रस्ता चुकले, रात्री जंगलात अडकले; पाच विद्यार्थ्यांची सुटका, गुन्हा दाखल | ದಾರಿ ತಪ್ಪಿ, ರಾತ್ರಿ ಕಾಡಿನಲ್ಲಿ ಸಿಲುಕಿದ ಐವರು ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ರಕ್ಷಣೆ
जांबोटी, 15 जुलै : गोवा वन विभागाने बंदी असलेल्या जळवणे धबधबा परिसरात पुन्हा एकदा विनापरवानगी प्रवेश केल्याप्रकरणी पाच विद्यार्थ्यांविरुद्ध वन्यजीव संरक्षण कायदा, 1972 अंतर्गत गुन्हा दाखल केला आहे.
मिळालेल्या माहितीनुसार, 14 जुलै 2026 रोजी संबंधित विद्यार्थी वन विभागाची आवश्यक परवानगी न घेता पारवाड मार्गे म्हादई वन्यजीव अभयारण्याच्या मुख्य (कोअर) क्षेत्रात प्रवेश करून जळवणे धबधबा पाहण्यासाठी गेले होते. मात्र, जळवणी नदीच्या काठावर पोहोचल्यानंतर नदीला आलेल्या मोठ्या पुरामुळे व तीव्र प्रवाहामुळे त्यांना पुढे जाता आले नाही. परतीच्या प्रवासात जंगलात त्यांचा रस्ता चुकला.
हरवलेल्या विद्यार्थ्यांची माहिती वन विभागाच्या 24*7 हेल्पलाइन क्रमांक 1926 वर मिळताच वन विभागाने तातडीने शोधमोहीम सुरू केली. रात्री सुमारे 10.30 वाजता पारवाड अँटी-पोचिंग कॅम्पच्या हद्दीत सर्व पाच विद्यार्थ्यांचा सुरक्षित शोध घेऊन त्यांची सुखरूप सुटका करण्यात आली.
चौकशीदरम्यान विद्यार्थ्यांनी सांगितले की, सोशल मीडियावरील तसेच काही वृत्तांमधील “जळवणे धबधबा २४ तास पर्यटकांसाठी खुला आहे” अशा दिशाभूल करणाऱ्या माहितीवर विश्वास ठेवून त्यांनी तेथे भेट दिली होती.
विद्यार्थ्यांनी वन विभागाची वैध परवानगी न घेता संरक्षित क्षेत्रात प्रवेश केल्यामुळे त्यांच्याविरुद्ध वन्यजीव संरक्षण कायदा, १९७२ अंतर्गत गुन्हा दाखल करण्यात आला आहे.
गोवा वन विभागाने नागरिकांना आवाहन केले आहे की, जळवणे धबधबा हा म्हादई वन्यजीव अभयारण्याच्या कोअर झोनमधील प्रतिबंधित व अतिधोकादायक परिसर आहे. सोशल मीडियावरील अप्रमाणित किंवा दिशाभूल करणाऱ्या माहितीवर विश्वास ठेवू नये. वन विभागाने अधिकृतपणे परवानगी दिलेल्या ठिकाणांनाच भेट द्यावी. संरक्षित क्षेत्रात विनापरवानगी प्रवेश करणे हा कायद्याने दंडनीय गुन्हा आहे.
ಕನ್ನಡ ಸುದ್ದಿ
ಗೋವಾ, ಜುಲೈ 15: ಗೋವಾ ಅರಣ್ಯ ಇಲಾಖೆ, ಮ್ಹಾದೈ ವನ್ಯಜೀವಿ ಅಭಯಾರಣ್ಯದ ಕೋರ್ ವಲಯದಲ್ಲಿರುವ ನಿಷೇಧಿತ ಜಲವಣೆ ಜಲಪಾತ ಪ್ರದೇಶಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಿದ್ದ ಐವರು ವಿದ್ಯಾರ್ಥಿಗಳ ವಿರುದ್ಧ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಜುಲೈ 14, 2026ರಂದು ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಕಡ್ಡಾಯ ಅನುಮತಿ ಪಡೆಯದೆ ಪರ್ವಾಡ್ ಮಾರ್ಗವಾಗಿ ಅಭಯಾರಣ್ಯದ ಕೋರ್ ವಲಯಕ್ಕೆ ಪ್ರವೇಶಿಸಿ ಜಲವಣೆ ಜಲಪಾತಕ್ಕೆ ತೆರಳಿದ್ದರು. ಜಲವಾಣಿ ನದಿಯ ದಡ ತಲುಪಿದ ಬಳಿಕ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಪ್ರವಾಹ ತೀವ್ರವಾಗಿದ್ದ ಕಾರಣ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಹಿಂತಿರುಗುವ ವೇಳೆ ಅವರು ಕಾಡಿನಲ್ಲಿ ದಾರಿ ತಪ್ಪಿದರು.
ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಕುರಿತು ಅರಣ್ಯ ಇಲಾಖೆಯ 24×7 ಸಹಾಯವಾಣಿ 1926ಕ್ಕೆ ಮಾಹಿತಿ ಬಂದ ತಕ್ಷಣ ಇಲಾಖೆ ತುರ್ತು ಶೋಧ ಕಾರ್ಯಾಚರಣೆ ಆರಂಭಿಸಿತು. ರಾತ್ರಿ ಸುಮಾರು 10.30 ಗಂಟೆಗೆ ಪರ್ವಾಡ್ ಆಂಟಿ-ಪೋಚಿಂಗ್ ಕ್ಯಾಂಪ್ ವ್ಯಾಪ್ತಿಯಲ್ಲಿ ಐವರನ್ನೂ ಸುರಕ್ಷಿತವಾಗಿ ಪತ್ತೆಹಚ್ಚಿ ರಕ್ಷಿಸಲಾಯಿತು.
ವಿಚಾರಣೆ ವೇಳೆ, “ಜಲವಣೆ ಜಲಪಾತವು 24×7 ಸಾರ್ವಜನಿಕರಿಗೆ ಮುಕ್ತವಾಗಿದೆ” ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಹಾಗೂ ಕೆಲವು ಸುದ್ದಿಗಳಲ್ಲಿನ ಮಾಹಿತಿಯನ್ನು ನಂಬಿ ತಾವು ಅಲ್ಲಿಗೆ ತೆರಳಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಮಾನ್ಯ ಅನುಮತಿ ಪಡೆಯದೆ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಿದ್ದ ಕಾರಣ, ಐವರು ವಿದ್ಯಾರ್ಥಿಗಳ ವಿರುದ್ಧ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ.
ಗೋವಾ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಜಲವಣೆ ಜಲಪಾತವು ಮ್ಹಾದೈ ವನ್ಯಜೀವಿ ಅಭಯಾರಣ್ಯದ ಕೋರ್ ವಲಯದಲ್ಲಿರುವ ನಿಷೇಧಿತ ಹಾಗೂ ಅತ್ಯಂತ ಅಪಾಯಕರ ಪ್ರದೇಶವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪರಿಶೀಲಿಸದ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನಂಬಬಾರದು. ಅರಣ್ಯ ಇಲಾಖೆ ಅಧಿಕೃತವಾಗಿ ಅನುಮತಿಸಿರುವ ಸ್ಥಳಗಳಿಗೆ ಮಾತ್ರ ಭೇಟಿ ನೀಡಬೇಕು. ಸಂರಕ್ಷಿತ ಪ್ರದೇಶಗಳಿಗೆ ಅನುಮತಿಯಿಲ್ಲದೆ ಪ್ರವೇಶಿಸುವುದು ಕಾನೂನುಬದ್ಧವಾಗಿ ದಂಡನೀಯ ಅಪರಾಧವಾಗಿದೆ.
