खानापूर

रस्ते, शिक्षण, आरोग्य आणि अतिक्रमणांच्या समस्यांवर ठोस तोडग्याची ग्वाही: आमदार विठ्ठल हलगेकर यांचे सर्वपक्षीय बैठकीत महत्त्वपूर्ण आवाहन | ಖಾನಾಪುರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜಕೀಯ ಬದಿಗಿಡಿ; ಎಲ್ಲರೂ ಒಟ್ಟಾಗಿ ಬನ್ನಿ!

खानापूरच्या सर्वांगीण विकासासाठी राजकारण बाजूला ठेवा; सर्वांनी एकत्र या!

खानापूर / प्रतिनिधी खानापूर शहर व तालुक्यातील प्रलंबित समस्या, नागरी प्रश्न आणि भविष्यातील विकासकामांवर सविस्तर चर्चा करून त्यावर ठोस तोडगा काढण्यासाठी श्री राजा शिवछत्रपती स्मारकाजवळील  चव्हाण सभागृहात महत्त्वपूर्ण सर्वपक्षीय बैठक पार पडली. आमदार विठ्ठलराव हलगेकर यांच्या अध्यक्षतेखाली झालेल्या या बैठकीस विविध राजकीय पक्षांचे प्रमुख, स्थानिक नेते, अधिकारी, पत्रकार आणि नागरिक मोठ्या संख्येने उपस्थित होते. खानापूरचा विकास हा कोणत्या एका पक्षाचा किंवा व्यक्तीचा नसून संपूर्ण तालुक्याचा विषय आहे, त्यामुळे राजकीय मतभेद बाजूला ठेवून सर्वांनी सहकार्याची भूमिका घ्यावी, असे आवाहन आमदारांनी केले.

ग्रामीण भागाचा कायापालट व विकास निधी

ग्रामीण भागातील मूलभूत समस्या सोडवण्यासाठी प्रत्येक ग्रामपंचायत पातळीवर प्रलंबित कामांची यादी तयार केली जाईल. ‘व्हीबीव्हीजी रामजी’ योजनेंतर्गत प्रत्येक ग्रामपंचायतीला कोटी रुपयांचा निधी उपलब्ध करून देऊन समस्या सोडवण्याचा प्रयत्न केला जाईल. तसेच या योजनेच्या संदर्भात प्रत्येक ग्रामपंचायत पातळीवर ‘जनस्पंदन’ कार्यक्रम आयोजित करून थेट नागरिकांचे प्रश्न जाणून घेतले जातील, असे आमदार हलगेकर यांनी स्पष्ट केले.

पायाभूत सुविधा आणि रखडलेल्या प्रकल्पांना गती मासळी मार्केट परिसरातील रखडलेल्या रस्त्याबाबत चर्चा झाली असून, गणेश चतुर्थीपूर्वी तात्पुरत्या रस्त्याची सोय करण्यासाठी प्रयत्न सुरू आहेत. जुन्या न्यायालयाच्या आवारातील जागेचा वापर करून आधुनिक व्यापारी संकुल उभारले जाईल. याशिवाय तालुक्यातील ‘इको-सेंसिटिव्ह झोन’मध्ये रखडलेल्या सुमारे ८०६ किमी रस्त्यांच्या कामासाठी ‘एफसीए’ (Forest Conservation Act) मंजुरी मिळवण्यासाठी प्रशासकीय पातळीवर सातत्याने पाठपुरावा सुरू आहे.

शिक्षण आणि रोजगाराला प्राधान्य

तालुक्यातील शैक्षणिक विकासाला प्राधान्य देताना मराठी माध्यमातील सुमारे २०० शिक्षकांच्या पदभरतीसाठी थेट मुख्यमंत्र्यांकडे पत्रव्यवहार केल्याचे आमदारांनी नमूद केले. तसेच तालुका पंचायत क्षेत्रातील सरकारी जागांवर व्यापारी संकुल, आधुनिक भाजी मार्केट, हायमास्ट दिवे, बसस्थानकाचा विकास आणि तरुणांसाठी नवीन रोजगार निर्माण करण्याबाबत उपस्थितांनी दिलेल्या सूचनांवर सकारात्मक कारवाईचे आश्वासन देण्यात आले.

पारदर्शकता आणि सर्वपक्षीय सहकार्य तालुक्यात अनेक विकासकामे झाली असली तरी आपण प्रसिद्धीच्या मागे न लागता कामाला प्राधान्य देत आहोत. भ्रष्टाचाराविरोधात प्रत्येकाने आवाज उठवला पाहिजे, असे मत व्यक्त करत शहराच्या सर्वांगीण विकासासाठी लोकप्रतिनिधी, प्रशासन आणि नागरिक यांच्यात योग्य समन्वय असणे आवश्यक असल्याचे प्रतिपादन आमदार हलगेकर यांनी केले. या बैठकीला माजी आमदार दिगंबर पाटील, तहसीलदार दूंडाप्पा कुमार यांच्यासह तालुक्यातील विविध संघटनांचे पदाधिकारी आणि स्थानिक नागरिक मोठ्या संख्येने उपस्थित होते.

ಖಾನಾಪುರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜಕೀಯ ಬದಿಗಿಡಿ; ಎಲ್ಲರೂ ಒಟ್ಟಾಗಿ ಬನ್ನಿ!

ಸರ್ವಪಕ್ಷ ಸಭೆಯಲ್ಲಿ ಶಾಸಕ ವಿಠ್ಠಲ ಹಲಗೇಕರ್ ಕರೆ: ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ಒತ್ತುವರಿ ತೆರವು ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ

ಖಾನಾಪುರ / ವರದಿಗಾರ ಖಾನಾಪುರ ನಗರ ಹಾಗೂ ತಾಲೂಕಿನ ಬಾಕಿ ಇರುವ ವಿವಿಧ ಪ್ರಮುಖ ನಗರಾಡಳಿತ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಸ್ಪಷ್ಟ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶ್ರೀ ರಾಜಾ ಶಿವಛತ್ರಪತಿ ಸ್ಮಾರಕದ ಬಳಿಯಿರುವ ದಿವಂಗತ ವಿಠ್ಠಲರಾವ್ ಚವಾಣ್ ಸಭಾಂಗಣದಲ್ಲಿ ಪ್ರಮುಖ ಸರ್ವಪಕ್ಷ ಸಭೆ ನಡೆಯಿತು.

ಖಾನಾಪುರ ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೆಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಮುಖಂಡರು, ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಖಾನಾಪುರದ ಅಭಿವೃದ್ಧಿಯು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾದುದಲ್ಲ, ಅದು ಇಡೀ ತಾಲೂಕಿನ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ; ಆದ್ದರಿಂದ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಭಿವೃದ್ಧಿ ವಿಷಯದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಗ್ರಾಮೀಣ ಭಾಗದ ಸುಧಾರಣೆ ಮತ್ತು ವಿಕಾಸ ನಿಧಿ ಗ್ರಾಮೀಣ ಪ್ರದೇಶಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಕಿ ಇರುವ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ‘ವಿಬಿವಿಜಿ ರಾಮ್‌ಜಿ’ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ಲಭ್ಯಗೊಳಿಸಿ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು. ಅಷ್ಟೇ ಅಲ್ಲದೆ, ಈ ಯೋಜನೆಯಡಿ ಸಾರ್ವಜನಿಕರ ದೂರುಗಳನ್ನು ನೇರವಾಗಿ ಆಲಿಸಲು ಶೀಘ್ರದಲ್ಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಜನಸ್ಪಂದನ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶಾಸಕ ಹಲಗೇಕರ್ ವಿವರಿಸಿದರು.

ಸ್ಥಗಿತಗೊಂಡ ಯೋಜನೆಗಳಿಗೆ ಮರುಜೀವ ಖಾನಾಪುರ ನಗರದ ಮೀನು ಮಾರುಕಟ್ಟೆ ಬಳಿಯ ಸ್ಥಗಿತಗೊಂಡ ರಸ್ತೆ ನಿರ್ಮಾಣ ಕಾಮಗಾರಿಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಗಣೇಶ ಚತುರ್ಥಿಗೂ ಮುನ್ನ ನಾಗರಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ರಸ್ತೆ ವ್ಯವಸ್ಥೆ ಕಲ್ಪಿಸಲು ರೈತರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇದಲ್ಲದೆ, ಹಳೆಯ ನ್ಯಾಯಾಲಯದ ಜಾಗವನ್ನು ಸೂಕ್ತವಾಗಿ ಬಳಸಿಕೊಂಡು ಆಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ತಾಲೂಕಿನ ಪರಿಸರ ಸೂಕ್ಷ್ಮ ವಲಯದಲ್ಲಿ (Eco-Sensitive Zone) ಬಾಕಿ ಇರುವ ಸುಮಾರು ೮೦೬ ಕಿಲೋಮೀಟರ್ ರಸ್ತೆ ಕಾಮಗಾರಿಗಳಿಗೆ ಅರಣ್ಯ ಸಂರಕ್ಷಣಾ ಕಾಯ್ದೆ (FCA) ಅಡಿಯಲ್ಲಿ ಅಗತ್ಯ ಅನುಮತಿ ಪಡೆಯಲು ಆಡಳಿತಾತ್ಮಕ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ ಮತ್ತು ಉದ್ಯೋಗಕ್ಕೆ ಮೊದಲ ಆದ್ಯತೆ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದ್ದು, ಮರಾಠಿ ಮಾಧ್ಯಮ ಶಾಲಾ ಹಂತದಲ್ಲಿ ಖಾಲಿ ಇರುವ ಸುಮಾರು ೨೦೦ ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು. ತಾಲೂಕು ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ವಾಣಿಜ್ಯ ಸಂಕೀರ್ಣ, ಹೈಟೆಕ್ ತರಕಾರಿ ಮಾರುಕಟ್ಟೆ, ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳು, ಬಸ್ ನಿಲ್ದಾಣದ ಅಭಿವೃದ್ಧಿ ಹಾಗೂ ಯುವಕರಿಗೆ ನೂತನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾರ್ವಜನಿಕರ ಸಲಹೆಗಳಿಗೆ ಧನಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಪಾರದರ್ಶಕತೆ ಮತ್ತು ಸರ್ವಪಕ್ಷಗಳ ಒಗ್ಗಟ್ಟು ತಾಲೂಕಿನಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆಯಾದರೂ ನಾವು ಪ್ರಚಾರಕ್ಕೆ ಆದ್ಯತೆ ನೀಡದೆ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ಧ್ವನಿ ಎತ್ತಬೇಕಿದೆ ಎಂದ ಅವರು, ನಗರದ ಸರ್ವಾಂಗೀಣ ವಿಕಾಸಕ್ಕಾಗಿ ಜನಪ್ರತಿನಿಧಿಗಳು, ಆಡಳಿತ ಯಂತ್ರ ಹಾಗೂ ಸಾರ್ವಜನಿಕರ ನಡುವೆ ಪರಸ್ಪರ ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿದರು.

ಈ ಸಭೆಯಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲ, ತಹಸೀಲ್ದಾರ್ ದೂಂದಪ್ಪ ಕುಮಾರ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या