निट्टूर मराठी शाळेत स्वयंपाकगृह व वर्गखोल्यांचा अभाव; विद्यार्थ्यांचे हाल | ನಿಟ್ಟೂರಿನ ಮರಾಠಿ ಶಾಲೆಯಲ್ಲಿ ಅಡುಗೆ ಕೋಣೆ, ತರಗತಿ ಕೊಠಡಿಗಳ ಕೊರತೆ; ವಿದ್ಯಾರ್ಥಿಗಳ ಪರದಾಟ
SDMC ची तालुका पंचायतीकडे धाव; EO रमेश मेत्री यांच्याकडून सकारात्मक आश्वासन
निट्टूर, ता. खानापूर : निट्टूर येथील सरकारी पूर्ण प्राथमिक मराठी शाळेत गेल्या दोन ते तीन वर्षांपासून स्वयंपाकगृह (किचन शेड) तसेच सुरक्षित वर्गखोल्यांचा अभाव असल्याने विद्यार्थ्यांना मोठ्या अडचणींचा सामना करावा लागत आहे. याबाबत ग्रामपंचायतीकडे वारंवार लेखी निवेदने देऊनही ठोस कार्यवाही न झाल्याने अखेर ग्रामस्थ व शाळा व्यवस्थापन समितीच्या (SDMC) सदस्यांनी तालुका पंचायत खानापूरचे कार्यकारी अधिकारी (EO) रमेश मेत्री यांची भेट घेऊन निवेदन सादर केले.

निट्टूरच्या या शाळेत इयत्ता पहिली ते सातवीपर्यंत सात वर्ग आहेत. मात्र, विद्यार्थ्यांसाठी केवळ चारच वर्गखोल्या सुरक्षित असल्याने सात वर्गांतील विद्यार्थ्यांना उपलब्ध चार खोल्यांमध्ये बसवावे लागत आहे. त्यामुळे अध्यापन प्रक्रियेत अडथळे निर्माण होत असून विद्यार्थ्यांना गैरसोयीचा सामना करावा लागत आहे.
याशिवाय, शाळेतील मध्यान्ह भोजनाचा स्वयंपाक करण्यासाठी स्वतंत्र स्वयंपाकगृह नसल्याने उघड्यावर स्वयंपाक करावा लागत आहे. विशेषतः पावसाळ्यात स्वच्छता, अन्नसुरक्षा आणि विद्यार्थ्यांच्या आरोग्याचा प्रश्न गंभीर बनत आहे.
ग्रामस्थांनी दिलेल्या निवेदनाची EO रमेश मेत्री यांनी गांभीर्याने दखल घेतली. संबंधित अभियंत्यांना तातडीने शाळेची पाहणी करून अहवाल सादर करण्याच्या सूचना त्यांनी दिल्या. तसेच येत्या काही दिवसांत स्वयंपाकगृह आणि अतिरिक्त वर्गखोल्यांच्या मंजुरीबाबत सकारात्मक कार्यवाही करण्याचे आश्वासन दिल्याची माहिती SDMC सदस्यांनी दिली.
यावेळी निवेदन देताना रुद्रप्पा पाटील, नागराज देसाई, संतोष चोपडे, गजानन गुरव, परशराम नारायण पाटील, जोतिबा मुतगेकर, मारुती नार्वेकर, कल्लाप्पा सुतार, परशराम कल्लाप्पा पाटील, दिलीप पाटील, चेतन पाटील, शेखर पाटील यांच्यासह ग्रामस्थ व शाळा व्यवस्थापन समितीचे सदस्य मोठ्या संख्येने उपस्थित होते. EO यांनी दिलेल्या सकारात्मक आश्वासनामुळे ग्रामस्थांमध्ये समाधान व्यक्त होत आहे.
ನಿಟ್ಟೂರಿನ ಮರಾಠಿ ಶಾಲೆಯಲ್ಲಿ ಅಡುಗೆ ಕೋಣೆ, ತರಗತಿ ಕೊಠಡಿಗಳ ಕೊರತೆ; ವಿದ್ಯಾರ್ಥಿಗಳ ಪರದಾಟ
SDMCಯಿಂದ ತಾಲೂಕು ಪಂಚಾಯಿತಿಗೆ ಮನವಿ; EO ರಮೇಶ್ ಮೇತ್ರಿ ಅವರಿಂದ ಸಕಾರಾತ್ಮಕ ಭರವಸೆ
ನಿಟ್ಟೂರು, ತಾ. ಖಾನಾಪುರ : ನಿಟ್ಟೂರು ಗ್ರಾಮದ ಸರ್ಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಅಡುಗೆ ಕೋಣೆ (ಕಿಚನ್ ಶೆಡ್) ಹಾಗೂ ಸುರಕ್ಷಿತ ತರಗತಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ತಾಲೂಕು ಪಂಚಾಯಿತಿ ಖಾನಾಪುರದ ಕಾರ್ಯನಿರ್ವಾಹಕ ಅಧಿಕಾರಿ (EO) ರಮೇಶ್ ಮೇತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು ಏಳು ತರಗತಿಗಳಿವೆ. ಆದರೆ ವಿದ್ಯಾರ್ಥಿಗಳಿಗಾಗಿ ಕೇವಲ ನಾಲ್ಕು ತರಗತಿ ಕೊಠಡಿಗಳು ಮಾತ್ರ ಸುರಕ್ಷಿತವಾಗಿವೆ. ಹೀಗಾಗಿ ಏಳು ತರಗತಿಯ ವಿದ್ಯಾರ್ಥಿಗಳನ್ನು ನಾಲ್ಕು ಕೊಠಡಿಗಳಲ್ಲೇ ಕುಳ್ಳಿರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೋಧನಾ ಪ್ರಕ್ರಿಯೆಗೂ ಅಡಚಣೆ ಉಂಟಾಗುತ್ತಿದೆ.
ಇದಲ್ಲದೆ, ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪ್ರತ್ಯೇಕ ಅಡುಗೆ ಕೋಣೆ ಇಲ್ಲದ ಕಾರಣ ತೆರೆದ ಜಾಗದಲ್ಲೇ ಅಡುಗೆ ಮಾಡಬೇಕಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಂಭೀರ ಆತಂಕ ಎದುರಾಗಿದೆ.
ಗ್ರಾಮಸ್ಥರು ಸಲ್ಲಿಸಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ EO ರಮೇಶ್ ಮೇತ್ರಿ ಅವರು, ಸಂಬಂಧಿಸಿದ ಎಂಜಿನಿಯರ್ಗಳಿಗೆ ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಮುಂದಿನ ಕೆಲವು ದಿನಗಳಲ್ಲಿ ಅಡುಗೆ ಕೋಣೆ ಹಾಗೂ ಹೆಚ್ಚುವರಿ ತರಗತಿ ಕೊಠಡಿಗಳ ಮಂಜೂರಾತಿಗೆ ಸಕಾರಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು SDMC ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರುದ್ರಪ್ಪ ಪಾಟೀಲ್, ನಾಗರಾಜ ದೇಸಾಯಿ, ಸಂತೋಷ್ ಚೋಪಡೆ, ಗಜಾನನ ಗುರ್ವ, ಪರಶರಾಮ ನಾರಾಯಣ ಪಾಟೀಲ್, ಜೋತಿಬಾ ಮುತಗೆಕರ, ಮಾರುತಿ ನಾರ್ವೇಕರ್, ಕಲ್ಲಪ್ಪ ಸುತಾರ್, ಪರಶರಾಮ ಕಲ್ಲಪ್ಪ ಪಾಟೀಲ್, ದಿಲೀಪ್ ಪಾಟೀಲ್, ಚೇತನ ಪಾಟೀಲ್, ಶೇಖರ್ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲಾ ನಿರ್ವಹಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. EO ನೀಡಿದ ಸಕಾರಾತ್ಮಕ ಭರವಸೆಯಿಂದ ಗ್ರಾಮಸ್ಥರಲ್ಲಿ ಸಮಾಧಾನ ವ್ಯಕ್ತವಾಗಿದೆ.
