खानापूर

खानापूर अपघातात बाप-लेकाचा दुर्दैवी अंत: भरधाव वाहनाच्या धडकेत दोन बळी | ಖಾನಾಪುರದಲ್ಲಿ ಭೀಕರ ಅಪಘಾತ: ಅಪರಿಚಿತ ವಾಹನ ಡಿಕ್ಕಿಯಾಗಿ ತಂದೆ-ಮಗ ಸಾವು

खानापूर: तालुक्यातील लोकोळी क्रॉस ते तोपिनकट्टी मार्गावर सोमवारी सकाळी झालेल्या भीषण अपघातात लक्केबैल येथील बाप-लेकाचा दुर्दैवी मृत्यू झाला. अज्ञात वाहनाने दुचाकीला जोरदार धडक दिल्याने हा अपघात घडला असून, या घटनेमुळे लक्केबैल आणि लोकोळी परिसरात तीव्र हळहळ व्यक्त होत आहे.

अपघाताचा तपशील

  • मृत व्यक्ती: पुंडलिक अशोक नांदुरकर (वय २३, जागीच मृत्यू) आणि त्यांचे वडील अशोक नांदुरकर (वय ६०, उपचारादरम्यान मृत्यू). दोघेही रा. लक्केबैल.
  • वेळ व ठिकाण: सोमवारी सकाळी ७:०० वाजण्याच्या सुमारास, लोकोळी क्रॉस–तोपिनकट्टी मार्गावरील एका धोकादायक वळणावर.
  • घटनाक्रम: पुंडलिक आणि अशोक नांदुरकर हे दोघे दुचाकीने कामासाठी बेळगावच्या दिशेने निघाले होते. या दरम्यान समोरून आलेल्या भरधाव अज्ञात टेम्पोने त्यांच्या दुचाकीला भीषण धडक दिली.

धडक आणि पोलिसांची कारवाई

धडक इतकी जोरदार होती की पुंडलिक यांच्या डोक्याला गंभीर दुखापत होऊन त्यांचा घटनास्थळीच मृत्यू झाला. तर गंभीर जखमी झालेल्या अशोक नांदुरकर यांना नागरिकांनी तातडीने रुग्णालयात दाखल केले; मात्र उपचारादरम्यान त्यांची प्राणज्योत मालवली.

अपघातानंतर अज्ञात टेम्पो चालक वाहनासह घटनास्थळावरून पसार झाला आहे. घटनास्थळी खानापूर पोलीस ठाण्याचे निरीक्षक लालसाब गोवंडी यांनी भेट देऊन पंचनामा केला असून, फरार चालकाचा व वाहनाचा शोध पोलीस घेत आहेत.

नांदुरकर कुटुंबावर दुःखाचा डोंगर

पुंडलिक नांदुरकर हे उद्यमबाग औद्योगिक क्षेत्रात कामाला जात होते, तर वडील अशोक हे गवंडी काम करून कुटुंबाचा उदरनिर्वाह चालवत होते. एकाच अपघातात घरातील दोन कमावत्या व्यक्तींचा अंत झाल्याने नांदुरकर कुटुंबावर दुःखाचा डोंगर कोसळला आहे.

ಖಾನಾಪುರದಲ್ಲಿ ಭೀಕರ ಅಪಘಾತ: ಅಪರಿಚಿತ ವಾಹನ ಡಿಕ್ಕಿಯಾಗಿ ತಂದೆ-ಮಗ ಸಾವು

ಖಾನಾಪುರ ತಾಲೂಕಿನ ಲೋಕೋಳಿ ಕ್ರಾಸ್ ಮತ್ತು ತೋಪಿನಕಟ್ಟಿ ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಕ್ಕೇಬೈಲ್ ನಿವಾಸಿಗಳಾದ ತಂದೆ ಮತ್ತು ಮಗ ಇಬ್ಬರೂ ಮೃತರಾಗಿದ್ದಾರೆ. ವೇಗವಾಗಿ ಬಂದ ಅಪರಿಚಿತ ವಾಹನವು ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಗ್ರಾಮಗಳಲ್ಲಿ ತೀವ್ರ ಶೋಕ ಆವರಿಸಿದೆ.

ಘಟನೆಯ ವಿವರ

  • ಮೃತರು: ಪುಂಡಲಿಕ ಅಶೋಕ ನಾಂದುರಕರ (೨೩ ವರ್ಷ, ಸ್ಥಳದಲ್ಲೇ ಸಾವು) ಮತ್ತು ಅವರ ತಂದೆ ಅಶೋಕ ನಾಂದುರಕರ (೬೦ ವರ್ಷ, ಚಿಕಿತ್ಸೆ ಫಲಿಸದೇ ಸಾವು).
  • ಸಮಯ ಮತ್ತು ಸ್ಥಳ: ಸೋಮವಾರ ಬೆಳಿಗ್ಗೆ ಸುಮಾರು ೭:೦೦ ಗಂಟೆಗೆ, ಲೋಕೋಳಿ ಕ್ರಾಸ್–ತೋಪಿನಕಟ್ಟಿ ರಸ್ತೆಯ ಅಪಾಯಕಾರಿ ತಿರುವಿನಲ್ಲಿ.
  • ಸಂದರ್ಭ: ಪುಂಡಲಿಕ ಮತ್ತು ಅಶೋಕ ಅವರು ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಬೆಳಗಾವಿಯತ್ತ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ವೇಗದ ಅಪರಿಚಿತ ಟೆಂಪೋ ಇವರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.

ಅಪಘಾತ ಮತ್ತು ಪೊಲೀಸ್ ತನಿಖೆ

ಡಿಕ್ಕಿಯ ರಭಸಕ್ಕೆ ಪುಂಡಲಿಕ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು. ತೀವ್ರವಾಗಿ ಗಾಯಗೊಂಡಿದ್ದ ತಂದೆ ಅಶೋಕ ಅವರನ್ನು ಸಾರ್ವಜನಿಕರು ತಕ್ಷಣ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೊನೆಯುಸಿರೆಳೆದರು.

ಅಪಘಾತ ಎಸಗಿದ ಟೆಂಪೋ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಖಾನಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಾಲ್ ಸಾಬ್ ಗೌಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಹಾಗೂ ಪಂಚನಾಮೆ ನಡೆಸಿದ್ದು, ಪರಾರಿಯಾದ ವಾಹನ ಮತ್ತು ಚಾಲಕನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

ಕುಟುಂಬಕ್ಕೆ ಭಾರಿ ಆಘಾತ

ಮೃತ ಪುಂಡಲಿಕ ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಅಶೋಕ ಗಾರೆ ಕೆಲಸದ ಮೂಲಕ ಕುಟುಂಬವನ್ನು ಸಲಹುತ್ತಿದ್ದರು. ಒಂದೇ ಅಪಘಾತದಲ್ಲಿ ಮನೆಯ ಇಬ್ಬರು ದುಡಿಯುವ ವ್ಯಕ್ತಿಗಳು ಸಾವನ್ನಪ್ಪಿರುವುದರಿಂದ ನಾಂದುರಕರ ಕುಟುಂಬ ಬೀದಿಗೆ ಬಿದ್ದಂತಾಗಿದ್ದು, ಇಡೀ ತಾಲೂಕಿನಲ್ಲಿ ತೀವ್ರ ಕಂಬನಿ ಮಿಡಿಯಲಾಗುತ್ತಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या