खानापूर

मंत्री रेवण्णांची खानापूर भेट: गावागावात शिबिरे घेऊन गॅरंटी योजनांचा लाभ मिळवून द्या – निर्देश | ಮಂತ್ರಿ ರೇವಣ್ಣನವರ ಖಾನಾಪುರ ಭೇಟಿ: ಹಳ್ಳಿ ಹಳ್ಳಿಗೆ ಶಿಬಿರ ನಡೆಸಿ ಗ್ಯಾರಂಟಿ ಯೋಜನೆಗಳ ಲಾಭ ಒದಗಿಸಿ – ನಿರ್ದೇಶನ.

खानापूर: कर्नाटक राज्यातील काँग्रेस सरकारने निवडणुकीदरम्यान दिलेल्या आश्वासनांनुसार सुरू केलेल्या ‘पाच गॅरंटी’ योजना – गृहलक्ष्मी, गृहज्योती, अन्नभाग्य, शक्ती आणि युवा निधी – राज्यातील जनतेपर्यंत कार्यक्षमतेने पोहोचाव्यात यासाठी राज्यव्यापी प्रयत्न सुरू आहेत. या योजनांच्या अंमलबजावणीत अधिक गती आणि समन्वय आणण्यासाठी राज्य, जिल्हा आणि तालुका स्तरांवर विशेष समित्यांची स्थापना करण्यात आली आहे.

या समित्यांच्या समन्वयाची जबाबदारी आणि ‘गॅरंटी अनुष्ठान योजने’च्या राज्याध्यक्षपदाची धुरा माजी मंत्री एच. एम. रेवण्णा यांच्याकडे सोपवण्यात आली आहे.

रायण्णा समाधीस्थळाची पाहणी आणि विकासकामांवर लक्ष

नंदगड येथे मंत्री शिवराज तंगडगी यांचे आगमन झाल्याने, रेवण्णा यांनी खानापूर येथे येऊन त्यांची भेट घेतली. या भेटीदरम्यान, दोघांनी एकत्र येऊन थोर स्वातंत्र्यसेनानी संगोळ्ळी रायण्णा यांच्या समाधीस्थळाची आणि ऐतिहासिक फाशीस्थळाची पाहणी केली. पाहणीनंतर त्यांनी संबंधित अधिकाऱ्यांशी चर्चा करून देखभाल आणि विकासकामांसंदर्भात काही महत्त्वाच्या सूचना दिल्या.

यावेळी खानापूर तालुका गॅरंटी योजनेचे तालुकाध्यक्ष सूर्यकांत कुलकर्णी, तसेच प्रकाश मादार, इसाक पठाण, शांताराम गुरव, रुद्रापा पाटील यांच्यासह इतर पदाधिकारी उपस्थित होते. त्यांनी रेवण्णा यांची भेट घेऊन तालुक्यात योजनांच्या अंमलबजावणीची माहिती दिली.

गावागावात जाऊन योजना पोहोचवण्याचे आवाहन

बैठकीदरम्यान राज्याध्यक्ष रेवण्णा यांनी तालुका समितीचे अध्यक्ष आणि सदस्यांना स्पष्ट निर्देश दिले की, त्यांनी खानापूर तालुक्यातील प्रत्येक गावात जाऊन लोकांशी संवाद साधावा, त्यांना योजनांची सविस्तर माहिती द्यावी, तसेच शिबिरे आयोजित करून लाभार्थ्यांना तात्काळ योजनांचा लाभ मिळवून द्यावा.

यावेळी खानापूर तालुका पंचायतचे कार्यकारी अधिकारी रमेश मेत्री यांनी गॅरंटी अनुष्ठान कमिटीच्या नियमित बैठका आणि योजनांच्या अंमलबजावणीतील प्रगतीवर समाधान व्यक्त केले. इतर तालुकास्तरीय अधिकाऱ्यांनीही सरकारच्या गॅरंटी योजना प्रत्येक नागरिकांपर्यंत पोहोचवण्यासाठी सर्वतोपरी प्रयत्न करण्याचे आश्वासन दिले.

👉 महत्त्वाचे मुद्दे:

समिती स्थापना: गॅरंटी योजनांच्या अंमलबजावणीसाठी राज्य, जिल्हा आणि तालुका स्तरांवर समित्या स्थापन.

राज्याध्यक्ष: माजी मंत्री एच. एम. रेवण्णा यांची गॅरंटी अनुष्ठान योजनेचे राज्याध्यक्ष म्हणून निवड.

खास भेट: रेवण्णा यांनी खानापूर भेटीत मंत्री शिवराज तंगडगी यांची भेट घेऊन संगोळ्ळी रायण्णा समाधीस्थळ व फाशीस्थळाची पाहणी केली आणि विकासकामांसाठी अधिकाऱ्यांना सूचना दिल्या.

निर्देश: योजनांच्या जनजागृतीसाठी गावागावात शिबिरे आयोजित करण्याचे आणि लोकांपर्यंत योजना पोहोचवण्याचे आवाहन.

प्रगती: खानापूर कमिटीच्या कार्याबद्दल अधिकाऱ्यांकडून समाधान व्यक्त

ಮಂತ್ರಿ ರೇವಣ್ಣನವರ ಖಾನಾಪುರ ಭೇಟಿ: ಹಳ್ಳಿ ಹಳ್ಳಿಗೆ ಶಿಬಿರ ನಡೆಸಿ ಗ್ಯಾರಂಟಿ ಯೋಜನೆಗಳ ಲಾಭ ಒದಗಿಸಿ – ನಿರ್ದೇಶನ.

ಖಾನಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಪ್ರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು — ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ಯುವನಿಧಿ — ಜನರಿಗೆ ಪರಿಣಾಮಕಾರಿಯಾಗಿ ತಲುಪಲು ಸರ್ಕಾರವು ರಾಜ್ಯಾದ್ಯಂತ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಅನುಷ್ಠಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು, ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ಸ್ಥಾಪಿಸಲಾಗಿದೆ.

ಈ ಸಮಿತಿಗಳ ಸಮನ್ವಯಕ್ಕಾಗಿ ಮಾಜಿ ಸಚಿವ ಎಚ್. ಎಂ. ರೇವಣ್ಣ ಅವರನ್ನು ‘ಗ್ಯಾರಂಟಿ ಅನುಷ್ಠಾನ ಯೋಜನೆ’ಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಸಚಿವರಾಗಿದ್ದಾಗ ರೇವಣ್ಣ ಅವರು ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳದ ಅಭಿವೃದ್ಧಿಗೆ ಮಹತ್ವದ ಪ್ರಯತ್ನಗಳನ್ನು ಮಾಡಿದ್ದರು ಮತ್ತು ಈಗಲೂ ಈ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಈ ಮಧ್ಯೆ, ಸಚಿವ ಶಿವರಾಜ ತಂಗಡಗಿ ಅವರು ನಂದಗಡಕ್ಕೆ ಆಗಮಿಸಿದ್ದರಿಂದ, ಎಚ್. ಎಂ. ರೇವಣ್ಣ ಅವರು ಖಾನಾಪುರಕ್ಕೆ ಬಂದು ಅವರನ್ನು ಭೇಟಿ ಮಾಡಿದರು. ಇಬ್ಬರೂ ಜೊತೆಯಾಗಿ ಸಂಗೊಳ್ಳಿ ರಾಯಣ್ಣನವರ ಸಮಾಧಿ ಸ್ಥಳ ಮತ್ತು ಐತಿಹಾಸಿಕ ಗಲ್ಲು ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ, ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.

ಈ ವೇಳೆ, ಖಾನಾಪುರ ತಾಲೂಕು ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಹಾಗೆಯೇ ಪ್ರಕಾಶ ಮಾದಾರ್, ಇಸಾಕ್ ಪಠಾಣ, ಶಾಂತಾರಾಮ ಗುರವ್, ರುದ್ರಪ್ಪ ಪಾಟೀಲ್ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅವರು ರೇವಣ್ಣ ಅವರನ್ನು ಭೇಟಿ ಮಾಡಿ ತಾಲೂಕಿನಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ವೇಳೆ ರೇವಣ್ಣ ಅವರು ತಾಲೂಕು ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಸೂಚನೆ ನೀಡುತ್ತಾ, ಖಾನಾಪುರ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ, ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಿ, ಹಾಗೆಯೇ ಶಿಬಿರಗಳ ಮೂಲಕ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರಕಿಸಿಕೊಡಬೇಕು ಎಂದು ಹೇಳಿದರು.

ಖಾನಾಪುರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಅವರು ಕೂಡ ಈ ಸಭೆಯಲ್ಲಿ ತೃಪ್ತಿ ವ್ಯಕ್ತಪಡಿಸಿ, ಖಾನಾಪುರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ಉಪಸ್ಥಿತರಿದ್ದ ಇತರ ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಸಮಿತಿಯೊಂದಿಗೆ ಸಂವಾದ ನಡೆಸಿ ಯೋಜನೆಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೂ ತಲುಪಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या