चापगाव दक्षिणमुखी मारुती मंदिराचा उद्घाटन सोहळा ‘शोध चंपावती नगरीचा’ पुस्तिकेचेही होणार प्रकाशन | ಚಾಪಗಾಂವನಲ್ಲಿ ದಕ್ಷಿಣಾಭಿಮುಖಿ ಮಾರುತಿ ಮಂದಿರ ಲೋಕಾರ್ಪಣೆ: ‘ಶೋಧ ಚಂಪಾವತಿ ನಗರಿಚಾ’ ಕೃತಿ ಬಿಡುಗಡೆ

खानापूर: खानापूर तालुक्यातील चापगाव येथील नूतन बांधण्यात आलेल्या दक्षिणमुखी श्री मारुती मंदिराचा उद्घाटन समारंभ येत्या २ एप्रिल २०२६ रोजी आयोजित करण्यात आला आहे. या सोहळ्यानिमित्त १ आणि २ एप्रिल असे दोन दिवस विविध धार्मिक व सांस्कृतिक कार्यक्रमांची रेलचेल असणार आहे.

दोन दिवसांचे भरगच्च कार्यक्रम:
- १ एप्रिल: दिवसभर गावातून भव्य मिरवणूक काढण्यात येईल. सायंकाळी महिलांसाठी हळदी-कुंकू कार्यक्रम आणि गावातील ज्येष्ठ नागरिकांचा गौरव सोहळा संपन्न होईल.
- २ एप्रिल: सकाळी सूर्योदयाच्या मुहूर्तावर मंदिरात मूर्ती प्राणप्रतिष्ठापना आणि हनुमान जन्मोत्सव सोहळा पार पडेल. त्यानंतर रेणुका देवीच्या परडी भरण्याचा कार्यक्रम होऊन महाप्रसादाचे वाटप केले जाईल.
मंदिर उद्घाटन व पुस्तक प्रकाशन:
मुख्य सोहळा २ एप्रिल रोजी सायंकाळी ६ वाजता पूज्य श्री चन्नबसव देवरू स्वामीजी तसेच खानापूर व बेळगाव भागातील अनेक मठाधीशांच्या उपस्थितीत पार पडणार आहे. या कार्यक्रमाला तालुक्यातील विद्यमान व माजी आमदार तसेच इतर लोकप्रतिनिधींना निमंत्रित करण्यात आले आहे. याच व्यासपीठावर स्वामीजींच्या हस्ते पत्रकार पिराजी कुऱ्हाडे लिखित ‘शोध चंपावती नगरीचा’ या पुस्तिकेचे प्रकाशन करण्यात येईल.
लोकसहभागातून मंदिराची उभारणी व सत्कार:
विशेष म्हणजे, चापगावचे उद्योजक व ग्रामपंचायतीचे माजी उपाध्यक्ष मारुती चोपडे यांनी स्वखर्चाने जवळपास ३० लाख रुपये खर्चून या भव्य मंदिराची उभारणी केली आहे. त्यांच्या या दातृत्वाबद्दल समस्त ग्रामस्थांच्या वतीने त्यांचा जाहीर सत्कार करण्यात येणार आहे.
धर्मसभा व व्याख्यान:
सत्कारांनंतर आयोजित धर्मसभेमध्ये महाराष्ट्रातील प्रसिद्ध प्रबोधनकार व युवा कीर्तनकार ह.भ.प. अनिल देवळेकर यांचे विशेष व्याख्यान होणार आहे. या मंगलमयी सोहळ्याचा लाभ सर्व शिवभक्त व हनुमान भक्तांनी घ्यावा, असे आवाहन चापगाव ग्रामस्थ कमिटीच्या वतीने करण्यात आले आहे.
या संदर्भात शुक्रवारी पार पडलेल्या बैठकीत मंदिराच्या पावती पुस्तकाचे व निमंत्रण पत्रिकेचे प्रकाशन करण्यात आले. यावेळी मारुती चोपडे, पंच कमिटीचे अध्यक्ष नारायण गोदी, केंचापा बेळगावकर पाटील, बाजीराव पाटील, पिराजी कुऱ्हाडे, संजय बेळगावकर, शिवाजी बिरजे, महादेव पाटील यांच्यासह देवस्थान व उत्सव कमिटीचे पदाधिकारी उपस्थित होते.
ಚಾಪಗಾಂವನಲ್ಲಿ ಏಪ್ರಿಲ್ 2ಕ್ಕೆ ದಕ್ಷಿಣಾಭಿಮುಖಿ ಮಾರುತಿ ಮಂದಿರ ಲೋಕಾರ್ಪಣೆ: ‘ಶೋಧ ಚಂಪಾವತಿ ನಗರಿಚಾ’ ಕೃತಿ ಬಿಡುಗಡೆ
ಖಾನಾಪುರ: ತಾಲೂಕಿನ ಚಾಪಗಾಂವ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ದಕ್ಷಿಣಾಭಿಮುಖಿ ಶ್ರೀ ಮಾರುತಿ ಮಂದಿರದ ಉದ್ಘಾಟನಾ ಸಮಾರಂಭವು ಏಪ್ರಿಲ್ 2, 2026 ರಂದು ಅತ್ಯಂತ ವೈಭವದಿಂದ ಜರುಗಲಿದೆ. ಈ ಪ್ರಯುಕ್ತ ಏಪ್ರಿಲ್ 1 ಮತ್ತು 2 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಕಾರ್ಯಕ್ರಮದ ವಿವರ:
- ಏಪ್ರಿಲ್ 1: ದಿನವಿಡೀ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ಸಂಜೆ ಮಹಿಳೆಯರಿಗಾಗಿ ಅರಿಶಿನ-ಕುಂಕುಮ ಕಾರ್ಯಕ್ರಮ ಹಾಗೂ ಗ್ರಾಮದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
- ಏಪ್ರಿಲ್ 2: ಸೂರ್ಯೋದಯದ ಶುಭ ಮುಹೂರ್ತದಲ್ಲಿ ಮಂದಿರದಲ್ಲಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಹನುಮ ಜಯಂತಿ ಉತ್ಸವ ನಡೆಯಲಿದೆ. ನಂತರ ರೇಣುಕಾ ದೇವಿಯ ಪರ್ಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ವಿತರಣೆ ಇರಲಿದೆ.
ಮಂದಿರ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ:
ಏಪ್ರಿಲ್ 2ರ ಸಂಜೆ 6 ಗಂಟೆಗೆ ಪೂಜ್ಯ ಶ್ರೀ ಚನ್ನಬಸವ ದೇವರು ಸ್ವಾಮೀಜಿ ಹಾಗೂ ಖಾನಾಪುರ-ಬೆಳಗಾವಿ ಭಾಗದ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮಂದಿರದ ಉದ್ಘಾಟನೆ ನೆರವೇರಲಿದೆ. ಇದೇ ವೇದಿಕೆಯಲ್ಲಿ ಪತ್ರಕರ್ತ ಪಿರಾಜಿ ಕುರ್ಹಾಡೆ ಅವರು ಬರೆದ ‘ಶೋಧ ಚಂಪಾವತಿ ನಗರಿಚಾ’ ಎಂಬ ಸಂಶೋಧನಾತ್ಮಕ ಕೃತಿಯನ್ನು ಸ್ವಾಮೀಜಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರು, ಮಾಜಿ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ದಾನಿಗಳಿಗೆ ಸನ್ಮಾನ ಹಾಗೂ ಧರ್ಮಸಭೆ:
ಗ್ರಾಮದ ಉದ್ಯಮಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಾರುತಿ ಚೋಪಡೆ ಅವರು ಸುಮಾರು 30 ಲಕ್ಷ ರೂಪಾಯಿ ಸ್ವಂತ ವೆಚ್ಚದಲ್ಲಿ ಈ ಸುಂದರ ಮಂದಿರವನ್ನು ನಿರ್ಮಿಸಿಕೊಟ್ಟಿದ್ದು, ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಅವರಿಗೆ ಸಾರ್ವಜನಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ತದನಂತರ ನಡೆಯುವ ಧರ್ಮಸಭೆಯಲ್ಲಿ ಮಹಾರಾಷ್ಟ್ರದ ಖ್ಯಾತ ಪ್ರಬೋಧನಕಾರರಾದ ಹ.ಭ.ಪ. ಅನಿಲ್ ದೇವಳೇಕರ್ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಶುಕ್ರವಾರ ನಡೆದ ಗ್ರಾಮಸ್ಥರ ಹಾಗೂ ಉತ್ಸವ ಸಮಿತಿಯ ಸಭೆಯಲ್ಲಿ ಮಂದಿರದ ದೇಣಿಗೆ ರಸೀದಿ ಪುಸ್ತಕ ಹಾಗೂ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾರುತಿ ಚೋಪಡೆ, ಪಂಚ ಸಮಿತಿ ಅಧ್ಯಕ್ಷ ನಾರಾಯಣ ಗೋದಿ, ಹಿರಿಯರಾದ ಕೆಂಚಪ್ಪ ಬೆಳಗಾಂವಕರ್ ಪಾಟೀಲ್, ಬಾಜಿರಾವ್ ಪಾಟೀಲ್, ಶಿವಾಜಿ ಬಿರ್ಜೆ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹನುಮ ಭಕ್ತರು ಹಾಗೂ ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಐತಿಹಾಸಿಕ ಸೋಹಳವನ್ನು ಯಶಸ್ವಿಗೊಳಿಸಬೇಕೆಂದು ಚಾಪಗಾಂವ ಗ್ರಾಮಸ್ಥರ ಸಮಿತಿ ಮನವಿ ಮಾಡಿದೆ.
