विमानातील जीवदानाची राज्यस्तरीय दखल; डॉ. अंजली निंबाळकर यांचे मुख्यमंत्री सिद्दरामय्या यांनी केले कौतुक | ಡಾ. ಅಂಜಲಿ ನಿಂಬಾಳ್ಕರ್ ಅವರ ಸೇವಾ ಮನೋಭಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
बेंगळुरू : गोवा–दिल्ली विमान प्रवासादरम्यान एका अमेरिकन महिला प्रवाशाला तातडीने सीपीआर देऊन प्राणवाचवणाऱ्या खानापूरच्या माजी आमदार व डॉक्टर डॉ. अंजली निंबाळकर यांच्या समयसूचकतेचे आणि सेवाभावाचे मुख्यमंत्री सिद्दरामय्या यांनी कौतुक केले आहे.
या घटनेची माहिती मुख्यमंत्री सिद्दरामय्या यांनी त्यांच्या अधिकृत फेसबुक खात्यावरून शेअर करत, वैद्यकीय व्यवसायातून राजकारणात कार्यरत असतानाही योग्य वेळी रुग्णाच्या मदतीला धावून जाणे ही बाब अत्यंत प्रशंसनीय असल्याचे नमूद केले.
“अधिकार असो वा नसो, कोणतीही प्रतिफळाची अपेक्षा न ठेवता जनसेवेच्या भावनेतून मदतीला धावून जाणाऱ्या डॉ. अंजली निंबाळकर यांच्यासारख्या व्यक्ती समाजासाठी प्रेरणादायी आहेत. त्यांना दीर्घायुष्य व उत्तम आरोग्य लाभो आणि भविष्यातही त्यांच्या हातून अनेक जीवांचे प्राण वाचावेत,” असे मुख्यमंत्री सिद्दरामय्या यांनी आपल्या पोस्टमध्ये म्हटले आहे.
ಡಾ. ಅಂಜಲಿ ನಿಂಬಾಳ್ಕರ್ ಅವರ ಸೇವಾ ಮನೋಭಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
ಬೆಂಗಳೂರು :
ಗೋವಾ–ದೆಹಲಿ ವಿಮಾನ ಪ್ರಯಾಣದ ವೇಳೆ ಅಮೆರಿಕನ್ ಮಹಿಳೆಯೊಬ್ಬರಿಗೆ ತುರ್ತು ಸಿಪಿಆರ್ ನೀಡಿ ಪ್ರಾಣ ಉಳಿಸಿದ ಖಾನಾಪುರದ ಮಾಜಿ ಶಾಸಕಿ ಹಾಗೂ ವೈದ್ಯೆ ಡಾ. ಅಂಜಲಿ ನಿಂಬಾಳ್ಕರ್ ಅವರ ಸಮಯಪ್ರಜ್ಞೆ ಮತ್ತು ಮಾನವೀಯ ಸೇವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ, ವೈದ್ಯ ವೃತ್ತಿಯಿಂದ ಸಕ್ರಿಯ ರಾಜಕೀಯದಲ್ಲಿದ್ದರೂ ಸಹ ಅಗತ್ಯ ಕ್ಷಣದಲ್ಲಿ ರೋಗಿಯ ನೆರವಿಗೆ ಧಾವಿಸಿರುವ ಡಾ. ಅಂಜಲಿ ನಿಂಬಾಳ್ಕರ್ ಅವರ ಸೇವಾ ಮನೋಭಾವ ಅತ್ಯಂತ ಪ್ರಶಂಸನೀಯವಾಗಿದೆ ಎಂದು ತಿಳಿಸಿದ್ದಾರೆ.
“ಅಧಿಕಾರ ಇದ್ದರೂ ಇಲ್ಲದಿದ್ದರೂ, ಪ್ರತಿಫಲಾಪೇಕ್ಷೆಯಿಲ್ಲದೆ ಜನಸೇವೆಯ ಭಾವನೆಯೊಂದಿಗೆ ನೆರವಿಗೆ ನಿಲ್ಲುವ ಅಂಜಲಿಯವರಂತಹವರು ಸಮಾಜಕ್ಕೆ ಮಾದರಿ. ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಲಭಿಸಲಿ. ಮುಂದಿನ ದಿನಗಳಲ್ಲಿಯೂ ಅನೇಕ ಸಂಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ನೆರವು ಸಿಗಲಿ ಎಂದು ಹಾರೈಸುತ್ತೇನೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
