जांबोटीसह या रस्त्यांना हायवेचा दर्जा द्या, गडकरींकडे शेट्टर यांची ही मागणी
नवी दिल्ली / बेळगाव, ३० जुलै:
जांबोटीसह खानापूर तालुक्यातील भागासाठी महत्त्वाचा असलेला जांबोटी ते रबकवी (राज्य महामार्ग ५४) या मार्गाला राष्ट्रीय महामार्गाचा दर्जा मिळावा, अशी ठाम मागणी आज बेळगावचे खासदार जगदीश शेट्टर यांनी केंद्रीय रस्ते वाहतूक व महामार्ग मंत्री नितीन गडकरी यांच्याकडे नवी दिल्लीत केली.

नवीन खासदार कार्यालयात झालेल्या या भेटीत शेट्टर यांनी बेळगाव जिल्ह्यातील तीन प्रमुख राज्य महामार्गांचे राष्ट्रीय महामार्गात रूपांतर करण्यासह, बेळगाव व बागलकोट जिल्ह्यांतून जाणाऱ्या एका महत्त्वाच्या चार पदरी रस्त्याच्या सुधारणा करण्याचा सविस्तर प्रस्ताव सादर केला.
त्यांनी सादर केलेल्या प्रस्तावांमध्ये पुढील मार्गांचा समावेश होता:
- जांबोटी ते रबकवी (राज्य महामार्ग ५४) – या मार्गाला राष्ट्रीय महामार्गाचा दर्जा देणे.
- रायचूर ते बाची (राज्य महामार्ग २०) – बेळगाव तालुक्यातील किमी ३४८.३० ते किमी ३५५.१८ या ७ किमीच्या भागाचा दोन पदरी रस्त्याचा चार पदरीमध्ये रूपांतर.
- संकेश्वर – हुक्केरी – घटप्रभा – गोकाक – मणोळी – सौंदत्ती – धारवाड हा सुमारे ६० किमी लांबीचा चार पदरी मार्ग अधिक सुसज्ज करणे.
या सर्व प्रकल्पांची एकूण अंदाजित किंमत ₹१,७७५ कोटी रुपये इतकी असून, यांची अंमलबजावणी झाल्यास वाहतुकीची सोय सुरळीत होईल, अपघातांचे प्रमाण घटेल आणि स्थानिक विकासाला चालना मिळेल, असे खासदार शेट्टर यांनी सांगितले.
केंद्रीय मंत्री नितीन गडकरी यांनी या प्रस्तावांवर सकारात्मक प्रतिसाद देत, “सर्व मुद्द्यांचा गांभीर्याने विचार केला जाईल,” असे आश्वासन खासदार शेट्टर यांना दिले.
ಜಾಂಬೋಟಿ–ರಬಕವಿ ಮಾರ್ಗದ ಜತೆಗೆ 3 ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಕೇಳಿದ ಶೆಟ್ಟರ್ – ನವದೆಹಲಿಯಲ್ಲಿ ಗಡ್ಕರಿ ಅವರನ್ನು ಭೇಟಿ
ನವದೆಹಲಿ/ಬೆಳಗಾವಿ, ಜುಲೈ 30:
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಇಂದು ನವದೆಹಲಿಯಲ್ಲಿ ನೂತನ ಸಂಸದರ ಕಚೇರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಬೆಳಗಾವಿ ಜಿಲ್ಲೆಯಲ್ಲಿ ಮೂರು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಘೋಷಣೆಯಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಶೆಟ್ಟರ್ ಅವರು ಸಾದರಪಡಿಸಿದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ:
- ಜಾಂಬೋಟಿ – ರಬಕವಿ ಮಾರ್ಗ (ರಾಜ್ಯ ಹೆದ್ದಾರಿ 54) – ಈ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ದೊರೆತರೆ, ಬೆಳಗಾವಿಯ ಪಶ್ಚಿಮ ಮತ್ತು ಖಾನಾಪುರ ಭಾಗದ ಸಂಪರ್ಕ ಸುಧಾರಣೆಗೊಳ್ಳುತ್ತದೆ.
- ರಾಯಚೂರು – ಬಾಚಿ ಮಾರ್ಗ (SH 20) – ಬೆಳಗಾವಿ ತಾಲೂಕಿನಲ್ಲಿ 348.30 ಕಿ.ಮೀ ರಿಂದ 355.18 ಕಿ.ಮೀ ವರೆಗೆ ಇರುವ 7 ಕಿ.ಮೀ. ಭಾಗವನ್ನು ಎರಡು ಪದರದಿಂದ ನಾಲ್ಕು ಪದರದ ರಸ್ತೆಯಾಗಿ ಉನ್ನತೀಕರಣ ಮಾಡುವ ಪ್ರಸ್ತಾಪ.
- ಸಂಕೇಶ್ವರ – ಹುಕ್ಕೇರಿ – ಘಟಪ್ರಭಾ – ಗೋಕಾಕ್ – ಮನೊಳ್ಳಿ – ಸೌಂದತ್ತಿ – ಧಾರವಾಡ ಮಾರ್ಗದ 60 ಕಿ.ಮೀ ನಾಲ್ಕು ಲೇನ್ ರಸ್ತೆಯ ಸಮಗ್ರ ಸುಧಾರಣೆ.
ಈ ಎಲ್ಲಾ ಯೋಜನೆಗಳ ಒಟ್ಟಾರೆ ಅಂದಾಜು ವೆಚ್ಚ ರೂ. 1,775 ಕೋಟಿ ಎಂದು ಶೆಟ್ಟರ್ ಅವರು ಗಡ್ಕರಿ ಅವರಿಗೆ ಮಾಹಿತಿ ನೀಡಿದರು. ಈ ಮಾರ್ಗಗಳ ಅಭಿವೃದ್ಧಿಯಿಂದ ವಾಹನ ದಟ್ಟಣೆ ಕಡಿಮೆಯಾಗುತ್ತದೆ, ಅಪಘಾತಗಳು ತಗ್ಗುತ್ತವೆ ಮತ್ತು ವ್ಯಾಪಾರ ಹಾಗೂ ವಾಹನ ಸಂಚಾರ ಸುಗಮವಾಗುತ್ತದೆ ಎಂದು ಅವರು ಹೇಳಿದರು.
ಸಂಸದ ಶೆಟ್ಟರ್ ಅವರ ಪ್ರಸ್ತಾಪಗಳಿಗೆ ಸ್ಪಂದಿಸಿದ ಕೇಂದ್ರ ಸಚಿವ ಗಡ್ಕರಿ ಅವರು, “ಯೋಗ್ಯವಾಗಿ ಪರಿಗಣನೆ ನೀಡಲಾಗುವುದು” ಎಂದು ಭರವಸೆ ನೀಡಿದರು.
ಈ ಬೆಳವಣಿಗೆಗಳಿಂದ ಜಾಂಬೋಟಿ, ಖಾನಾಪುರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಸಂಪರ್ಕದ ಆಶಾಕಿರಣ ಮೂಡಿಸಿದೆ.