बेळगाव-धारवाड रेल्वे मार्गासाठी शेतकऱ्यांचा बळी नको; भू-संपादन अधिकाऱ्यांकडे शेतकऱ्यांची धाव | ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ: ಫಲವತ್ತಾದ ಭೂಮಿ ರಕ್ಷಣೆಗಾಗಿ ರೈತರ ಪ್ರತಿಭಟನೆ; 200ಕ್ಕೂ ಹೆಚ್ಚು ರೈತರಿಂದ ಆಕ್ಷೇಪ ಸಲ್ಲಿಕೆ
बेळगाव: बेळगाव-धारवाड नवीन रेल्वे मार्गासाठी सुपीक जमिनींचे अधिग्रहण करू नये, या मागणीसाठी शेतकरी गेल्या सात वर्षांपासून लढा देत आहेत. याच पार्श्वभूमीवर, गर्लगुंजी, नंदीहाळी, के. के. कोप्प आणि हलगीमर्डी येथील 200 पेक्षा जास्त शेतकऱ्यांनी एकत्र येत केआयडीबी (KIADB) च्या विशेष भू-संपादन अधिकाऱ्यांच्या कार्यालयावर धडक दिली आणि या प्रकल्पाविरोधात लेखी आक्षेप नोंदविले.

शेतकरी प्रतिनिधी प्रसाद पाटील यांनी अधिकाऱ्यांसमोर भूमिकेची स्पष्ट मांडणी करताना सांगितले की, “आम्ही सुपीक जमिनी कोणत्याही परिस्थितीत देणार नाही. या जमिनीत वर्षातून तीनदा भाजीपाल्याचे पीक घेतले जाते, तसेच या शिवारात ५० ते ८० फुटांवर मुबलक पाणी उपलब्ध असून शेकडो बोअरवेल आहेत. या जमिनी आमच्या जगण्याचे साधन आहेत. रेल्वे मार्ग झाल्यास वीज लाईन, जनावरांची ने-आण, ट्रॅक्टर वाहतूक आणि जलवाहिन्यांचे मोठे प्रश्न निर्माण होतील.”
“केवळ राजकीय दबावाखाली येऊन स्वतःच्या स्वार्थासाठी शेतकऱ्यांच्या पोटावर पाय देऊ नका,” अशी कळकळीची विनंतीही पाटील यांनी केली. शेतकऱ्यांनी आक्रमक पवित्रा घेत, “आमच्या परवानगीशिवाय पिकात पाय ठेवल्यास याद राखा,” असा इशारा दिला आहे.
यावेळी प्रसाद पाटील, सुनील पाटील, संतोष पाटील, मारुती लोकूर, किरण लोंढे, राजेंद्र पाटील, पुंडलिक मेलगे, सुरेश जाधव, कृष्णा सिद्धानी आणि सुधाकर पाटील यांच्यासह मोठ्या संख्येने शेतकरी उपस्थित होते.
यावेळी विशेष भू-संपादन अधिकारी मंजुनाथ डोंबर यांनी शेतकऱ्यांचे निवेदन स्वीकारले आणि यावर सकारात्मक मार्ग काढण्याचे आश्वासन दिले.
ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ: ಫಲವತ್ತಾದ ಭೂಮಿ ರಕ್ಷಣೆಗಾಗಿ ರೈತರ ಪ್ರತಿಭಟನೆ; 200ಕ್ಕೂ ಹೆಚ್ಚು ರೈತರಿಂದ ಆಕ್ಷೇಪ ಸಲ್ಲಿಕೆ
ಬೆಳಗಾವಿ: ಬೆಳಗಾವಿ-ಧಾರವಾಡ ಹೊಸ ರೈಲ್ವೆ ಮಾರ್ಗಕ್ಕಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಆಗ್ರಹಿಸಿ ಕಳೆದ 7 ವರ್ಷಗಳಿಂದ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಭಾಗವಾಗಿ, ಗರಗಂಜಿ, ನಂದಿಹಳ್ಳಿ, ಕೆ. ಕೆ. ಕೊಪ್ಪ ಮತ್ತು ಹಲ್ಗಿಮರ್ಡಿ ಗ್ರಾಮಗಳ 200ಕ್ಕೂ ಹೆಚ್ಚು ರೈತರು ಕೆಐಎಡಿಬಿ (KIADB) ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿ ಯೋಜನೆಗೆ ತಮ್ಮ ಲಿಖಿತ ಆಕ್ಷೇಪಗಳನ್ನು ಸಲ್ಲಿಸಿದರು.
ರೈತರ ಪರವಾಗಿ ಮಾತನಾಡಿದ ಪ್ರಸಾದ್ ಪಾಟೀಲ್ ಅವರು, “ನಾವು ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನನ್ನು ಬಿಟ್ಟುಕೊಡುವುದಿಲ್ಲ. ಈ ಜಮೀನಿನಲ್ಲಿ ವರ್ಷಕ್ಕೆ ಮೂರು ಬಾರಿ ತರಕಾರಿ ಬೆಳೆಗಳನ್ನು ಬೆಳೆಯುತ್ತೇವೆ. ಇಲ್ಲಿ 50 ರಿಂದ 80 ಅಡಿ ಆಳದಲ್ಲಿ ಹೇರಳವಾಗಿ ನೀರು ಲಭ್ಯವಿದ್ದು, ನೂರಾರು ಬೋರ್ವೆಲ್ಗಳಿವೆ. ಈ ಭೂಮಿಯೇ ನಮ್ಮ ಜೀವನೋಪಾಯವಾಗಿದೆ. ರೈಲ್ವೆ ಮಾರ್ಗವಾದರೆ ವಿದ್ಯುತ್ ಲೈನ್, ಜಾನುವಾರುಗಳ ಓಡಾಟ, ಟ್ರಾಕ್ಟರ್ ಸಂಚಾರ ಮತ್ತು ಪೈಪ್ಲೈನ್ಗಳಂತಹ ದೊಡ್ಡ ಸಮಸ್ಯೆಗಳು ಉದ್ಭವಿಸುತ್ತವೆ,” ಎಂದು ವಿವರಿಸಿದರು.
“ರಾಜಕೀಯ ಒತ್ತಡಕ್ಕೆ ಮಣಿದು, ತಮ್ಮ ಸ್ವಾರ್ಥಕ್ಕಾಗಿ ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ,” ಎಂದು ಪ್ರಸಾದ್ ಪಾಟೀಲ್ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು. ಅಲ್ಲದೆ, “ರೈತರ ಅನುಮತಿಯಿಲ್ಲದೆ ಬೆಳೆಗಳಲ್ಲಿ ಕಾಲಿಟ್ಟರೆ ಎಚ್ಚರ,” ಎಂದು ರೈತರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಸಾದ್ ಪಾಟೀಲ್, ಸುನೀಲ್ ಪಾಟೀಲ್, ಸಂತೋಷ್ ಪಾಟೀಲ್, ಮಾರುತಿ ಲೋಕೂರ್, ಕಿರಣ್ ಲೋಂಧೆ, ರಾಜೇಂದ್ರ ಪಾಟೀಲ್, ಪುಂಡಲಿಕ್ ಮೇಲಗೆ, ಸುರೇಶ್ ಜಾಧವ್, ಕೃಷ್ಣ ಸಿದ್ದಾನಿ, ಸುಧಾಕರ್ ಪಾಟೀಲ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ಈ ವೇಳೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ ಡೋಂಬರ್ ಅವರು ರೈತರ ಮನವಿಯನ್ನು ಸ್ವೀಕರಿಸಿದ್ದು, ಸಕಾರಾತ್ಮಕ ಮಾರ್ಗ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
