खानापूर तालुक्यात घरफोड्यांचा उच्छाद! एकाच रात्री 10 घरांवर डल्ला | ಖಾನಾಪುರದಲ್ಲಿ ದರೋಡೆಕೋರರ ಕೈಚಳಕ
खानापूर:खानापूर तालुक्यात एकाच रात्री दहा घरांमध्ये चोरी झाल्याने मोठी खळबळ उडाली आहे. तालुक्यातील सावरगाळी, शिंपेवाडी, गुंजी, बरगाव, रामगुरवाडी आणि गणेबैल या सहा गावांसह खानापूर शहरात चोरट्यांनी बंद घरे लक्ष्य करून लाखोंचा ऐवज लंपास केला आहे. विशेषतः सावरगाळी येथील नारायण भेकणे यांच्या घरातून जमीन खरेदीसाठी ठेवलेली ₹१५ लाखांची रोकड आणि १६ तोळे सोने चोरून नेले. भेकणे कुटुंब बाहेरगावी गेल्याची संधी साधत ही चोरी करण्यात आली. चोरट्यांनी बंद घरे फोडून चोरी केल्यानंतर पुन्हा कुलूप लावले, ज्यामुळे चोरी झाल्याचे त्वरित कोणाला कळले नाही. चोरीची पद्धत पाहता, हा प्रकार आंतरराज्य टोळीने केल्याचा पोलिसांना संशय आहे. या घटनेनंतर सीसीटीव्ही फुटेजमध्ये चार चोरटे दिसले असून, श्वानपथकाच्या मदतीने तपास करण्यात आला; मात्र श्वान काही अंतरावर जाऊन थांबल्याने पोलिसांसमोर चोरट्यांना पकडण्याचे मोठे आव्हान उभे राहिले आहे. या प्रकारामुळे नागरिकांमध्ये भीतीचे वातावरण असून, तात्काळ आरोपींना अटक करण्याची मागणी जोर धरू लागली आहे.

ಖಾನಾಪುರ ತಾಲೂಕಿನಲ್ಲಿ ಒಂದೇ ರಾತ್ರಿ ಹತ್ತು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಸಾವರಗಾಳಿ, ಶಿಂಪೇವಾಡಿ, ಗುಂಜಿ, ಬರಗಾಂವ್, ರಾಮಗುರವಾಡಿ ಮತ್ತು ಗಣೇಬೈಲ್ ಸೇರಿದಂತೆ ಆರು ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಘಟನೆಯಿಂದಾಗಿ ಪೊಲೀಸ್ ಇಲಾಖೆ ಕೂಡ ಗೊಂದಲಕ್ಕೊಳಗಾಗಿದ್ದು, ಇದು ಅಂತರರಾಜ್ಯ ಕಳ್ಳರ ತಂಡದ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ. ಸಾವರಗಾಳಿಯ ನಾರಾಯಣ ಭೇಕಣೆ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ₹೧೫ ಲಕ್ಷ ನಗದು ಮತ್ತು ೧೬ ತೊಲೆ ಚಿನ್ನಾಭರಣ ಕದ್ದೊಯ್ದಿದ್ದಾರೆ. ಜಮೀನು ಖರೀದಿಸಲು ನಗದು ಹಣವನ್ನು ಬ್ಯಾಂಕ್ನಿಂದ ತರಲಾಗಿತ್ತು, ಕುಟುಂಬದ ಸದಸ್ಯರು ಹೊರಗೆ ಹೋಗಿದ್ದ ಸಮಯವನ್ನು ಕಳ್ಳರು ಉಪಯೋಗಿಸಿಕೊಂಡಿದ್ದಾರೆ. ಇದೇ ರೀತಿ ಶಿಂಪೇವಾಡಿಯಲ್ಲಿ ಮೂರು ಮನೆಗಳು, ಗುಂಜಿಯಲ್ಲಿ ಒಂದು, ಹಾಗೂ ಬರಗಾಂವ್ ಮತ್ತು ಗಣೇಬೈಲ್ನಲ್ಲಿಯೂ ಕಳ್ಳತನ ನಡೆದಿದೆ. ವಿಶೇಷವೆಂದರೆ, ಕಳ್ಳರು ಬಂದ್ ಆಗಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು, ಕಳ್ಳತನ ಮಾಡಿದ ನಂತರ ಮತ್ತೆ ಬೀಗ ಹಾಕಿ ಹೋಗಿರುವುದರಿಂದ, ಕಳ್ಳತನ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ಕು ಕಳ್ಳರು ಕಾಣಿಸಿಕೊಂಡಿದ್ದು, ಶ್ವಾನದಳವನ್ನು ಸ್ಥಳಕ್ಕೆ ಕರೆಸಿದ್ದರೂ, ಶ್ವಾನಗಳು ಸ್ವಲ್ಪ ದೂರ ಹೋಗಿ ನಿಂತುಬಿಟ್ಟಿವೆ. ಈ ಸಾಮೂಹಿಕ ಕಳ್ಳತನ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ. ನಾಗರಿಕರು ಕೂಡಲೇ ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.