खानापूर: पोलिसांतर्फे अमली पदार्थ विरोधी जनजागृती मोहीम संपन्न | ಖಾನಾಪೂರ: ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ
खानापूर: आंतरराष्ट्रीय अमली पदार्थ विरोधी दिनाचे औचित्य साधून खानापूर पोलीस ठाण्याच्या वतीने शहरातील विविध महाविद्यालयांत विद्यार्थ्यांसाठी विशेष जनजागृती कार्यक्रम राबविण्यात आला. या अभियानाद्वारे तरुण पिढीला व्यसनांपासून दूर राहून निरोगी समाज घडविण्याचे आवाहन करण्यात आले.
शहरातील के.एल.ई. महाविद्यालय आणि मराठा मंडळ महाविद्यालयात या मोहिमेचे आयोजन करण्यात आले होते. याप्रसंगी खानापूरचे पीएसआय निरंजनस्वामी, प्रोबेशनरी पीएसआय बसवराज आणि शिल्पा यांनी उपस्थित विद्यार्थ्यांना अमली पदार्थ विरोधी प्रतिज्ञा दिली.
व्यसनांपासून दूर राहण्याचा संदेश:
अमली पदार्थांच्या घातक परिणामांची माहिती देत अधिकाऱ्यांनी सांगितले की, विद्यार्थ्यांनी अशा घातक व्यसनांपासून दूर राहून देशाचे सुजाण आणि जबाबदार नागरिक बनावे. या कार्यक्रमाच्या यशस्वीतेसाठी पोलीस कर्मचारी सिदराम हसारे यांनी विशेष परिश्रम घेतले. या उपक्रमामुळे विद्यार्थ्यांमध्ये अमली पदार्थांच्या दुष्परिणामांबाबत मोठी जागरूकता निर्माण झाली असून, विद्यार्थ्यांनी व्यसनमुक्त समाजाच्या निर्मितीसाठी संकल्प केला आहे.ಖಾನಾಪೂರ: ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ
ಖಾನಾಪೂರ: ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ
ಖಾನಾಪೂರ: ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಖಾನಾಪೂರ ಪೊಲೀಸ್ ಠಾಣೆಯ ವತಿಯಿಂದ ಪಟ್ಟಣದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಯುವ ಸಮುದಾಯವು ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕೆಂಬ ಸಂದೇಶವನ್ನು ಪೊಲೀಸರು ರವಾನಿಸಿದರು.
ಪಟ್ಟಣದ ಕೆ.ಎಲ್.ಇ. ಕಾಲೇಜು ಹಾಗೂ ಮರಾಠ ಮಂಡಳ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ ಖಾನಾಪೂರ ಪಿಎಸ್ಐ ನಿರಂಜನಸ್ವಾಮಿ, ಪ್ರೊಬೆಷನರಿ ಪಿಎಸ್ಐಗಳಾದ ಬಸವರಾಜ ಮತ್ತು ಶಿಲ್ಪಾ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಣ:
ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ಯುವಜನತೆ ಇಂತಹ ಪಿಡುಗುಗಳಿಂದ ದೂರವಿದ್ದು ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು. ಪೊಲೀಸ್ ಸಿಬ್ಬಂದಿ ಸಿದ್ರಾಮ ಹಸಾರೆ ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು.

