खानापूर

शिक्षक, एनसीसी अधिकारी आणि आदर्श मुख्याध्यापक; एन. डी. पाटील यांची उद्या निवृत्ती | ಶಿಕ್ಷಕ, ಎನ್‌ಸಿಸಿ ಅಧಿಕಾರಿ ಮತ್ತು ಆದರ್ಶ ಮುಖ್ಯೋಪಾಧ್ಯಾಯ; ಎನ್. ಡಿ. ಪಾಟೀಲ್ ನಾಳೆ ನಿವೃತ್ತಿ

खानापूर : मराठा मंडळ हायस्कूल, खानापूर येथून 12 जून 1995 रोजी शिक्षक म्हणून शैक्षणिक कारकिर्दीला सुरुवात करणारे, एनसीसी अधिकारी तसेच राष्ट्रीय आदर्श मुख्याध्यापक पुरस्कार विजेते एन. डी. पाटील हे 32 वर्षांच्या प्रदीर्घ शैक्षणिक सेवेनंतर मंगळवार (30 जून) रोजी सेवानिवृत्त होत आहेत.

आर.पी.डी. कॉलेजमधून पदवी, क्रांतीवीर संगोळी रायण्णा कॉलेजमधून बी.एड., धारवाडच्या के.यू.मधून एम.ए. तसेच आर.एल. लॉ कॉलेजमधून एलएलबीचे शिक्षण पूर्ण केलेल्या पाटील यांनी 210 मध्ये सेंट्रल हायस्कूल, बेळगुंदी येथे बदलीनंतर इतिहास विषयाचे प्रभावी अध्यापन केले. अध्यापनाबरोबरच त्यांनी एनसीसी अधिकारी म्हणूनही उल्लेखनीय कामगिरी बजावत ‘बेस्ट ए.एन.ओ.’ पुरस्कार मिळवला.

2022 मध्ये त्यांनी बेळगाव येथील मराठा मंडळ जिजामाता हायस्कूलच्या मुख्याध्यापकपदाची धुरा स्वीकारली. त्यांच्या नेतृत्वाखाली २०२४ मध्ये शाळेला ‘सर्वोत्कृष्ट शाळा’ पुरस्कार मिळाला, तर २०२५-२६ या शैक्षणिक वर्षात दहावीचा १०० टक्के निकाल लागला. त्यांच्या उत्कृष्ट कार्याची दखल घेत त्यांना ‘जिल्हा आदर्श मुख्याध्यापक’ आणि ‘राष्ट्रीय आदर्श मुख्याध्यापक’ पुरस्कारांनी गौरविण्यात आले आहे.

त्यांच्या सेवानिवृत्तीनिमित्त मंगळवारी सकाळी ११ वाजता बेळगाव येथील जिजामाता हायस्कूलच्या आवारात सत्कार व सदिच्छा सोहळ्याचे आयोजन करण्यात आले आहे.

೩೨ ವರ್ಷಗಳ ಶೈಕ್ಷಣಿಕ ಸೇವೆಯ ಬಳಿಕ ಎನ್. ಡಿ. ಪಾಟೀಲ್ ನಾಳೆ ನಿವೃತ್ತಿ

ಖಾನಾಪುರ : 1995ರ ಜೂನ್ 12ರಂದು ಖಾನಾಪುರದ ಮರಾಠಾ ಮಂಡಳ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ, ಎನ್‌ಸಿಸಿ ಅಧಿಕಾರಿ ಹಾಗೂ ರಾಷ್ಟ್ರೀಯ ಆದರ್ಶ ಮುಖ್ಯೋಪಾಧ್ಯಾಯ ಪ್ರಶಸ್ತಿ ಪುರಸ್ಕೃತ ಎನ್. ಡಿ. ಪಾಟೀಲ್ ಅವರು 32 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆಯ ಬಳಿಕ ಮಂಗಳವಾರ (ಜೂನ್ 30) ನಿವೃತ್ತಿಯಾಗಲಿದ್ದಾರೆ.

ಆರ್.ಪಿ.ಡಿ. ಕಾಲೇಜಿನಲ್ಲಿ ಪದವಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಬಿ.ಎಡ್., ಧಾರವಾಡದ ಕೆ.ಯು.ಯಿಂದ ಎಂ.ಎ. ಹಾಗೂ ಆರ್.ಎಲ್. ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿರುವ ಅವರು, 2010ರಲ್ಲಿ ಸೆಂಟ್ರಲ್ ಹೈಸ್ಕೂಲ್, ಬೆಳಗುಂದಿಗೆ ವರ್ಗಾವಣೆಯಾದ ಬಳಿಕ ಇತಿಹಾಸ ವಿಷಯದ ಪರಿಣಾಮಕಾರಿ ಬೋಧನೆಯ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು. ಬೋಧನೆಯ ಜೊತೆಗೆ ಎನ್‌ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ಬೆಸ್ಟ್ ಎ.ಎನ್.ಒ.’ ಪ್ರಶಸ್ತಿಗೂ ಭಾಜನರಾದರು.

2022ರಲ್ಲಿ ಅವರು ಬೆಳಗಾವಿಯ ಮರಾಠಾ ಮಂಡಳ ಜಿಜಾಮಾತಾ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸಿದರು. ಅವರ ನೇತೃತ್ವದಲ್ಲಿ ಶಾಲೆಗೆ 2024ರಲ್ಲಿ ‘ಅತ್ಯುತ್ತಮ ಶಾಲೆ’ ಪ್ರಶಸ್ತಿ ಲಭಿಸಿದ್ದು, 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ‘ಜಿಲ್ಲಾ ಆದರ್ಶ ಮುಖ್ಯೋಪಾಧ್ಯಾಯ’ ಹಾಗೂ ‘ರಾಷ್ಟ್ರೀಯ ಆದರ್ಶ ಮುಖ್ಯೋಪಾಧ್ಯಾಯ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಅವರ ನಿವೃತ್ತಿ ಅಂಗವಾಗಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಜಿಜಾಮಾತಾ ಹೈಸ್ಕೂಲ್ ಆವರಣದಲ್ಲಿ ಸನ್ಮಾನ ಹಾಗೂ ಶುಭಾಶಯ ಸಮಾರಂಭವನ್ನು ಆಯೋಜಿಸಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या