खानापूर-जांबोटी मार्ग आजपासून बंद; जिल्हाधिकाऱ्यांचे आदेश | ಖಾನಾಪುರ-ಜಾಂಬೋಟಿ ರಸ್ತೆ ಇಂದಿನಿಂದ ಬಂದ್; ಜಿಲ್ಲಾಧಿಕಾರಿಗಳ ಆದೇಶ
बेळगाव : खानापूर-जांबोटी रस्त्याची कामे वेळेत पूर्ण करण्यासाठी गुरुवार, दि. ३० एप्रिल ते ५ मे पर्यंत असे सहा दिवस या मार्गावरील वाहतूक बंद ठेवण्याचे आदेश जिल्हाधिकारी मोहम्मद रोशन यांनी बजावले आहेत. या काळात खानापूरहून येणारी वाहने पिरनवाडी, कुसळी, जांबोटी रोडवरून वळविण्यात येणार असल्याचेही जिल्हाधिकाऱ्यांनी आपल्या आदेशात स्पष्ट केले आहे.
खानापूर-जांबोटी रस्त्याचे काम सध्या सुरू असून या रस्त्याची रुंदी ७.७५ मीटर आहे. रस्त्याच्या दोन्ही बाजूला ‘शोल्डर’ नसल्यामुळे सुरू असलेल्या वाहतुकीमुळे कामात अडथळे येत होते. त्यामुळे काम वेळेत पूर्ण करण्यासाठी सहा दिवस वाहतूक बंद ठेवण्याची विनंती राष्ट्रीय महामार्ग उपविभागाच्या सहाय्यक कार्यकारी अभियंत्यांनी जिल्हाधिकाऱ्यांकडे केली होती.
या विनंतीची दखल घेत जिल्हाधिकाऱ्यांनी ३० एप्रिल ते ५ मे या कालावधीत मार्ग बंद ठेवण्याचा निर्णय घेतला आहे. नागरिकांनी पिरनवाडी, कुसमळी, जांबोटी या पर्यायी मार्गाचा वापर करण्याचे आवाहन करण्यात आले आहे. तसेच, जिल्हा पोलीसप्रमुख व पोलीस आयुक्तांनी या आदेशाची अंमलबजावणी करण्यासाठी ठिकठिकाणी चेकपोस्ट उभारण्याच्या सूचनाही जिल्हाधिकारी मोहम्मद रोशन यांनी दिल्या आहेत.
ಕನ್ನಡ ವಾರ್ತೆ (Kannada News)
ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಖಾನಾಪುರ-ಜಾಂಬೋಟಿ ರಸ್ತೆ ಇಂದಿನಿಂದ ಬಂದ್; ಜಿಲ್ಲಾಧಿಕಾರಿಗಳ ಆದೇಶ
ಬೆಳಗಾವಿ: ಖಾನಾಪುರ-ಜಾಂಬೋಟಿ ರಸ್ತೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಏಪ್ರಿಲ್ 30 ಗುರುವಾರದಿಂದ ಮೇ 5 ರವರೆಗೆ ಒಟ್ಟು ಆರು ದಿನಗಳ ಕಾಲ ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಖಾನಾಪುರದಿಂದ ಬರುವ ವಾಹನಗಳನ್ನು ಪಿರನವಾಡಿ, ಕುಸಳಿ, ಜಾಂಬೋಟಿ ರಸ್ತೆಯ ಮೂಲಕ ಸಂಚರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಖಾನಾಪುರ-ಜಾಂಬೋಟಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯ ಅಗಲ 7.75 ಮೀಟರ್ ಇದೆ. ರಸ್ತೆಯ ಎರಡೂ ಬದಿಗಳಲ್ಲಿ ‘ಶೋಲ್ಡರ್’ ಇಲ್ಲದಿರುವುದರಿಂದ, ವಾಹನ ಸಂಚಾರದಿಂದ ಕಾಮಗಾರಿಗೆ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲಸವನ್ನು ತ್ವರಿತವಾಗಿ ಮುಗಿಸಲು ಆರು ದಿನಗಳ ಕಾಲ ಸಂಚಾರ ಬಂದ್ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು, ಏಪ್ರಿಲ್ 30 ರಿಂದ ಮೇ 5 ರವರೆಗೆ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ. ಸಾರ್ವಜನಿಕರು ಪಿರನವಾಡಿ, ಕುಸಮಳಿ, ಜಾಂಬೋಟಿ ಪರ್ಯಾಯ ಮಾರ್ಗವನ್ನು ಬಳಸುವಂತೆ ಕೋರಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚೆಕ್ ಪೋಸ್ಟ್ ಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದ್ದಾರೆ.

