दांडेली–अळणावर मार्गावर नवी रेल्वे सुरू, केंद्रीय रेल्वे राज्यमंत्री व्ही. सोमन्ना यांच्या हस्ते उद्घाटन | ದಾಂಡೇಲಿ–ಅಳ್ನಾವರ ಮಾರ್ಗದಲ್ಲಿ ನೂತನ ಡೆಮು ರೈಲು ಸೇವೆಗೆ ಚಾಲನೆ
रामनगर: दांडेली ते अळणावरदरम्यान धावणाऱ्या नव्या डेमू रेल्वेला शनिवारी केंद्रीय रेल्वे राज्यमंत्री व्ही. सोमन्ना यांनी हिरवा झेंडा दाखवून रवाना केले. या सेवेमुळे दांडेली आणि अळणावर शहरांमधील रेल्वे कनेक्टिव्हिटी पुन्हा सुरू झाली असून, कोविड काळात स्थगित झालेली अत्यावश्यक रेल्वे सेवा पुन्हा कार्यान्वित झाली आहे.

डेमू सेवा सुरू झाल्याने उत्तर कन्नड आणि धारवाड जिल्ह्यातील नागरिकांना मोठा दिलासा मिळाला आहे. या रेल्वेमुळे प्रवाशांना सुलभ, सुरक्षित आणि परवडणारा प्रवास उपलब्ध होणार आहे.
मान्यवरांची उपस्थिती
या उद्घाटन समारंभाला उत्तर कन्नडचे खासदार विश्वेश्वर हेगडे कागेरी, हल्याळचे आमदार आर. व्ही. देशपांडे, दक्षिण पश्चिम रेल्वेचे वाणिज्य व्यवस्थापक एस. पी. शास्त्री, हुबळी विभागाचे डीआरएम बेला मीना, वेस्ट कोस्ट पेपर मिल्सचे व्यवस्थापकीय संचालक राजेंद्र जैन, कोकण प्रादेशिक रेल्वे व्यवस्थापक आशा शेट्टी यांच्यासह लोकप्रतिनिधी, वरिष्ठ रेल्वे अधिकारी व नागरिक मोठ्या संख्येने उपस्थित होते.
कर्नाटकासाठी 7,748 कोटींची तरतूद
यावेळी बोलताना व्ही. सोमन्ना यांनी केंद्रीय अर्थसंकल्पात कर्नाटकातील रेल्वे पायाभूत सुविधांसाठी 7,748 कोटी रुपयांची तरतूद करण्यात आल्याचे सांगितले. ही तरतूद राज्यातील रेल्वे कनेक्टिव्हिटी मजबूत करणे, प्रवाशांच्या सुविधा सुधारणे आणि प्रादेशिक विकासाला चालना देण्याच्या दृष्टीने महत्त्वाची असल्याचे त्यांनी नमूद केले.

पर्यटन व रोजगाराला चालना
दांडेली–अळणावर मार्गावर डेमू सेवा पुन्हा सुरू झाल्यामुळे पर्यटन क्षेत्राला मोठी चालना मिळणार आहे. दांडेली, जोयडा तालुका आणि आसपासच्या पर्यावरण-पर्यटन स्थळांपर्यंत पोहोचणे आता अधिक सोपे होणार आहे. यामुळे स्थानिक नागरिकांसाठी रोजगाराच्या नव्या संधी निर्माण होण्याची शक्यता आहे.
दांडेली परिसरात विकासाचे नवे दालन
या रेल्वे सेवेमुळे दांडेली आणि जोयडा तालुक्यातील पर्यटन व्यवसायाला गती मिळणार आहे. दांडेली येथील वेस्ट कोस्ट पेपर मिल्ससह अनेक उद्योग, व्यापार आणि स्थानिक व्यवसायांना या रेल्वेचा फायदा होणार आहे.
काळी नदी, वन्यजीव अभयारण्य, व्हाईट वॉटर राफ्टिंग, जल साहसी क्रीडा, धरणे आणि जलविद्युत प्रकल्प पाहण्यासाठी दरवर्षी मोठ्या संख्येने पर्यटक येथे येतात. रेल्वे सेवा सुरू झाल्याने प्रवाशांचा आणि पर्यटकांचा प्रवास अधिक सुखकर होणार आहे.
पर्यटनामुळे जोयडा व दांडेली तालुक्यात अनेक होम स्टे आणि रिझॉर्ट्स कार्यरत असून, या नव्या रेल्वे सेवेमुळे त्यांनाही सुगीचे दिवस येणार असल्याचे सांगण्यात आले.
ದಾಂಡೇಲಿ–ಅಳ್ನಾವರ ಮಾರ್ಗದಲ್ಲಿ ನೂತನ ಡೆಮು ರೈಲು ಸೇವೆಗೆ ಚಾಲನೆ
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದ ಹಸಿರು ನಿಶಾನೆ
ರಾಮನಗರ: ದಾಂಡೇಲಿ–ಅಳ್ನಾವರ ನಡುವಿನ ನೂತನ ಡೆಮು ರೈಲು ಸೇವೆಗೆ ಶನಿವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಮೂಲಕ ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ದಾಂಡೇಲಿ–ಅಳ್ನಾವರ ನಡುವಿನ ಅಗತ್ಯ ರೈಲು ಸಂಪರ್ಕ ಮತ್ತೆ ಪುನರ್ಾರಂಭಗೊಂಡಿದೆ.
ಡೆಮು ರೈಲು ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಜನತೆಗೆ ದೊಡ್ಡ ಅನುಕೂಲವಾಗಿದ್ದು, ಪ್ರಯಾಣಿಕರಿಗೆ ಸುಲಭ, ಸುರಕ್ಷಿತ ಮತ್ತು ಕೈಗೆಟುಕುವ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ.
ಉದ್ಘಾಟನಾ ಸಮಾರಂಭಕ್ಕೆ ಗಣ್ಯರ ಉಪಸ್ಥಿತಿ
ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ದಕ್ಷಿಣ ಪಶ್ಚಿಮ ರೈಲ್ವೆಯ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರಿ, ಹುಬ್ಬಳ್ಳಿ ವಿಭಾಗದ ಡಿಆರ್ಎಂ ಬೆಲಾ ಮೀನಾ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್, ಕೊಂಕಣ ಪ್ರದೇಶದ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕಕ್ಕೆ 7,748 ಕೋಟಿ ರೂ. ಅನುದಾನ
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರಾಜ್ಯದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 7,748 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು. ಇದರಿಂದ ರಾಜ್ಯದ ರೈಲು ಸಂಪರ್ಕ ಬಲಪಡಿಸುವುದರ ಜೊತೆಗೆ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪರ್ಯಟನ ಮತ್ತು ಉದ್ಯೋಗ ಕ್ಷೇತ್ರಕ್ಕೆ ಉತ್ತೇಜನ
ದಾಂಡೇಲಿ–ಅಳ್ನಾವರ ಮಾರ್ಗದಲ್ಲಿ ಡೆಮು ರೈಲು ಸೇವೆ ಪುನರಾರಂಭಗೊಂಡಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಗಲಿದೆ. ದಾಂಡೇಲಿ, ಜೋಯ್ಡಾ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪರಿಸರ ಪ್ರವಾಸಿ ತಾಣಗಳಿಗೆ ತಲುಪುವುದು ಇದೀಗ ಇನ್ನಷ್ಟು ಸುಲಭವಾಗಲಿದೆ. ಇದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ.
ದಾಂಡೇಲಿ ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕು
ಈ ರೈಲು ಸೇವೆಯಿಂದ ದಾಂಡೇಲಿ ಹಾಗೂ ಜೋಯ್ಡಾ ತಾಲ್ಲೂಕಿನ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಬಲ ಸಿಗಲಿದೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸೇರಿದಂತೆ ಕೈಗಾರಿಕೆಗಳು, ವ್ಯಾಪಾರ ಮತ್ತು ಸ್ಥಳೀಯ ಉದ್ಯಮಗಳಿಗೆ ಇದರ ಲಾಭವಾಗಲಿದೆ.
ಕಾಳಿ ನದಿ, ವನ್ಯಜೀವಿ ಅಭಯಾರಣ್ಯ, ವೈಟ್ ವಾಟರ್ ರಾಫ್ಟಿಂಗ್, ಜಲ ಸಾಹಸ ಕ್ರೀಡೆಗಳು, ಅಣೆಕಟ್ಟುಗಳು ಹಾಗೂ ಜಲವಿದ್ಯುತ್ ಯೋಜನೆಗಳನ್ನು ವೀಕ್ಷಿಸಲು ವರ್ಷಕ್ಕೆ ಸಾವಿರಾರು ಪ್ರವಾಸಿಗರು ದಾಂಡೇಲಿ ಪ್ರದೇಶಕ್ಕೆ ಆಗಮಿಸುತ್ತಾರೆ. ರೈಲು ಸೇವೆ ಆರಂಭಗೊಂಡಿರುವುದರಿಂದ ಪ್ರವಾಸಿಗರ ಪ್ರಯಾಣ ಇನ್ನಷ್ಟು ಸುಖಕರವಾಗಲಿದೆ.
ಪ್ರವಾಸೋದ್ಯಮದ ಬೆಳವಣಿಗೆಯಿಂದ ಜೋಯ್ಡಾ ಹಾಗೂ ದಾಂಡೇಲಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳು ಮತ್ತು ರಿಸಾರ್ಟ್ಗಳಿಗೂ ಉತ್ತಮ ದಿನಗಳು ಬರಲಿವೆ ಎಂದು ನಿರೀಕ್ಷಿಸಲಾಗಿದೆ.
