खानापूर

वाढदिवस विशेष: शेतकरी हित, साखर उद्योग व सामाजिक कार्यात तत्पर सदानंद पाटील  | ರೈತರ ಹಿತ, ಸಕ್ಕರೆ ಉದ್ಯಮ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯ ಸದಾನಂದ ಪಾಟೀಲರಿಗೆ ಇಂದು ಜನ್ಮದಿನ

खानापूर : विशेष प्रतिनिधी लैला समूह संचलित महालक्ष्मी साखर कारखान्याचे व्यवस्थापकीय संचालक (एमडी) तसेच भाजप रयत मोर्चा, बेळगाव जिल्हा उपाध्यक्ष सदानंद मारुतीराव पाटील यांचा आज (दि. 27 जुलै) वाढदिवस विविध ठिकाणी उत्साहात साजरा करण्यात येत आहे. या निमित्ताने कार्यकर्ते, मित्रपरिवार, शेतकरी बांधव आणि हितचिंतकांकडून त्यांच्यावर शुभेच्छांचा वर्षाव होत आहे.

खानापूर तालुक्यातील बीदरभावी रहिवासी असलेल्या सदानंद पाटील यांनी प्राथमिक शिक्षण गावात, तर माध्यमिक शिक्षण टोपिनकट्टी येथे पूर्ण केले. त्यानंतर त्यांनी अभियांत्रिकीचे शिक्षण घेतले आणि काही काळ खासगी क्षेत्रात काम केले. पुढे त्यांनी साखर उद्योगाच्या व्यवस्थापनाची जबाबदारी स्वीकारली.

माजी आमदार स्व. निळकंठराव सरदेसाई यांनी सुरू केलेला खानापूरचा साखर कारखाना काही वर्षे बंद होता. त्यानंतर आमदार विठ्ठलराव हलगेकर यांच्या पुढाकाराने महालक्ष्मी समूहाने कारखान्याची धुरा स्वीकारली. कारखान्याचे व्यवस्थापन सक्षमपणे उभे करण्याची जबाबदारी सदानंद पाटील यांच्यावर सोपविण्यात आली. नियोजन, व्यवस्थापन आणि सातत्यपूर्ण प्रयत्नांच्या बळावर कारखाना सुरळीत सुरू करण्यात त्यांनी महत्त्वाची भूमिका बजावल्याचा उल्लेख करण्यात आला आहे.

कारखाना सुरू झाल्याने खानापूर तालुक्यातील ऊस उत्पादक शेतकऱ्यांना मोठा दिलासा मिळाला आहे. पूर्वी गाळपासाठी तालुक्याबाहेरील कारखान्यांवर अवलंबून राहावे लागत होते. मात्र स्थानिक पातळीवर गाळपाची सुविधा उपलब्ध झाल्याने वाहतूक खर्च, वेळ आणि श्रमाची बचत होत असून शेतकऱ्यांना त्याचा फायदा होत आहे.

सदानंद पाटील हे भारतीय जनता पक्षाच्या संघटनात्मक कार्यातही सक्रिय आहेत. पक्षाच्या विचारधारेचा प्रसार, केंद्र व राज्य शासनाच्या विविध योजनांची माहिती गावागावांत पोहोचविणे तसेच ग्रामीण भागातील विविध उपक्रमांमध्ये सहभाग घेणे यासाठी ते सातत्याने कार्यरत आहेत. त्यांच्या कार्याची दखल घेत पक्षाने त्यांची भाजप रयत मोर्चा, बेळगाव जिल्हा उपाध्यक्ष म्हणून नियुक्ती केली आहे.

राष्ट्रीय स्वयंसेवक संघाचे स्वयंसेवक म्हणूनही ते विविध सामाजिक उपक्रमांमध्ये सहभागी होत असून रक्तदान शिबिरे, शेतकरी मेळावे, युवकांना मार्गदर्शन आणि ग्रामविकासाशी संबंधित कार्यक्रमांमध्ये त्यांचा सक्रिय सहभाग असतो. समाजसेवा हे ध्येय ठेवून विविध उपक्रमांद्वारे जनसामान्यांशी त्यांचा सातत्याने संपर्क राहिला आहे.

ग्रामीण भागातील रस्ते, पाणी, वीज, शिक्षण, वाहतूक, शेतकरी हिताचे प्रश्न तसेच युवकांना विकासाच्या मुख्य प्रवाहात आणण्यासाठी ते सातत्याने प्रयत्नशील असल्याचे त्यांच्या सहकाऱ्यांकडून सांगितले जाते. शांत, संयमी आणि अभ्यासू व्यक्तिमत्त्व, प्रभावी नियोजन आणि संघटन कौशल्यामुळे त्यांनी खानापूर तालुक्यात आपली वेगळी ओळख निर्माण केली आहे.

सदानंद पाटील यांच्या वाढदिवसानिमित्त विविध सामाजिक उपक्रमांचे आयोजन करण्यात आले असून कार्यकर्ते, शेतकरी आणि नागरिकांकडून त्यांना शुभेच्छा दिल्या जात आहेत.

ರೈತರ ಹಿತ, ಸಕ್ಕರೆ ಉದ್ಯಮ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯ ಸದಾನಂದ ಪಾಟೀಲರಿಗೆ ಇಂದು ಜನ್ಮದಿನ

ಖಾನಾಪುರ : ಪ್ರತಿನಿಧಿ

ಲೈಲಾ ಸಮೂಹದ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಬಿಜೆಪಿ ರೈತ ಮೋರ್ಚಾ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ ಮಾರುತಿರಾವ್ ಪಾಟೀಲ ಅವರ ಜನ್ಮದಿನವನ್ನು ಇಂದು (ಜುಲೈ 27) ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಸ್ನೇಹಿತರು, ರೈತರು ಹಾಗೂ ಹಿತೈಷಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮೂಲದ ಸದಾನಂದ ಪಾಟೀಲ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಹಾಗೂ ಪ್ರೌಢ ಶಿಕ್ಷಣವನ್ನು ತೋಪಿನಕಟ್ಟಿ ಗ್ರಾಮದಲ್ಲಿ ಪೂರ್ಣಗೊಳಿಸಿದರು. ನಂತರ ಇಂಜಿನಿಯರಿಂಗ್ ಶಿಕ್ಷಣ ಪಡೆದು ಕೆಲಕಾಲ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಬಳಿಕ ಸಕ್ಕರೆ ಉದ್ಯಮದ ನಿರ್ವಹಣಾ ಕ್ಷೇತ್ರಕ್ಕೆ ಪ್ರವೇಶಿಸಿ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡರು.

ಮಾಜಿ ಶಾಸಕ ದಿವಂಗತ ನೀಲಕಂಠರಾವ್ ಸರದೇಶಾಯಿ ಅವರ ಕನಸಿನ ಯೋಜನೆಯಾಗಿದ್ದ ಖಾನಾಪುರ ಸಕ್ಕರೆ ಕಾರ್ಖಾನೆ ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ನಂತರ ಶಾಸಕ ವಿಠ್ಠಲರಾವ್ ಹಲಗೇಕರ ಅವರ ಪ್ರಯತ್ನದಿಂದ ಮಹಾಲಕ್ಷ್ಮಿ ಸಮೂಹವು ಕಾರ್ಖಾನೆಯ ಜವಾಬ್ದಾರಿಯನ್ನು ವಹಿಸಿಕೊಂಡಿತು. ಕಾರ್ಖಾನೆಯ ಆಡಳಿತ ಹಾಗೂ ನಿರ್ವಹಣೆಯ ಹೊಣೆಗಾರಿಕೆಯನ್ನು ಸದಾನಂದ ಪಾಟೀಲ ಅವರಿಗೆ ನೀಡಲಾಗಿದ್ದು, ಯೋಜಿತ ಕಾರ್ಯವೈಖರಿ ಮತ್ತು ನಿರಂತರ ಶ್ರಮದ ಮೂಲಕ ಕಾರ್ಖಾನೆಯನ್ನು ಪುನಃ ಕಾರ್ಯಾರಂಭಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಲಾಗಿದೆ.

ಕಾರ್ಖಾನೆ ಪುನರಾರಂಭಗೊಂಡ ಬಳಿಕ ಖಾನಾಪುರ ತಾಲೂಕಿನ ಕಬ್ಬು ಬೆಳೆಗಾರರಿಗೆ ಸ್ಥಳೀಯ ಮಟ್ಟದಲ್ಲೇ ಕಬ್ಬು ಅರೆಯುವ ಸೌಲಭ್ಯ ದೊರೆತಿದೆ. ಇದರಿಂದ ದೂರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಅವಶ್ಯಕತೆ ಕಡಿಮೆಯಾಗಿದ್ದು, ಸಾರಿಗೆ ವೆಚ್ಚ, ಸಮಯ ಹಾಗೂ ಶ್ರಮ ಉಳಿತಾಯವಾಗಿದೆ. ಇದರ ಪ್ರಯೋಜನ ಸಾವಿರಾರು ರೈತರಿಗೆ ಲಭಿಸಿದೆ ಎಂದು ಹೇಳಲಾಗಿದೆ.

ಸದಾನಂದ ಪಾಟೀಲ ಅವರು ಭಾರತೀಯ ಜನತಾ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವುದು, ರೈತರ ಸಮಸ್ಯೆಗಳ ಕುರಿತು ಧ್ವನಿಯಾಗುವುದು ಹಾಗೂ ಪಕ್ಷದ ಸಂಘಟನೆ ಬಲಪಡಿಸುವ ಕೆಲಸದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಬಿಜೆಪಿ ರೈತ ಮೋರ್ಚಾದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರ ಜವಾಬ್ದಾರಿಯನ್ನು ಪಕ್ಷ ನೀಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿರುವ ಅವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದಾರೆ. ರಕ್ತದಾನ ಶಿಬಿರಗಳು, ರೈತರ ಸಭೆಗಳು, ಯುವಕರಿಗೆ ಮಾರ್ಗದರ್ಶನ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿದ್ದು, ಸಮಾಜಸೇವೆಯ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಗ್ರಾಮೀಣ ಪ್ರದೇಶಗಳ ರಸ್ತೆ, ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ಸಾರಿಗೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಾಂತ ಸ್ವಭಾವ, ಸರಳ ವ್ಯಕ್ತಿತ್ವ, ಸಂಘಟನಾ ಕೌಶಲ್ಯ ಮತ್ತು ಪರಿಣಾಮಕಾರಿ ಆಡಳಿತದಿಂದ ಖಾನಾಪುರ ತಾಲೂಕಿನಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

ಸದಾನಂದ ಪಾಟೀಲ ಅವರ ಜನ್ಮದಿನದ ಅಂಗವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳು, ಸೇವಾ ಚಟುವಟಿಕೆಗಳು ಹಾಗೂ ಶುಭಾಶಯ ಸಮಾರಂಭಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು, ರೈತರು ಹಾಗೂ ಕಾರ್ಯಕರ್ತರು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या