खानापूरजवळ कुत्रा आड आल्याने दुचाकी अपघात; दोन युवक जखमी, माजी आमदार अरविंद पाटील यांनी केली तातडीची मदत | ಖಾನಾಪುರ ಹಳೆಯ ಸೇತುವೆ ಬಳಿ ಬೈಕ್ಗೆ ನಾಯಿ ಅಡ್ಡ ಬಂದು ಅಪಘಾತ; ಇಬ್ಬರು ಯುವಕರಿಗೆ ಗಾಯ, ಅರವಿಂದ್ ಪಾಟೀಲ್ ಮಾನವೀಯತೆ
खानापूर, दि. 27 : खानापूर तालुक्यातील जुन्या पुलाजवळ कुत्रा आड आल्याने दुचाकीचा अपघात होऊन दोन युवक गंभीर जखमी झाले. याच मार्गाने प्रवास करत असलेले माजी आमदार तथा बीडीसीसी बँकेचे संचालक अरविंद पाटील यांनी तत्काळ घटनास्थळी धाव घेत जखमींना रुग्णालयात दाखल करून मानवतेचे दर्शन घडविले.
मिळालेल्या माहितीनुसार, बेळगावच्या उद्यमबाग परिसरात रात्रपाळीचे काम आटोपून खानापूर तालुक्यातील कारलगा गावाकडे दुचाकीवरून परतत असताना काशीनाथ रावळ आणि गोरे हे दोघे युवक जुन्या पुलाजवळ आले असता अचानक कुत्रा आड आल्याने त्यांची दुचाकीवरील नियंत्रण सुटले आणि अपघात झाला. या अपघातात दोघेही युवक गंभीर जखमी होऊन रस्त्यावर मदतीची वाट पाहत होते.
याचवेळी त्या मार्गाने जात असलेल्या माजी आमदार अरविंद पाटील यांनी जखमींची अवस्था पाहताच वाहन थांबवून त्यांना तातडीची मदत केली. प्राथमिक उपचाराची व्यवस्था करून त्यांनी जखमींना स्वतःच्या वाहनातून खानापूर सार्वजनिक रुग्णालयात दाखल केले आणि पुढील उपचाराची व्यवस्था केली.
ಕನ್ನಡ
ಖಾನಾಪುರ ಹಳೆಯ ಸೇತುವೆ ಬಳಿ ಬೈಕ್ಗೆ ನಾಯಿ ಅಡ್ಡ ಬಂದು ಅಪಘಾತ; ಇಬ್ಬರು ಯುವಕರಿಗೆ ಗಾಯ, ಅರವಿಂದ್ ಪಾಟೀಲ್ ಮಾನವೀಯತೆ
ಖಾನಾಪುರ, ಜೂ. 27: ಖಾನಾಪುರ ತಾಲೂಕಿನ ಹಳೆಯ ಸೇತುವೆ ಬಳಿ ಬೈಕ್ಗೆ ನಾಯಿ ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಇದೇ ವೇಳೆ ಆ ಮಾರ್ಗವಾಗಿ ಸಾಗುತ್ತಿದ್ದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ತಕ್ಷಣ ಗಾಯಾಳುಗಳ ನೆರವಿಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಾಹಿತಿಯ ಪ್ರಕಾರ, ಬೆಳಗಾವಿಯ ಉದ್ಯಮಬಾಗ ಪ್ರದೇಶದಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಖಾನಾಪುರ ತಾಲೂಕಿನ ಕಾರಲಗಾ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದ ಕಾಶಿನಾಥ್ ರಾವಳು ಹಾಗೂ ಗೋರೆ ಎಂಬ ಇಬ್ಬರು ಯುವಕರು ಹಳೆಯ ಸೇತುವೆ ಸಮೀಪ ಬರುತ್ತಿದ್ದ ವೇಳೆ ಏಕಾಏಕಿ ನಾಯಿ ಅಡ್ಡ ಬಂದ ಕಾರಣ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.
ಅದೇ ಸಮಯದಲ್ಲಿ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಘಟನೆ ಗಮನಿಸಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ಪ್ರಾಥಮಿಕ ನೆರವು ಒದಗಿಸಿದರು. ಬಳಿಕ ತಮ್ಮದೇ ವಾಹನದಲ್ಲಿ ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುವಂತೆ ವ್ಯವಸ್ಥೆ ಮಾಡಿದರು.
ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸೇವಾ ಮನೋಭಾವಕ್ಕಾಗಿ ಅರವಿಂದ್ ಪಾಟೀಲ್ ಅವರು ಈಗಾಗಲೇ ಸಾರ್ವಜನಿಕರಲ್ಲಿ ಮೆಚ್ಚುಗೆ ಗಳಿಸಿದ್ದು, ಈ ಘಟನೆಯಲ್ಲೂ ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
