खानापूर तालुक्यात भव्य ‘घरगुती मखर सजावट स्पर्धा 2026’; तब्बल 75 हजारांची बक्षिसे | ಖಾನಾಪುರ ತಾಲೂಕಿನಲ್ಲಿ ಭವ್ಯ ‘ಮನೆಮನೆಯ ಮಖರ ಅಲಂಕಾರ ಸ್ಪರ್ಧೆ 2026’; ಬರೋಬ್ಬರಿ ₹75 ಸಾವಿರದ ಭರ್ಜರಿ ಬಹುಮಾನಗಳು
शहरी व ग्रामीण विभागांसाठी प्रत्येकी 35 हजारांची रोख बक्षिसे; ट्रॉफी, सन्मानचिन्ह व प्रमाणपत्राने होणार गौरव
खानापूर : गणेशोत्सवाच्या निमित्ताने घरगुती गणपतीची आकर्षक मखर सजावट आणि सुंदर देखावे साकारणाऱ्या कुटुंबांना, युवकांना व गणेशभक्तांना हक्काचे व्यासपीठ मिळावे, त्यांच्या कलागुणांना तालुकास्तरावर ओळख मिळावी, या उद्देशाने ‘खानापूरवार्ता’ आयोजित व लोकप्रिय आमदार श्री. विठ्ठलराव हलगेकर पुरस्कृत ‘घरगुती मखर सजावट स्पर्धा 2026’ आयोजित करण्यात आली आहे.
या स्पर्धेत शहरी आणि ग्रामीण असे दोन स्वतंत्र विभाग करण्यात आले असून, दोन्ही विभागांसाठी प्रत्येकी 35000 रुपयांची रोख बक्षिसे देण्यात येणार आहेत. विजेत्यांना बक्षिसांसोबत ट्रॉफी, सन्मानचिन्ह आणि प्रमाणपत्र देऊन गौरविण्यात येणार आहे.
स्पर्धेतील सहभागींच्या मखर सजावटीचे फोटो आणि व्हिडिओ ‘खानापूरवार्ता’च्या Instagram अकाउंटवर व खानापूरवार्ताच्या सर्व 40 व्हॉट्सॲप ग्रुप्सवर पब्लिश करण्यात येणार आहेत. त्यामुळे गावागावातील उत्कृष्ट कलाकुसर संपूर्ण तालुक्यात पोहोचण्याची संधी स्पर्धकांना मिळणार आहे.
लाईक-शेअरवर नाही, प्रत्यक्ष कलेवर होणार निवड
या स्पर्धेचे विशेष वैशिष्ट्य म्हणजे विजेत्यांची निवड केवळ लाईक, शेअर किंवा व्ह्यूजच्या आधारे केली जाणार नाही. मखर सजावटीची कल्पकता, कलाकुसर, आकर्षकता, पर्यावरणपूरकता, धार्मिक-सांस्कृतिक संदेश आणि एकूण सादरीकरण या बाबींचा विचार करून परीक्षकांकडून क्रमांक निश्चित केले जाणार आहेत.
स्पर्धेचा भव्य बक्षीस वितरण सोहळा आमदार श्री. विठ्ठलराव हलगेकर यांच्या उपस्थितीत आयोजित करण्यात येणार असून, विजेत्यांसह सहभागींच्या कलागुणांना प्रोत्साहन देण्यात येणार आहे.
खानापूर तालुक्यातील सर्व गणेशभक्त, मुले आणि युवकांनी उत्स्फूर्तपणे सहभागी होऊन आपली मखर सजावट संपूर्ण तालुक्यापर्यंत पोहोचवावी आणि आपल्या कलेला योग्य व्यासपीठ मिळवून द्यावे, असे आवाहन ‘खानापूरवार्ता’कडून व आमदार विठ्ठलराव हलगेकर यांच्याकडून करण्यात आले आहे.
🏆 ಖಾನಾಪುರ ತಾಲೂಕಿನಲ್ಲಿ ಭವ್ಯ ‘ಮನೆಮನೆಯ ಮಖರ ಅಲಂಕಾರ ಸ್ಪರ್ಧೆ 2026’
ನಗರ ಮತ್ತು ಗ್ರಾಮೀಣ ವಿಭಾಗಗಳಿಗೆ ತಲಾ ₹35 ಸಾವಿರ ಬಹುಮಾನ; ಟ್ರೋಫಿ, ಸನ್ಮಾನ ಚಿಹ್ನೆ ಹಾಗೂ ಪ್ರಮಾಣಪತ್ರದೊಂದಿಗೆ ಗೌರವ
ಖಾನಾಪುರ : ಗಣೇಶೋತ್ಸವದ ಸಂದರ್ಭದಲ್ಲಿ ಮನೆಮನೆಯ ಗಣಪತಿ ಮೂರ್ತಿಗೆ ಆಕರ್ಷಕ ಮಖರ ಅಲಂಕಾರ ಹಾಗೂ ಸುಂದರ ದೃಶ್ಯಗಳನ್ನು ನಿರ್ಮಿಸುವ ಮಕ್ಕಳು, ಯುವಕರು ಮತ್ತು ಗಣೇಶಭಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಕಲಾ ಪ್ರತಿಭೆಗೆ ತಾಲೂಕು ಮಟ್ಟದಲ್ಲಿ ಗುರುತಿನ ಚಿಹ್ನೆ ದೊರಕಿಸಿಕೊಡುವ ಉದ್ದೇಶದಿಂದ ‘ಖಾನಾಪುರವಾರ್ತಾ’ ಆಯೋಜಿಸಿರುವ ಹಾಗೂ ಜನಪ್ರಿಯ ಶಾಸಕ ಶ್ರೀ. ವಿಠ್ಠಲರಾವ್ ಹಳಗೇಕರ ಅವರ ಪ್ರಾಯೋಜಕತ್ವದಲ್ಲಿ ‘ಮನೆಮನೆಯ ಮಖರ ಅಲಂಕಾರ ಸ್ಪರ್ಧೆ 2026’ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ನಗರ ಮತ್ತು ಗ್ರಾಮೀಣ ಎಂದು ಎರಡು ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಎರಡೂ ವಿಭಾಗಗಳಿಗೆ ತಲಾ ₹35,000 ಮೌಲ್ಯದ ವಿವಿಧ ಬಹುಮಾನಗಳನ್ನು ನೀಡಲಾಗುವುದು. ವಿಜೇತರಿಗೆ ಬಹುಮಾನಗಳ ಜೊತೆಗೆ ಟ್ರೋಫಿ, ಸನ್ಮಾನ ಚಿಹ್ನೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರ ಮಖರ ಅಲಂಕಾರದ ಫೋಟೋಗಳು ಹಾಗೂ ವಿಡಿಯೋಗಳನ್ನು ‘ಖಾನಾಪುರವಾರ್ತಾ’ Instagram ಖಾತೆಯಲ್ಲಿ ಪ್ರಕಟಿಸಲಾಗುವುದು. ಇದರಿಂದ ಗ್ರಾಮೀಣ ಭಾಗ ಸೇರಿದಂತೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿರುವ ಅತ್ಯುತ್ತಮ ಕಲಾಕೃತಿಗಳು ಇಡೀ ತಾಲೂಕಿನ ಜನರಿಗೆ ತಲುಪಲಿವೆ.
ಲೈಕ್-ಶೇರ್ ಆಧಾರದಲ್ಲಲ್ಲ, ಕಲೆಯ ಆಧಾರದ ಮೇಲೆ ಆಯ್ಕೆ
ಈ ಸ್ಪರ್ಧೆಯ ವಿಶೇಷತೆಯೆಂದರೆ ವಿಜೇತರ ಆಯ್ಕೆಯನ್ನು ಕೇವಲ ಲೈಕ್, ಶೇರ್ ಅಥವಾ ವೀಕ್ಷಣೆಗಳ ಆಧಾರದ ಮೇಲೆ ಮಾಡಲಾಗುವುದಿಲ್ಲ. ಮಖರ ಅಲಂಕಾರದ ಸೃಜನಶೀಲತೆ, ಕಲಾಕೌಶಲ್ಯ, ಆಕರ್ಷಕತೆ, ಪರಿಸರ ಸ್ನೇಹಿ ಅಲಂಕಾರ, ಧಾರ್ಮಿಕ-ಸಾಂಸ್ಕೃತಿಕ ಸಂದೇಶ ಹಾಗೂ ಒಟ್ಟಾರೆ ಪ್ರಸ್ತುತಪಡಿಸುವಿಕೆಯಂತಹ ಅಂಶಗಳನ್ನು ಪರಿಗಣಿಸಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.
ಸ್ಪರ್ಧೆಯ ಭವ್ಯ ಬಹುಮಾನ ವಿತರಣಾ ಸಮಾರಂಭವು ಶಾಸಕ ಶ್ರೀ. ವಿಠ್ಠಲರಾವ್ ಹಳಗೇಕರ ಅವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ವಿಜೇತರು ಹಾಗೂ ಭಾಗವಹಿಸಿದವರ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುವುದು.
ಖಾನಾಪುರ ತಾಲೂಕಿನ ಎಲ್ಲಾ ಗಣೇಶಭಕ್ತರು, ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಖರ ಅಲಂಕಾರವನ್ನು ಇಡೀ ತಾಲೂಕಿನ ಜನರಿಗೆ ಪರಿಚಯಿಸುವ ಮೂಲಕ ತಮ್ಮ ಕಲೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಳ್ಳಬೇಕು, ಎಂದು ‘ಖಾನಾಪುರವಾರ್ತಾ’ ಮನವಿ ಮಾಡಿದೆ.
