खानापूर

नेरसा ते काटगाळी… शतकानुशतकांची परंपरा जपणारी श्री महालक्ष्मी देवी यात्रा, तयारीला वेग | ನೆರಸಾ–ಕಟ್ಟಗಾಳಿ ಧಾರ್ಮಿಕ ಬಾಂಧವ್ಯದ ಪ್ರತೀಕವಾದ ಮಹಾಲಕ್ಷ್ಮೀ ಜಾತ್ರೆ 2027ರಲ್ಲಿ

खानापूर वार्ता | प्रतिनिधी : खानापूर तालुक्यातील नेरसा कार्यातीची आराध्यदेवता श्री महालक्ष्मी देवीच्या 2027 मध्ये होणाऱ्या ऐतिहासिक यात्रा महोत्सवाच्या तयारीला आता वेग आला आहे. तब्बल 18 वर्षांनंतर भरत असलेल्या या यात्रेच्या नियोजनासाठी शुक्रवारी नेरसा येथे ग्रामसभा व विकास आढावा बैठक पार पडली. बैठकीला आमदार विठ्ठलराव हलगेकर, विविध विभागांचे अधिकारी, पंच कमिटीचे पदाधिकारी आणि 16 गावांतील ग्रामस्थ मोठ्या संख्येने उपस्थित होते.

यात्रेला लाखो भाविक उपस्थित राहण्याची शक्यता लक्षात घेऊन आवश्यक पायाभूत सुविधांवर यावेळी सविस्तर चर्चा करण्यात आली. हेम्मडगा–नेरसा, नेरसा–हणबरवाडा, नेरसा–कांजळा (देवीची वाट) तसेच मेन रोड–चाफावाडा या मार्गांच्या दुरुस्तीसह गावातील अंतर्गत रस्ते, रिंगरोड, पिण्याच्या पाण्याची व्यवस्था, अखंड वीजपुरवठा, आरोग्य सेवा, रुग्णवाहिका, एसटी बस सुविधा आणि वाहतूक नियोजन या मागण्या ट्रस्ट कमिटीने आमदारांकडे मांडल्या. यात्रेपूर्वी प्राधान्याने आवश्यक कामे पूर्ण करण्यासाठी शासनाकडून निधी उपलब्ध करून देण्याचा प्रयत्न केला जाईल, असे आश्वासन आमदार विठ्ठलराव हलगेकर यांनी दिले.

नेरसाची ग्रामदैवत… पण कायम वास्तव्य काटगाळीत

या यात्रेचे सर्वात मोठे वैशिष्ट्य म्हणजे नेरसा गावाची ग्रामदैवत असलेली श्री महालक्ष्मी देवी वर्षभर काटगाळी येथील मंदिरात विराजमान असते. देवीच्या दैनंदिन पूजेचा मान काटगाळी गावाकडे असून, यात्रा आयोजित करण्याचा धार्मिक अधिकार आणि मानपान नेरसा पंच कमिटीकडे आहे. अनेक पिढ्यांपासून सुरू असलेली ही परंपरा आजही तितक्याच श्रद्धेने जपली जात आहे.

यात्रेपूर्वी धार्मिक विधीनंतर देवीची मूर्ती काटगाळीहून नागुर्डा सीमेपर्यंत आणली जाते. तेथून नेरसा पंच कमिटीकडे ती विधिवत सुपूर्द करण्यात येते. नेरसा येथे देवीची रंगरंगोटी, अलंकार आणि विविध धार्मिक विधी पार पडतात. नऊ दिवसांचा यात्रा महोत्सव पूर्ण झाल्यानंतर पुन्हा धार्मिक विधीनुसार देवीची मूर्ती काटगाळी येथे नेऊन पुनःप्रतिष्ठापना केली जाते. या परंपरेमुळे दोन्ही गावांमधील धार्मिक ऐक्य आणि परस्पर विश्वास आजही अबाधित आहे.

16 गावांची श्रद्धा; लाखो भाविकांची उपस्थिती अपेक्षित

नेरसा कार्यातीतील १६ गावांसाठी श्री महालक्ष्मी देवी हे प्रमुख श्रद्धास्थान मानले जाते. यापूर्वी १९४६, १९६१, १९९३ आणि २००८ मध्ये ही यात्रा पार पडली होती. आता २०२७ मध्ये अक्षय तृतीयेच्या शुभमुहूर्तावर पुन्हा हा ऐतिहासिक सोहळा रंगणार असून, बेलगावसह कर्नाटक आणि महाराष्ट्रातील विविध भागांतून लाखो भाविक उपस्थित राहण्याची शक्यता आहे.

दरम्यान, देवीच्या कायमस्वरूपी वास्तव्यासाठी काटगाळी येथे उभारण्यात आलेल्या भव्य मंदिरामुळे परिसरात धार्मिक पर्यटनालाही चालना मिळत आहे. यात्रेच्या पार्श्वभूमीवर दोन्ही गावांमध्ये उत्साहाचे वातावरण असून, विकासकामांनाही गती मिळाली आहे.

बैठकीला तालुका पंचायतचे कार्यकारी अधिकारी रमेश मेस्त्री, भाजप नेत्या धनश्री सरदेसाई, मल्लाप्पा मारीहाळ, शंकर पाटील, माजी सदस्य अशोक देसाई, ग्रामपंचायत पदाधिकारी, पंच कमिटीचे सदस्य तसेच शेडेगाळी, गवाळी, असोगा, शिरोली, डोंगरगाव, हेम्मडगा, पाली, देगाव, मेंडील, जामगाव, अबनाळी, तेरेगाळी, तळेवाडी, कृष्णापूर, कोगळा, पास्टोली, कांजळा आदी गावांतील ग्रामस्थ मोठ्या संख्येने उपस्थित होते.

18 ವರ್ಷಗಳ ಬಳಿಕ ನೆರಸಾ ಶ್ರೀ ಮಹಾಲಕ್ಷ್ಮೀ ದೇವಿಯ ಐತಿಹಾಸಿಕ ಜಾತ್ರೆ; ಸಿದ್ಧತೆಗೆ ವೇಗ, ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು

ಖಾನಾಪುರ ವಾರ್ತೆ | ಪ್ರತಿನಿಧಿ

ಖಾನಾಪುರ ತಾಲ್ಲೂಕಿನ ನೆರಸಾ ಕಾರ್ಯಾತಿಯ ಆರಾಧ್ಯ ದೈವವಾದ ಶ್ರೀ ಮಹಾಲಕ್ಷ್ಮೀ ದೇವಿಯ 2027ರಲ್ಲಿ ನಡೆಯಲಿರುವ ಐತಿಹಾಸಿಕ ಜಾತ್ರೆಯ ಪೂರ್ವಸಿದ್ಧತೆಗಳು ವೇಗ ಪಡೆದುಕೊಂಡಿವೆ. ಸುಮಾರು 18 ವರ್ಷಗಳ ಬಳಿಕ ನಡೆಯಲಿರುವ ಈ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ನೆರಸಾ ಗ್ರಾಮದಲ್ಲಿ ಪೂರ್ವಸಿದ್ಧತಾ ಸಭೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಶಾಸಕ ವಿಠ್ಠಲರಾವ್ ಹಲಗೆಕರ, ವಿವಿಧ ಇಲಾಖೆಗಳ ಅಧಿಕಾರಿಗಳು, ಟ್ರಸ್ಟ್ ಹಾಗೂ ಪಂಚ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಾತಿಯ 16 ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಯಿತು. ಹೆಮ್ಮಡಗಾ–ನೆರಸಾ, ನೆರಸಾ–ಹಣಬರವಾಡಾ, ನೆರಸಾ–ಕಾಂಜಳಾ (ದೇವಿಯ ರಸ್ತೆ), ಮುಖ್ಯರಸ್ತೆ–ಚಾಫಾವಾಡಾ ಮಾರ್ಗಗಳ ದುರಸ್ತಿ, ಗ್ರಾಮದ ಒಳರಸ್ತೆಗಳು, ರಿಂಗ್‌ರೋಡ್, ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಆರೋಗ್ಯ ಸೇವೆ, ಆಂಬುಲೆನ್ಸ್, ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಹಾಗೂ ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಅಗತ್ಯ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಒದಗಿಸುವ ಪ್ರಯತ್ನ ಮಾಡುವುದಾಗಿ ಶಾಸಕ ವಿಠ್ಠಲರಾವ್ ಹಲಗೆಕರ ಭರವಸೆ ನೀಡಿದರು.

ನೆರಸಾದ ಗ್ರಾಮದೇವಿ… ಆದರೆ ಶಾಶ್ವತ ವಾಸ ಕಟ್ಟಗಾಳಿಯಲ್ಲಿ

ಈ ಜಾತ್ರೆಯ ವಿಶೇಷತೆಯೆಂದರೆ ನೆರಸಾ ಗ್ರಾಮದೇವಿಯಾಗಿರುವ ಶ್ರೀ ಮಹಾಲಕ್ಷ್ಮೀ ದೇವಿಯ ಮರದ ಮೂರ್ತಿ ವರ್ಷಪೂರ್ತಿ ಕಟ್ಟಗಾಳಿ ಗ್ರಾಮದ ದೇವಸ್ಥಾನದಲ್ಲೇ ವಿರಾಜಮಾನವಾಗಿರುತ್ತದೆ. ದೇವಿಯ ನಿತ್ಯ ಪೂಜೆಯ ಹಕ್ಕು ಕಟ್ಟಗಾಳಿ ಗ್ರಾಮಸ್ಥರದ್ದಾಗಿದ್ದು, ಜಾತ್ರೆ ನಡೆಸುವ ಧಾರ್ಮಿಕ ಹಕ್ಕು ಮತ್ತು ಮಾನ-ಸನ್ಮಾನ ನೆರಸಾ ಪಂಚ ಸಮಿತಿಯದ್ದಾಗಿದೆ. ಹಲವು ಶತಮಾನಗಳಿಂದ ಈ ವಿಶಿಷ್ಟ ಸಂಪ್ರದಾಯವನ್ನು ಎರಡು ಗ್ರಾಮಗಳ ಜನರು ಭಕ್ತಿ ಹಾಗೂ ಸೌಹಾರ್ದದಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

ಜಾತ್ರೆಗೆ ಕೆಲ ತಿಂಗಳುಗಳ ಮೊದಲು ವಿಶೇಷ ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯ ಮೂರ್ತಿಯನ್ನು ಕಟ್ಟಗಾಳಿಯಿಂದ ನಾಗುರ್ಡಾ ಗಡಿಯವರೆಗೆ ಕರೆತರಲಾಗುತ್ತದೆ. ಅಲ್ಲಿಂದ ನೆರಸಾ ಪಂಚ ಸಮಿತಿಗೆ ವಿಧಿವತ್ತಾಗಿ ಹಸ್ತಾಂತರ ಮಾಡಲಾಗುತ್ತದೆ. ನೆರಸಾದಲ್ಲಿ ದೇವಿಯ ಅಲಂಕಾರ, ಬಣ್ಣದ ಕೆಲಸ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಒಂಬತ್ತು ದಿನಗಳ ಜಾತ್ರೆ ಮುಗಿದ ಬಳಿಕ ಮತ್ತೆ ಧಾರ್ಮಿಕ ವಿಧಿಗಳೊಂದಿಗೆ ಮೂರ್ತಿಯನ್ನು ಕಟ್ಟಗಾಳಿಗೆ ಕೊಂಡೊಯ್ದು ಪುನಃ ಪ್ರತಿಷ್ಠಾಪಿಸಲಾಗುತ್ತದೆ.

16 ಗ್ರಾಮಗಳ ಭಕ್ತಿಯ ಕೇಂದ್ರ

ನೆರಸಾ ಕಾರ್ಯಾತಿಯ 16 ಗ್ರಾಮಗಳಿಗೆ ಶ್ರೀ ಮಹಾಲಕ್ಷ್ಮೀ ದೇವಿ ಪ್ರಮುಖ ಆರಾಧ್ಯ ದೈವವಾಗಿದೆ. ಈ ಜಾತ್ರೆ ಈ ಹಿಂದೆ 1946, 1961, 1993 ಹಾಗೂ 2008ರಲ್ಲಿ ನಡೆದಿತ್ತು. ಇದೀಗ 2027ರಲ್ಲಿ ಅಕ್ಷಯ ತೃತೀಯೆಯ ಶುಭ ಸಂದರ್ಭದಲ್ಲಿ ಮತ್ತೆ ಐತಿಹಾಸಿಕ ಜಾತ್ರೆ ನಡೆಯಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಇದೇ ವೇಳೆ ದೇವಿಯ ಶಾಶ್ವತ ವಾಸಕ್ಕಾಗಿ ಕಟ್ಟಗಾಳಿಯಲ್ಲಿ ಭವ್ಯ ದೇವಸ್ಥಾನ ನಿರ್ಮಾಣಗೊಂಡಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಅಭಿವೃದ್ಧಿ ಕಾಮಗಾರಿಗಳಿಗೂ ವೇಗ ಸಿಕ್ಕಿದ್ದು, ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಆರಂಭವಾಗಿದೆ.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇಸ್ತ್ರಿ, ಬಿಜೆಪಿ ನಾಯಕಿ ಧನಶ್ರೀ ಸರದೇಶಾಯಿ, ಮಲ್ಲಪ್ಪ ಮಾರಿಹಾಳ, ಶಂಕರ ಪಾಟೀಲ್, ಅಶೋಕ್ ದೇಸಾಯಿ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಾತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या