स्वातंत्र्यानंतर प्रथमच गावात शाळा; औरतबैल गवळीवाड्यात आमदारांच्या हस्ते उद्घाटन | ಶಾಸಕ ವಿಠ್ಠಲ ಹಳಗೆಕರ್ ಅವರಿಂದ ನೂತನ ಪ್ರಾಥಮಿಕ ಶಾಲೆ ಉದ್ಘಾಟನೆ
खानापूर: स्वातंत्र्यानंतर अनेक दशकांपासून मूलभूत शैक्षणिक सुविधांपासून वंचित राहिलेल्या बाळगुंद गावाजवळील ‘औरतबैल गवळीवाडा’ येथे नूतन प्राथमिक शाळेचा (इयत्ता पहिली ते पाचवी) शुभारंभ स्थानिक आमदार विठ्ठल हलगेकर यांच्या हस्ते उत्साहात संपन्न झाला. शासनाच्या मंजुरीनंतर सुरू झालेल्या या शाळेमुळे परिसरातील विद्यार्थ्यांची शिक्षणाची गैरसोय आता कायमची दूर होणार आहे.

दुर्गम भागात वास्तव्यास असल्याने या परिसरातील लहान मुलांना शिक्षणासाठी दूरवरचा प्रवास करावा लागत होता. स्थानिक नागरिकांच्या सातत्यपूर्ण पाठपुराव्याला यश येऊन अखेर या गावाला हक्काची शाळा मिळाली आहे. या ऐतिहासिक क्षणी ग्रामस्थांनी आमदार हलगेकर यांच्या कार्यपद्धतीचे कौतुक केले.

शाळेच्या उद्घाटनाप्रसंगी बोलताना आमदार हलगेकर म्हणाले की, “परिसरातील इतर शाळांनी ५० ते १०० वर्षांचा इतिहास पूर्ण केला असला तरी, औरतबैल गावळीवाड्यात आजवर शाळाच नव्हती. मुलांच्या भविष्यासाठी ही उणीव भरून काढणे गरजेचे होते. या शाळेमुळे आता या परिसरातील मुलांसाठी शिक्षणाची द्वारे खुली झाली आहेत.”
सध्या शाळेत सुमारे २५ विद्यार्थी असून, त्यांना आता त्यांच्या स्वतःच्या गावातच शिक्षणाची सुविधा उपलब्ध झाली आहे. यावेळी आमदार हलगेकर यांनी या भागात पक्के रस्ते, पिण्याचे पाणी आणि मतदान केंद्र यांसारख्या इतर मूलभूत सोयीसुविधाही लवकरच उपलब्ध करून दिल्या जातील, असे आश्वासन ग्रामस्थांना दिले. या कार्यक्रमास शिक्षण विभागाचे अधिकारी, ग्रामस्थ, महिला आणि विद्यार्थी मोठ्या संख्येने उपस्थित होते.

ಕನ್ನಡ ಸುದ್ದಿ: ಶಾಸಕ ವಿಠ್ಠಲ ಹಳಗೆಕರ್ ಅವರಿಂದ ನೂತನ ಪ್ರಾಥಮಿಕ ಶಾಲೆ ಉದ್ಘಾಟನೆ
ಖಾನಾಪುರ:
ಸ್ವಾತಂತ್ರ್ಯದ ನಂತರ ಹಲವು ದಶಕಗಳಿಂದ ಮೂಲಭೂತ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತವಾಗಿದ್ದ ಬಲ್ಗುಂಡ್ ಗ್ರಾಮದ ಸಮೀಪದ ‘ಔರ್ತಬೈಲ್ ಗವ್ಲಿವಾಡ’ದಲ್ಲಿ ನೂತನ ಪ್ರಾಥಮಿಕ ಶಾಲೆಯನ್ನು (1 ರಿಂದ 5ನೇ ತರಗತಿ) ಸ್ಥಳೀಯ ಶಾಸಕ ವಿಠ್ಠಲ ಹಳಗೆಕರ್ ಅವರು ಉದ್ಘಾಟಿಸಿದರು. ಸರ್ಕಾರದ ಅನುಮೋದನೆಯೊಂದಿಗೆ ಆರಂಭವಾದ ಈ ಶಾಲೆಯಿಂದಾಗಿ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಈ ದುರ್ಗಮ ಪ್ರದೇಶದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ದೂರದ ಊರುಗಳಿಗೆ ತೆರಳಬೇಕಾಗಿದ್ದ ಪರಿಸ್ಥಿತಿ ಇತ್ತು. ಸ್ಥಳೀಯರ ನಿರಂತರ ಮನವಿಗಳಿಗೆ ಸ್ಪಂದಿಸಿದ ಶಾಸಕರು, ಗ್ರಾಮಕ್ಕೆ ಶಾಲೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಈ ಐತಿಹಾಸಿಕ ಕ್ಷಣದಲ್ಲಿ ಗ್ರಾಮಸ್ಥರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ವಿಠ್ಠಲ ಹಳಗೆಕರ್, “ಸುತ್ತಮುತ್ತಲಿನ ಶಾಲೆಗಳು ದಶಕಗಳ ಇತಿಹಾಸ ಹೊಂದಿದ್ದರೂ, ಔರ್ತಬೈಲ್ ಗವ್ಲಿವಾಡದಲ್ಲಿ ಇದುವರೆಗೂ ಶಾಲೆ ಇರಲಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಈ ಶಾಲೆ ಅತ್ಯಗತ್ಯವಾಗಿತ್ತು. ಇಂದು ಈ ಗ್ರಾಮದ ಮಕ್ಕಳಿಗೆ ಶಿಕ್ಷಣದ ಹೊಸ ದಾರಿ ತೆರೆದಿದೆ” ಎಂದು ತಿಳಿಸಿದರು.
ಪ್ರಸ್ತುತ ಈ ಶಾಲೆಯಲ್ಲಿ 22 ರಿಂದ 25 ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಿಗೆ ತಮ್ಮ ಸ್ವಂತ ಗ್ರಾಮದಲ್ಲಿಯೇ ಶಿಕ್ಷಣ ದೊರೆಯಲಿದೆ. ಶಾಲೆಯ ಉದ್ಘಾಟನೆಯ ಜೊತೆಗೆ, ಈ ಪ್ರದೇಶಕ್ಕೆ ಅಗತ್ಯವಿರುವ ಡಾಂಬರು ರಸ್ತೆ, ಕುಡಿಯುವ ನೀರಿನ ಸೌಲಭ್ಯ ಮತ್ತು ಮತಗಟ್ಟೆಯನ್ನು ಶೀಘ್ರವೇ ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
