मराठी, उर्दू माध्यमाच्या शिक्षक भरतीवरील अन्यायाविरुद्ध अधिवेशनात आवाज उठवणार: मंत्री यू. टी. खादर | ಮರಾಠಿ-ಉರ್ದು ಶಾಲೆಗಳಲ್ಲಿ ಖಾಲಿ ಹುದ್ದೆಗಳ ನಿರ್ಲಕ್ಷ್ಯ: ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕಂಠಕ
बेंगळूर: कर्नाटकातील आगामी शिक्षक भरती प्रक्रियेत मराठी आणि उर्दू भाषिक अल्पसंख्याक उमेदवारांवर झालेल्या अन्यायाकडे आरोग्य व अल्पसंख्याक मंत्री यू. टी. खादर लक्ष वेधणार आहेत. या संदर्भात विधानसभेच्या अधिवेशनात सविस्तर चर्चा घडवून आणण्याचे ठोस आश्वासन त्यांनी उमेदवारांच्या शिष्टमंडळाला दिले आहे.
खानापूर आणि बेळगाव परिसरातील डी.एड. व बी.एड. धारक उमेदवारांनी बेंगलोर येथे मंत्री यू. टी. खादर यांची त्यांच्या कार्यालयात भेट घेऊन निवेदन दिले. नुकत्याच प्रसिद्ध झालेल्या शिक्षक भरतीच्या अधिसूचनेत अल्पसंख्याक मराठी व उर्दू शाळांमधील रिक्त पदांकडे दुर्लक्ष करण्यात आल्याची वस्तुस्थिती त्यांनी मंत्र्यांच्या निदर्शनास आणून दिली.
शाळांमधील शिक्षकांची पदे न भरल्यामुळे सीमाभागातील मराठी आणि उर्दू माध्यमाच्या शाळांमध्ये शिकणाऱ्या विद्यार्थ्यांचे शैक्षणिक नुकसान होत आहे. तसेच, वर्षांनुवर्षे नोकरीच्या प्रतीक्षेत असलेल्या शेकडो डी.एड. आणि बी.एड. धारकांचे भवितव्यही टांगणीला लागले आहे. या समस्येचे गांभीर्य लक्षात घेऊन मंत्री खादर यांनी अधिवेशनात सरकारचे लक्ष वेधून योग्य तो तोडगा काढण्याची ग्वाही दिली आहे.
ಶಿಕ್ಷಕರ ನೇಮಕಾತಿಯಲ್ಲಿನ ಅನ್ಯಾಯ: ಅಧಿವೇಶನದಲ್ಲಿ ಗಮನ ಸೆಳೆಯಲು ಸಚಿವ ಯು.ಟಿ. ಖಾದರ್ ಭರವಸೆ
ಖಾನಾಪುರ: ಮುಂಬರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಷಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಕುರಿತು ಮುಂಬರುವ ಶಾಸನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯುವುದಾಗಿ ಆರೋಗ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಖಾನಾಪುರ ಮತ್ತು ಬೆಳಗಾವಿ ಭಾಗದ ಡಿ.ಎಡ್ ಹಾಗೂ ಬಿ.ಎಡ್ ಪದವೀಧರ ಅಭ್ಯರ್ಥಿಗಳ ನಿಯೋಗವು ಬೆಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇತ್ತೀಚೆಗೆ ಹೊರಡಿಸಲಾದ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಮರಾಠಿ ಮತ್ತು ಉರ್ದು ಮಾಧ್ಯಮದ ಅಲ್ಪಸಂಖ್ಯಾತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕಡೆಗಣಿಸಲಾಗಿದೆ ಎಂಬ ವಿಷಯವನ್ನು ಅಭ್ಯರ್ಥಿಗಳು ಸಚಿವರ ಗಮನಕ್ಕೆ ತಂದರು.
ಅಲ್ಪಸಂಖ್ಯಾತ ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಆ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜೊತೆಗೆ, ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ನೂರಾರು ಡಿ.ಎಡ್ ಮತ್ತು ಬಿ.ಎಡ್ ಅಭ್ಯರ್ಥಿಗಳ ಭವಿಷ್ಯವೂ ಅನಿಶ್ಚಿತತೆಯಲ್ಲಿದೆ ಎಂದು ನಿಯೋಗವು ವಿವರಿಸಿತು.
ಸಮಸ್ಯೆಯ ಗಂಭೀರತೆಯನ್ನು ಆಲಿಸಿದ ಸಚಿವರು, ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಗಂಭೀರ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗಣಪತಿ ಬಾವಕರ, ದಾಮೋದರ ಪಾಟೀಲ, ಮೋಹನ ಪಾಟೀಲ ಸೇರಿದಂತೆ ಹಲವು ಡಿ.ಎಡ್ ಹಾಗೂ ಬಿ.ಎಡ್ ಅಭ್ಯರ್ಥಿಗಳು ಉಪಸ್ಥಿತರಿದ್ದರು.
