28 वर्षांनंतर हलशी-हलशीवाडीत महालक्ष्मीचा यात्रोत्सव; विविध कार्यक्रमांची मांदियाळी | ಹಳಸಿ-ಹಳಸಿವಾಡಿಯಲ್ಲಿ 28 ವರ್ಷಗಳ ನಂತರ ಮಹಾಲಕ್ಷ್ಮಿ ಜಾತ್ರೋತ್ಸವ;
खानापूर: हलशी-हलशीवाडी येथील ग्रामदैवत महालक्ष्मी देवीचा भव्य यात्रोत्सव यंदा अभूतपूर्व उत्साहात साजरा होत आहे. तब्बल २८ वर्षांच्या प्रदीर्घ खंडानंतर हा उत्सव होत असल्याने भाविकांमध्ये आनंदाचे वातावरण आहे. विश्वभारती कला क्रीडा संघटनेच्या वतीने बुधवार, ८ एप्रिल ते गुरुवार, १६ एप्रिल या कालावधीत यानिमित्त भरगच्च धार्मिक आणि सांस्कृतिक कार्यक्रमांचे आयोजन करण्यात आले आहे.
प्रबोधनात्मक जनजागृती आणि प्रभातफेरी
या उत्सवाचे वैशिष्ट्य म्हणजे केवळ धार्मिक विधीच नव्हे, तर सामाजिक बांधिलकी देखील जपली जाणार आहे. “सर्व मातृभाषांच्या शाळा टिकल्या पाहिजेत”, “माझी शाळा बंद करू नका” आणि “आहेर पद्धत बंद करा” यांसारख्या ज्वलंत विषयांवर उत्सवादरम्यान प्रबोधन केले जाईल.
- शुक्रवार, १० एप्रिल: सकाळी १० वाजता हलशी बस स्थानकावरून भव्य जनजागृती फेरीला प्रारंभ होईल. ही फेरी छत्रपती शिवाजी महाराज हायस्कूलमार्गे दुपारी १२ वाजता हलशीवाडी मराठी शाळेजवळ पोहोचेल.
- महाप्रसाद: दुपारी २ वाजता सर्व भाविकांसाठी महाप्रसादाचे आयोजन करण्यात आले आहे.
सांस्कृतिक आणि विविध स्पर्धांची मेजवानी
यात्रोत्सवात पारंपरिक कला आणि क्रीडा प्रकारांना विशेष स्थान देण्यात आले आहे:
- शनिवार, ११ एप्रिल: महिलांच्या कलागुणांना वाव देण्यासाठी विशेष ‘होम मिनिस्टर’ कार्यक्रम पार पडेल. यातील विजेत्यांना सोन्याची नथ आणि पैठणी साडी अशी आकर्षक बक्षिसे देऊन गौरविण्यात येईल.
- मंगळवार, १४ एप्रिल: दुपारी ३ वाजता भक्तिमय वातावरणात सामुदायिक हरिपाठाचे आयोजन करण्यात आले आहे.इतर आकर्षणे: उत्सवादरम्यान पारंपरिक लोककला, लोकनृत्य, सांस्कृतिक कार्यक्रम आणि हस्तकला प्रदर्शन हे भाविकांसाठी मुख्य आकर्षण ठरणार आहेत.
- इतर आकर्षणे: उत्सवादरम्यान पारंपरिक लोककला, लोकनृत्य, सांस्कृतिक कार्यक्रम आणि हस्तकला प्रदर्शन हे भाविकांसाठी मुख्य आकर्षण ठरणार आहेत.
विश्वभारती कला क्रीडा संघटनेचे अध्यक्ष अनिल देसाई यांनी समस्त भाविकांनी आणि नागरिकांनी या लोकोत्सवात मोठ्या संख्येने सहभागी होऊन कार्यक्रमांचा लाभ घ्यावा, असे आवाहन केले आहे. २८ वर्षांनंतर येणारा हा दुग्धशर्करा योग अनुभवण्यासाठी पंचक्रोशीतील नागरिक उत्सुक आहेत.
ಹಳಸಿ-ಹಳಸಿವಾಡಿಯಲ್ಲಿ 28 ವರ್ಷಗಳ ನಂತರ ಮಹಾಲಕ್ಷ್ಮಿ ಜಾತ್ರೋತ್ಸವ; ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಖಾನಾಪೂರ: ( ಪ್ರತಿನಿಧಿ)
ಹಳಸಿ-ಹಳಸಿವಾಡಿಯ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿಯ ಭವ್ಯ ಜಾತ್ರೋತ್ಸವವು ಈ ಬಾರಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ. ಬರೋಬ್ಬರಿ 28 ವರ್ಷಗಳ ಸುದೀರ್ಘ ಅವಧಿಯ ನಂತರ ಈ ಉತ್ಸವವು ನಡೆಯುತ್ತಿರುವುದು ಭಕ್ತರಲ್ಲಿ ವಿಶೇಷ ಕುತೂಹಲ ಮತ್ತು ಹರ್ಷವನ್ನು ಮೂಡಿಸಿದೆ. ವಿಶ್ವಭಾರತಿ ಕಲಾ ಕ್ರೀಡಾ ಸಂಘಟನೆಯ ವತಿಯಿಂದ ಏಪ್ರಿಲ್ 8 ಬುಧವಾರದಿಂದ ಏಪ್ರಿಲ್ 16 ಗುರುವಾರದವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಾಗೃತಿ ಜಾಥಾ ಮತ್ತು ಪ್ರಬೋಧನೆ
ಈ ಬಾರಿಯ ಜಾತ್ರೆಯು ಕೇವಲ ಮನರಂಜನೆಗೆ ಸೀಮಿತವಾಗದೆ, ಸಾಮಾಜಿಕ ಕಳಕಳಿಗೂ ಸಾಕ್ಷಿಯಾಗಲಿದೆ. “ಮಾತೃಭಾಷಾ ಶಾಲೆಗಳು ಉಳಿಯಬೇಕು”, “ನನ್ನ ಶಾಲೆಯನ್ನು ಮುಚ್ಚಬೇಡಿ” ಮತ್ತು “ಆಹೇರ (ಕೊಡುಗೆ) ಪದ್ಧತಿಯನ್ನು ನಿಲ್ಲಿಸಿ” ಎಂಬ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
- ಏಪ್ರಿಲ್ 10 ಶುಕ್ರವಾರ: ಬೆಳಿಗ್ಗೆ 10 ಗಂಟೆಗೆ ಹಳಸಿ ಬಸ್ ನಿಲ್ದಾಣದಿಂದ ಜಾಗೃತಿ ಜಾಥಾ ಹೊರಡಲಿದೆ.
- ಮಾರ್ಗ: ಈ ಜಾಥಾವು ಛತ್ರಪತಿ ಶಿವಾಜಿ ಮಹಾರಾಜ ಪ್ರೌಢಶಾಲೆಯ ಮಾರ್ಗವಾಗಿ ಮಧ್ಯಾಹ್ನ 12 ಗಂಟೆಗೆ ಹಳಸಿವಾಡಿ ಮರಾಠಿ ಶಾಲೆಗೆ ತಲುಪಲಿದೆ.
- ಮಹಾಪ್ರಸಾದ: ಮಧ್ಯಾಹ್ನ 2 ಗಂಟೆಗೆ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು
ಜಾತ್ರೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಪ್ರಮುಖ ಕಾರ್ಯಕ್ರಮಗಳು ಹೀಗಿವೆ:
- ಏಪ್ರಿಲ್ 11 ಶನಿವಾರ: ಮಹಿಳೆಯರಿಗಾಗಿ ವಿಶೇಷ ‘ಹೋಮ್ ಮಿನಿಸ್ಟರ್’ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ವಿಜೇತರಾದವರಿಗೆ ಚಿನ್ನದ ಮೂಗುತಿ (ನತ್) ಮತ್ತು ಪೈಠಣಿ ಸೀರೆಯಂತಹ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
- ಏಪ್ರಿಲ್ 14 ಮಂಗಳವಾರ: ಮಧ್ಯಾಹ್ನ 3 ಗಂಟೆಗೆ ಭಕ್ತಿಪೂರ್ವಕ ‘ಹರಿಪಾಠ’ ಕಾರ್ಯಕ್ರಮ ನಡೆಯಲಿದೆ.
- ಇತರ ಆಕರ್ಷಣೆಗಳು: ಸಾಂಪ್ರದಾಯಿಕ ಜಾನಪದ ಕಲೆಗಳು, ನೃತ್ಯ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಕರಕುಶಲ ವಸ್ತುಪ್ರದರ್ಶನವು ಜನಮನ ಸೆಳೆಯಲಿವೆ.
ವಿಶ್ವಭಾರತಿ ಕಲಾ ಕ್ರೀಡಾ ಸಂಘಟನೆಯ ಅಧ್ಯಕ್ಷರಾದ ಅನಿಲ್ ದೇಸಾಯಿ ಅವರು ಮಾತನಾಡಿ, 28 ವರ್ಷಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕ ಲೋಕೋತ್ಸವದಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
