ಸಂಚರಿಸಬೇಕೇ ಎಂಬುದನ್ನು ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ನಿರ್ಧರಿಸಲಾಗುವುದು.

ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಪಂಚಹಮಿ ಯೋಜನೆಯ ಸದಸ್ಯೆ ಪ್ರಿಯಾಂಕಾ ಗಾವಕರ ಅವರ ನೇತೃತ್ವದಲ್ಲಿ ಬಸ್‌ಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಹಾರ ಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿಖಲೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಂಜಯ ಪಾಟೀಲ, ಧೊಂಡಿಬಾ ಗಾವಡೆ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೀತಾ ಸುತಾರ, ಗಣಪತಿ ಗಾವಕರ, ರಾಮಾ ಗಾವಕರ, ಮಹೇಶ್ ಲಕ್ಷ್ಮಣ ಗಾವಡೆ, ಲಕ್ಷ್ಮಣ ನಾರಾಯಣ ಗಾವಕರ, ವಿಮಲಾ ಗಾವಕರ, ಭಾಗೀರಥಿ ಗೇಜಮ, ಸುಲಾವಂತಿ ಗಾವಕರ, ಪಾರ್ವತಿ ಗಾವಕರ ಸೇರಿದಂತೆ ಪಂಚಮಂಡಳಿ ಸದಸ್ಯರು, ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಚೋರ್ಲಾ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಕಾರ್ಮಿಕರ ಸಾರಿಗೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಸ್ ಸೇವೆ ಆರಂಭಿಸಿದ ಕರ್ನಾಟಕ ಸರ್ಕಾರ, ಖಾನಾಪುರ ಬಸ್ ಘಟಕದ ಅಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಪ್ರಿಯಾಂಕಾ ಗಾವಕರ ಧನ್ಯವಾದ ಸಲ್ಲಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या