पुणेस्थित उद्योजक विष्णू रामचंद्र देसाई यांच्याकडून हलशीवाडी व हलशी मराठी शाळेतील विद्यार्थ्यांना गणवेश वाटप | ಪುಣೆಯ ಉದ್ಯಮಿ ವಿಷ್ಣು ರಾಮಚಂದ್ರ ದೇಸಾಯಿ ಅವರಿಂದ ಹಲಶಿವಾಡಿ ಹಾಗೂ ಹಲಶಿ ಮರಾಠಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
खानापूर : उद्योग-व्यवसाय आणि नोकरीच्या निमित्ताने गावापासून दूर असले तरी माजी विद्यार्थ्यांनी आपल्या गावातील सरकारी मराठी शाळा आणि तेथील विद्यार्थ्यांशी असलेले नाते जपावे. मराठी माध्यमातील शाळांच्या संवर्धनासाठी विविध क्षेत्रांत आणि शहरांमध्ये कार्यरत असलेल्या माजी विद्यार्थ्यांनी पुढाकार घेऊन विद्यार्थ्यांना प्रोत्साहन देण्यासोबतच आवश्यक मदत करावी, असे आवाहन खानापूर तालुका महाराष्ट्र एकीकरण समितीचे सरचिटणीस आबासाहेब दळवी यांनी केले.

पुणेस्थित उद्योजक विष्णू रामचंद्र देसाई यांच्या पुढाकारातून हलशीवाडी व हलशी येथील सरकारी मराठी शाळांमधील इयत्ता पहिली व दुसरीच्या विद्यार्थ्यांना पॅन्ट व टी-शर्ट असा शालेय गणवेश वितरित करण्यात आला. यानिमित्त हलशी येथील सरकारी मराठी शाळेत आयोजित कार्यक्रमात आबासाहेब दळवी बोलत होते.

दळवी म्हणाले की, मराठी शाळांचे अस्तित्व आणि शैक्षणिक गुणवत्ता टिकवून ठेवण्यासाठी समाजातील प्रत्येक घटकाने प्रामाणिकपणे योगदान देणे गरजेचे आहे. पुण्यासारख्या शहरात उद्योग-व्यवसाय करत असतानाही आपल्या गावातील मराठी शाळेतील विद्यार्थ्यांच्या गरजा ओळखून विष्णू देसाई यांनी केलेली मदत कौतुकास्पद आहे. त्यांच्या या उपक्रमातून इतर माजी विद्यार्थ्यांनी प्रेरणा घेऊन आपल्या गावातील शाळांच्या विकासासाठी पुढाकार घ्यावा, असे आवाहन त्यांनी केले.
कार्यक्रमाच्या अध्यक्षस्थानी शाळा सुधारणा समितीचे अध्यक्ष विशाल गुरव होते. प्रारंभी मिलिंद देसाई यांनी प्रास्ताविकातून मराठी शाळांच्या मदतीसाठी सर्वांनी पुढाकार घेण्याचे आवाहन केले. ॲड. अभिजीत सरदेसाई व राजाराम देसाई यांनी विद्यार्थ्यांना मार्गदर्शन केले. मुख्याध्यापक एस. टी. पाटील यांनी उपस्थितांचे स्वागत केले.
हलशीवाडी येथील सरकारी मराठी शाळेत साहित्य वितरणाच्या वेळी गुंडपी येथील सरकारी मराठी शाळेचे मुख्याध्यापक दत्तात्रय देसाई, मुख्याध्यापक विनायक फंडी, परशराम देसाई, नारायण पाटील यांच्यासह मान्यवर, शिक्षक व विद्यार्थी उपस्थित होते.
ಪುಣೆಯ ಉದ್ಯಮಿ ವಿಷ್ಣು ರಾಮಚಂದ್ರ ದೇಸಾಯಿ ಅವರಿಂದ ಹಲಶಿವಾಡಿ ಹಾಗೂ ಹಲಶಿ ಮರಾಠಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಖಾನಾಪುರ : ಉದ್ಯೋಗ, ವ್ಯವಹಾರ ಹಾಗೂ ವಿವಿಧ ಕಾರಣಗಳಿಂದ ಗ್ರಾಮದಿಂದ ದೂರವಿದ್ದರೂ ಮಾಜಿ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸರ್ಕಾರಿ ಮರಾಠಿ ಶಾಲೆ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಇರುವ ನಂಟನ್ನು ಉಳಿಸಿಕೊಳ್ಳಬೇಕು. ಮರಾಠಿ ಮಾಧ್ಯಮದ ಶಾಲೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಮತ್ತು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ವಿದ್ಯಾರ್ಥಿಗಳು ಮುಂದೆ ಬಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅಗತ್ಯ ಸಹಾಯ ಮಾಡಬೇಕು ಎಂದು ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ ಕರೆ ನೀಡಿದರು.
ಪುಣೆಯ ಉದ್ಯಮಿ ವಿಷ್ಣು ರಾಮಚಂದ್ರ ದೇಸಾಯಿ ಅವರ ಮುಂದಾಳತ್ವದಲ್ಲಿ ಹಲಶಿವಾಡಿ ಹಾಗೂ ಹಲಶಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಗಳ ಒಂದನೇ ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ಯಾಂಟ್ ಮತ್ತು ಟಿ-ಶರ್ಟ್ ಒಳಗೊಂಡ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಯಿತು. ಈ ಹಿನ್ನೆಲೆಯಲ್ಲಿ ಹಲಶಿಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಬಾಸಾಹೇಬ ದಳವಿ ಮಾತನಾಡಿದರು.
ದಳವಿ ಮಾತನಾಡಿ, ಮರಾಠಿ ಶಾಲೆಗಳ ಅಸ್ತಿತ್ವ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಮಾಜದ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೈಜೋಡಿಸುವ ಅಗತ್ಯವಿದೆ ಎಂದರು. ಪುಣೆಯಂತಹ ನಗರದಲ್ಲಿ ಉದ್ಯಮ-ವ್ಯವಹಾರ ನಡೆಸುತ್ತಿದ್ದರೂ ತಮ್ಮ ಗ್ರಾಮದ ಮರಾಠಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಅಗತ್ಯವನ್ನು ಗುರುತಿಸಿ ವಿಷ್ಣು ದೇಸಾಯಿ ಅವರು ನೆರವು ನೀಡಿರುವುದು ಶ್ಲಾಘನೀಯ. ಅವರ ಈ ಕಾರ್ಯದಿಂದ ಇತರ ಮಾಜಿ ವಿದ್ಯಾರ್ಥಿಗಳೂ ಪ್ರೇರಣೆ ಪಡೆದು ತಮ್ಮ ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ವಿಶಾಲ ಗುರ್ವ ವಹಿಸಿದ್ದರು. ಆರಂಭದಲ್ಲಿ ಮಿಲಿಂದ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಮರಾಠಿ ಶಾಲೆಗಳ ನೆರವಿಗೆ ಎಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದರು. ಅಡ್ವೊಕೇಟ್ ಅಭಿಜಿತ್ ಸರದೇಶಾಯಿ ಹಾಗೂ ರಾಜಾರಾಮ ದೇಸಾಯಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮುಖ್ಯೋಪಾಧ್ಯಾಯ ಎಸ್. ಟಿ. ಪಾಟೀಲ ಸ್ವಾಗತಿಸಿದರು.
ಹಲಶಿವಾಡಿಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಸಾಹಿತ್ಯ ವಿತರಣೆ ಸಂದರ್ಭದಲ್ಲಿ ಗುಂಡಪಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯ ಮುಖ್ಯೋಪಾಧ್ಯಾಯ ದತ್ತಾತ್ರೇಯ ದೇಸಾಯಿ, ಮುಖ್ಯೋಪಾಧ್ಯಾಯ ವಿನಾಯಕ ಫಂಡಿ, ಪರಶರಾಮ ದೇಸಾಯಿ, ನಾರಾಯಣ ಪಾಟೀಲ ಸೇರಿದಂತೆ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
