खानापूर

वरकड-पाट्ये परिसरात जंगली हत्तींचा धुमाकूळ; शेतीचे नुकसान आणि शेतकऱ्यांमध्ये भीती | ಖಾನಾಪುರದಲ್ಲಿ ಕಾಡಾನೆಗಳ ಹಾವಳಿ: ಬೆಳೆ ಹಾನಿಯಿಂದ ಕಂಗಾಲಾದ ರೈತರು, ಆತಂಕದಲ್ಲಿ ಗ್ರಾಮಸ್ಥರು

खानापूर: तालुक्यातील वरकड आणि पाट्ये परिसरात गेल्या महिनाभरापासून जंगली हत्तींच्या कळपाने धुमाकूळ घातला आहे. या हत्तींच्या सततच्या वावरामुळे स्थानिक शेतकरी आणि नागरिकांमध्ये भीतीचे वातावरण निर्माण झाले असून, शेतात जाणे आणि लोंढा बाजारपेठेकडे प्रवास करणे जीवघेणे ठरत आहे.


पिकांचे अतोनात नुकसान
वरकड आणि पाट्ये भागात तळ ठोकून असलेल्या हत्तींच्या कळपाने मोठ्या प्रमाणात शेतीचे नुकसान केले आहे. पाट्ये गावातील ऊसाचे पीक पूर्णपणे उद्ध्वस्त केल्यानंतर, आता या हत्तींनी आपला मोर्चा वरकडे गावातील सर्व्हे क्रमांक ५० मधील शेतांकडे वळवला आहे. हत्तींनी सुपाऱ्या आणि नारळाची झाडे मुळासकट उपटून टाकली असून, केळीच्या बागांचेही अतोनात नुकसान केले आहे. यामुळे शेतकऱ्यांवर मोठे आर्थिक संकट ओढवले आहे.
वन विभागाकडे तातडीच्या कारवाईची मागणी
या परिस्थितीची दखल घेत लोंढा वनपरिक्षेत्राच्या अधिकाऱ्यांनी घटनास्थळी भेट देऊन नुकसानीची पाहणी केली आहे. मात्र, केवळ पाहणी करून चालणार नाही, तर वन विभागाने तातडीने विशेष मोहीम राबवून जंगली हत्तींना मानवी वस्तीपासून दूर जंगलात हाकलून लावावे, अशी आग्रही मागणी स्थानिक शेतकऱ्यांकडून केली जात आहे.

ಖಾನಾಪುರದಲ್ಲಿ ಕಾಡಾನೆಗಳ ಹಾವಳಿ: ಬೆಳೆ ಹಾನಿಯಿಂದ ಕಂಗಾಲಾದ ರೈತರು, ಆತಂಕದಲ್ಲಿ ಗ್ರಾಮಸ್ಥರು

ಖಾನಾಪುರ:

ತಾಲೂಕಿನ ವರಕಡ ಮತ್ತು ಪಾಟ್ಯೆ ಗ್ರಾಮದ ಸುತ್ತಮುತ್ತ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಿಂಡು ವ್ಯಾಪಕ ಹಾವಳಿ ನಡೆಸುತ್ತಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ. ಕಾಡಾನೆಗಳ ನಿರಂತರ ಓಡಾಟದಿಂದಾಗಿ ರೈತರಿಗೆ ತಮ್ಮ ಗದ್ದೆ-ತೋಟಗಳಿಗೆ ಹೋಗುವುದು ಕಷ್ಟಕರವಾಗಿದ್ದು, ಲೊಂಡಾ ಮಾರುಕಟ್ಟೆಗೆ ತೆರಳುವ ಸಾರ್ವಜನಿಕರ ಜೀವಕ್ಕೂ ಅಪಾಯ ಎದುರಾಗಿದೆ.

ಬೆಳೆಗಳಿಗೆ ಅಪಾರ ಹಾನಿ

ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ರೈತರ ಬೆಳೆಗಳನ್ನು ನಾಶಪಡಿಸುತ್ತಿದೆ. ಪಾಟ್ಯೆ ಗ್ರಾಮದಲ್ಲಿ ಕಬ್ಬಿನ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದ ಬಳಿಕ, ಈಗ ವರಕಡೆ ಗ್ರಾಮದ ಸರ್ವೆ ನಂ. 50ರ ಜಮೀನುಗಳತ್ತ ಆನೆಗಳು ದಾಳಿ ನಡೆಸಿವೆ. ಆನೆಗಳು ಅಡಿಕೆ ಮತ್ತು ತೆಂಗಿನ ಮರಗಳನ್ನು ಬೇರುಸಹಿತ ಕಿತ್ತೊಗೆಯುತ್ತಿದ್ದು, ಬಾಳೆ ತೋಟಗಳಿಗೂ ಭಾರಿ ಹಾನಿ ಉಂಟುಮಾಡಿವೆ. ಇದರಿಂದಾಗಿ ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವನ ಇಲಾಖೆಗೆ ಸ್ಥಳೀಯರ ಆಗ್ರಹ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಲೊಂಡಾ ವಲಯ ಅರಣ್ಯಾಧಿಕಾರಿಗಳು ಹಾನಿಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಆದರೆ, ಕೇವಲ ಪರಿಶೀಲನೆಗೆ ಸೀಮಿತವಾಗದೆ, ಅರಣ್ಯ ಇಲಾಖೆಯು ಕೂಡಲೇ ಕಾರ್ಯಾಚರಣೆ ನಡೆಸಿ, ಕಾಡಾನೆಗಳನ್ನು ಮಾನವ ವಸತಿ ಪ್ರದೇಶಗಳಿಂದ ದೂರವಿರುವ ಕಾಡಿನತ್ತ ಓಡಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या