खानापूर

स्वातंत्र्यानंतर पहिल्यांदाच कोकणवाडा गावात KSRTC बससेवा; ग्रामस्थ, विद्यार्थी आणि महिलांमध्ये आनंदोत्सव | ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೋಕಣವಾಡ ಗ್ರಾಮಕ್ಕೆ KSRTC ಬಸ್ ಸೇವೆ; ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರಲ್ಲಿ ಸಂಭ್ರಮ

खानापूर, दि. 24 ऑगस्ट 2026 : खानापूर तालुक्यातील दुर्गम कोकणवाडा गावाच्या सार्वजनिक वाहतुकीच्या दृष्टीने आज ऐतिहासिक दिवस ठरला. स्वातंत्र्यानंतर तब्बल 79 वर्षांनी प्रथमच या गावात कर्नाटक राज्य मार्ग परिवहन महामंडळाची (KSRTC) बससेवा सुरू झाली. बस गावात दाखल होताच ग्रामस्थ, विद्यार्थी आणि महिलांनी जल्लोषात स्वागत करत आनंद व्यक्त केला..

बेळगाव जिल्हा भाजपाच्या जनरल सेक्रेटरी सौ. धनश्री सरदेसाई आणि भाजपाचे राज्य कार्यकारिणी सदस्य श्री. प्रमोद कोचेरी यांच्या विशेष प्रयत्नातून तसेच परिवहन विभागाकडे केलेल्या सातत्यपूर्ण पाठपुराव्यामुळे ही बससेवा सुरू झाल्याचे सांगण्यात आले..

नवीन बससेवा मुघवडे–कोकणवाडा–निलावडे–खानापूर या मार्गावर धावणार आहे.

बस गावात दाखल होताच जल्लोष

अनेक वर्षांपासून कोकणवाडा गावातील नागरिक, विद्यार्थी आणि महिलांना सार्वजनिक वाहतुकीच्या सुविधेअभावी मोठ्या अडचणींचा सामना करावा लागत होता. विद्यार्थ्यांना शिक्षणासाठी, महिलांना बाजारपेठेत जाण्यासाठी तर रुग्णांना उपचारासाठी जवळच्या ठिकाणी जाण्यासाठी पायी किंवा खासगी वाहनांवर अवलंबून राहावे लागत होते.

आज KSRTC बस गावाच्या वेशीत दाखल होताच ग्रामस्थांनी टाळ्यांच्या कडकडाटात आणि उत्साहात बसचे स्वागत केले. यावेळी गावात उत्सवाचे वातावरण निर्माण झाले.

बसची विधिवत पूजा

बस गावात दाखल झाल्यानंतर भारतीय परंपरेनुसार तिची विधिवत पूजा करण्यात आली. भाजपाचे राज्य कार्यकारिणी सदस्य श्री. प्रमोद कोचेरी, बेळगाव जिल्हा भाजपाच्या जनरल सेक्रेटरी सौ. धनश्री सरदेसाई, भाजपाचे जनरल सेक्रेटरी श्री. गुंडू टोपिनकट्टी आणि तालुका उपाध्यक्ष श्री. मोहन पाटील यांच्या हस्ते श्रीफळ वाढवून व हार घालून बसचे पूजन करण्यात आले.

यावेळी युवा कार्यकर्ते सागर देसाई, पावनाप्पा देसाई, संजय देसाई, विठ्ठल देसाई, वामन देसाई, महादेव देसाई, पुंडलिक देसाई यांच्यासह गावातील ज्येष्ठ नागरिक, महिला आणि विद्यार्थी मोठ्या संख्येने उपस्थित होते.

धनश्री सरदेसाई : पाठपुराव्याला यश

यावेळी सौ. धनश्री सरदेसाई म्हणाल्या, “कोकणवाडासारख्या दुर्गम गावाला स्वातंत्र्यानंतर 79 वर्षे उलटूनही बससेवा उपलब्ध नसणे ही दुर्दैवी बाब होती. ग्रामस्थांची अडचण लक्षात घेऊन परिवहन अधिकाऱ्यांकडे सातत्याने पाठपुरावा केला. अखेर आज या प्रयत्नांना यश मिळाले असून याचा मनस्वी आनंद आहे. विकासाचा हा प्रवास यापुढेही सुरू राहील.”

प्रमोद कोचेरी : शेवटच्या घटकापर्यंत सुविधा पोहोचविण्याचे ध्येय

श्री. प्रमोद कोचेरी म्हणाले, “भाजपाचे ध्येय विकासाच्या सुविधा समाजातील शेवटच्या घटकापर्यंत पोहोचविणे आहे. कोकणवाडा येथील महिला आणि विद्यार्थ्यांना भेडसावणारी वाहतुकीची अडचण लक्षात घेऊन हा प्रश्न सोडविण्यासाठी प्रयत्न करण्यात आले. भविष्यातही नागरिकांच्या समस्या सोडविण्यासाठी कटिबद्ध राहू.”

ग्रामस्थांकडून आभार

KSRTC बससेवा सुरू झाल्याने ग्रामस्थांनी समाधान व्यक्त केले. “आमच्या अनेक पिढ्या बससेवेची वाट पाहत होत्या. आज गावात बस पोहोचल्याने आमचे स्वप्न पूर्ण झाले,” अशी भावना ग्रामस्थांनी व्यक्त करत धनश्री सरदेसाई आणि प्रमोद कोचेरी यांचे आभार मानले.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೋಕಣವಾಡ ಗ್ರಾಮಕ್ಕೆ KSRTC ಬಸ್ ಸೇವೆ; ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರಲ್ಲಿ ಸಂಭ್ರಮ

ಖಾನಾಪುರ, ಆ. 24, 2026: ಖಾನಾಪುರ ತಾಲೂಕಿನ ದುರ್ಗಮ ಕೋಕಣವಾಡ ಗ್ರಾಮದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ದೃಷ್ಟಿಯಿಂದ ಇಂದು ಐತಿಹಾಸಿಕ ದಿನವಾಗಿ ಪರಿಣಮಿಸಿದೆ. ಸ್ವಾತಂತ್ರ್ಯ ದೊರೆತು 79 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೋಕಣವಾಡ ಗ್ರಾಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಸೇವೆ ಆರಂಭಗೊಂಡಿದೆ. ಬಸ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಂಭ್ರಮದಿಂದ ಸ್ವಾಗತಿಸಿದರು.

ಬೆಳಗಾವಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನಶ್ರೀ ಸರದೇಶಾಯಿ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ಪ್ರಮೋದ ಕೋಚೇರಿ ಅವರ ವಿಶೇಷ ಪ್ರಯತ್ನ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಈ ಬಸ್ ಸೇವೆ ಆರಂಭವಾಗಿದೆ ಎಂದು ತಿಳಿಸಲಾಗಿದೆ.

ಹೊಸ ಬಸ್ ಸೇವೆ ಮುಘವಡೆ–ಕೋಕಣವಾಡ–ನಿಲಾವಡೆ–ಖಾನಾಪುರ ಮಾರ್ಗದಲ್ಲಿ ಸಂಚರಿಸಲಿದೆ.

ಬಸ್ ಆಗಮಿಸುತ್ತಿದ್ದಂತೆ ಸಂಭ್ರಮ

ಹಲವು ವರ್ಷಗಳಿಂದ ಕೋಕಣವಾಡ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ, ಮಹಿಳೆಯರು ಮಾರುಕಟ್ಟೆಗೆ ತೆರಳಲು ಹಾಗೂ ರೋಗಿಗಳು ಚಿಕಿತ್ಸೆಗಾಗಿ ಸಮೀಪದ ಪ್ರದೇಶಗಳಿಗೆ ತೆರಳಲು ಕಾಲ್ನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿತ್ತು.

ಇಂದು KSRTC ಬಸ್ ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ, ಹರ್ಷೋದ್ಗಾರಗಳೊಂದಿಗೆ ಬಸ್‌ನ್ನು ಸ್ವಾಗತಿಸಿದರು. ಇದರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು.

ಬಸ್‌ಗೆ ಸಾಂಪ್ರದಾಯಿಕ ಪೂಜೆ

ಬಸ್ ಗ್ರಾಮಕ್ಕೆ ಆಗಮಿಸಿದ ನಂತರ ಭಾರತೀಯ ಸಂಪ್ರದಾಯದಂತೆ ಬಸ್‌ಗೆ ವಿಧಿವತ್ತಾಗಿ ಪೂಜೆ ಸಲ್ಲಿಸಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ಪ್ರಮೋದ ಕೋಚೇರಿ, ಬೆಳಗಾವಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನಶ್ರೀ ಸರದೇಶಾಯಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಗುಂಡು ಟೋಪಿನಕಟ್ಟಿ ಹಾಗೂ ತಾಲೂಕು ಉಪಾಧ್ಯಕ್ಷ ಶ್ರೀ ಮೋಹನ್ ಪಾಟೀಲ್ ಅವರ ಸಮ್ಮುಖದಲ್ಲಿ ತೆಂಗಿನಕಾಯಿ ಒಡೆದು, ಹಾರ ಹಾಕಿ ಬಸ್‌ಗೆ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕಾರ್ಯಕರ್ತರಾದ ಸಾಗರ ದೇಸಾಯಿ, ಪಾವನಪ್ಪ ದೇಸಾಯಿ, ಸಂಜಯ ದೇಸಾಯಿ, ವಿಠ್ಠಲ ದೇಸಾಯಿ, ವಾಮನ ದೇಸಾಯಿ, ಮಹಾದೇವ ದೇಸಾಯಿ, ಪುಂಡಲಿಕ ದೇಸಾಯಿ ಸೇರಿದಂತೆ ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಧನಶ್ರೀ ಸರದೇಶಾಯಿ : ನಿರಂತರ ಪ್ರಯತ್ನಕ್ಕೆ ಫಲ

ಈ ಸಂದರ್ಭದಲ್ಲಿ ಶ್ರೀಮತಿ ಧನಶ್ರೀ ಸರದೇಶಾಯಿ ಮಾತನಾಡಿ, “ಕೋಕಣವಾಡದಂತಹ ದುರ್ಗಮ ಗ್ರಾಮಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳಾದರೂ ಬಸ್ ಸೇವೆ ಇಲ್ಲದಿರುವುದು ದುರದೃಷ್ಟಕರವಾಗಿತ್ತು. ಗ್ರಾಮಸ್ಥರ ಸಮಸ್ಯೆಯನ್ನು ಅರಿತು ಸಾರಿಗೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಿ ಮತ್ತು ಮನವಿ ಸಲ್ಲಿಸಿ ಪ್ರಯತ್ನ ನಡೆಸಲಾಯಿತು. ಇದೀಗ ಆ ಪ್ರಯತ್ನಕ್ಕೆ ಫಲ ದೊರೆತಿರುವುದು ಸಂತೋಷ ತಂದಿದೆ. ಅಭಿವೃದ್ಧಿಯ ಈ ಪಯಣ ಮುಂದೆಯೂ ಮುಂದುವರಿಯಲಿದೆ,” ಎಂದರು.

ಪ್ರಮೋದ ಕೋಚೇರಿ : ಕೊನೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವುದು ಗುರಿ

ಶ್ರೀ ಪ್ರಮೋದ ಕೋಚೇರಿ ಮಾತನಾಡಿ, “ಸಮಾಜದ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಸೌಲಭ್ಯಗಳನ್ನು ತಲುಪಿಸುವುದು ಬಿಜೆಪಿಯ ಗುರಿಯಾಗಿದೆ. ಕೋಕಣವಾಡದ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಅರಿತು ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗಿದೆ. ಮುಂದೆಯೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ,” ಎಂದರು.

ಗ್ರಾಮಸ್ಥರಿಂದ ಕೃತಜ್ಞತೆ

KSRTC ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. “ನಮ್ಮ ಹಲವು ತಲೆಮಾರುಗಳು ಬಸ್ ಸೇವೆಗಾಗಿ ಕಾಯುತ್ತಿದ್ದವು. ಇಂದು ಗ್ರಾಮಕ್ಕೆ ಬಸ್ ಬಂದಿರುವುದರಿಂದ ನಮ್ಮ ಬಹುದಿನಗಳ ಕನಸು ನನಸಾಗಿದೆ,” ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಧನಶ್ರೀ ಸರದೇಶಾಯಿ ಹಾಗೂ ಪ್ರಮೋದ ಕೋಚೇರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या