खानापूरचा तरुण,
लाख रुपयांच्या पगाराचे आमिष,
प्रत्यक्षात फसवणूक | ಸೈಬರ್ ಗುಲಾಮಗಿರಿ; ಖಾನಾಪುರದ ಯುವಕರ ಸಾಹಸಮಯ ಪಾರು!
खानापूर: परदेशात गलेलठ्ठ पगाराच्या नोकरीचे आमिष दाखवून तरुणांना सायबर गुन्हेगारीच्या जाळ्यात ओढण्याचे आंतरराष्ट्रीय रॅकेट सध्या सक्रिय झाले आहे. या धोकादायक जाळ्यात अडकण्यापूर्वीच खानापूर तालुक्यातील नागुर्डा येथील केशव नांदूरकर आणि बेळगावच्या भाग्यनगरमधील प्रशांत कोले हे दोन तरुण सुदैवाने सुखरूप मायदेशी परतले आहेत. या घटनेमुळे सीमाभागातील तरुणांमध्ये परदेशी नोकऱ्यांबाबत मोठी खळबळ उडाली आहे.
एक लाखाच्या पगाराचे आमिष आणि कंबोडियाचे विमान
केशव आणि प्रशांत या दोघांना एका एजंटमार्फत कंबोडियात ‘डेटा एंट्री ऑपरेटर’ म्हणून नोकरीची संधी असल्याचे सांगण्यात आले होते. दरमहा एक लाख रुपये पगार मिळेल, अशा भूलथापांना बळी पडून हे दोघे २८ डिसेंबर २०२५ रोजी कंबोडियाला रवाना झाले. नवीन आयुष्याची स्वप्ने डोळ्यासमोर ठेवून गेलेल्या या तरुणांना तिथे काय वाढून ठेवले आहे, याची पुसटशीही कल्पना नव्हती.
भारतीय नागरिकांचीच फसवणूक करण्याचे ‘टार्गेट’
कंबोडियात पोहोचल्यानंतर या तरुणांना एका चिनी व्यवस्थापनाच्या कंपनीत नेण्यात आले. तिथे गेल्यावर त्यांना ‘डेटा एंट्री’ऐवजी फेसबुक, इन्स्टाग्राम, टेलिग्राम आणि विविध डेटिंग अॅप्सचा वापर करून भारतीय नागरिकांची फसवणूक (फिशिंग) करण्याचे काम देण्यात आले. आपल्याच देशबांधवांना आर्थिक संकटात ढकलण्याचे हे काम असल्याचे लक्षात येताच या दोघांनी त्याला ठाम विरोध केला. “आम्ही हे काम करणार नाही,” असे त्यांनी व्यवस्थापनाला स्पष्टपणे सुनावले.
हालअपेष्टा आणि धाडसी सुटका
कामास नकार दिल्यामुळे संतापलेल्या कंपनीने या तरुणांना तात्काळ बाहेर काढून दिले. परक्या देशात हाताशी पुरेसे पैसे नसताना आणि ओळखीचे कुणीही नसताना त्यांना संकटांचा सामना करावा लागला. दोन दिवस भाड्याच्या खोलीत काढल्यानंतर ३० डिसेंबर रोजी हे दोन्ही तरुण सुरक्षितपणे बेळगावला पोहोचले. एका मोठ्या सायबर क्राईम सिंडिकेटमधून ते थोडक्यात बचावले.
तरुणांना सतर्क राहण्याचे आवाहन
आपला अनुभव सांगताना या तरुणांनी सांगितले की, कंबोडियात आजही हजारो भारतीय तरुण अशा कॉल सेंटर्समध्ये ‘सायबर स्लेव्ह’ (गुलाम) म्हणून अडकले आहेत. त्यांना तिथे कोंडून ठेवून सक्तीने गुन्हेगारी कृत्य करून घेतली जातात. त्यामुळे खानापूर, बेळगाव आणि आसपासच्या भागातील तरुणांनी परदेशातील मोठ्या पगाराच्या जाहिरातींना न भुलता, एजंट आणि कंपनीची पूर्ण शहानिशा केल्याशिवाय पाऊल उचलू नये, असे आवाहन त्यांनी केले आहे.
ಉದ್ಯೋಗದ ಹೆಸರಲ್ಲಿ ಕಾಂಬೋಡಿಯಾದಲ್ಲಿ ಸೈಬರ್ ಗುಲಾಮಗಿರಿ; ಖಾನಾಪುರದ ಯುವಕರ ಸಾಹಸಮಯ ಪಾರು!
ಖಾನಾಪುರ
ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರನ್ನು ಸೈಬರ್ ವಂಚನೆಯ ಜಾಲಕ್ಕೆ ದೂಡುವ ಅಂತರಾಷ್ಟ್ರೀಯ ಜಾಲವೊಂದು ಸಕ್ರಿಯವಾಗಿದೆ. ಈ ಅಪಾಯಕಾರಿ ಜಾಲಕ್ಕೆ ಸಿಲುಕುವ ಮೊದಲೇ ಖಾನಾಪುರ ತಾಲ್ಲೂಕಿನ ನಾಗುರ್ಡಾ ಗ್ರಾಮದ ಕೇಶವ ನಂದೂರ್ಕರ್ ಮತ್ತು ಬೆಳಗಾವಿಯ ಭಾಗ್ಯನಗರದ ಪ್ರಶಾಂತ್ ಕೋಲೆ ಎಂಬ ಇಬ್ಬರು ಯುವಕರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ.
ಲಕ್ಷ ರೂಪಾಯಿ ಸಂಬಳದ ಆಮಿಷ
ಕೇಶವ ಮತ್ತು ಪ್ರಶಾಂತ್ ಅವರಿಗೆ ಏಜೆಂಟ್ ಒಬ್ಬರ ಮೂಲಕ ಕಾಂಬೋಡಿಯಾದಲ್ಲಿ ‘ಡೇಟಾ ಎಂಟ್ರಿ ಆಪರೇಟರ್’ ಕೆಲಸ ಕೊಡಿಸುವುದಾಗಿ ನಂಬಿಸಲಾಗಿತ್ತು. ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾದ ಇವರು, ಡಿಸೆಂಬರ್ 28, 2025 ರಂದು ಕಾಂಬೋಡಿಯಾಕ್ಕೆ ತೆರಳಿದ್ದರು. ಆದರೆ ಅಲ್ಲಿ ಹೋದ ನಂತರ ಅವರಿಗೆ ಎದುರಾದ ಪರಿಸ್ಥಿತಿ ತೀರಾ ಭಿನ್ನವಾಗಿತ್ತು.
ಭಾರತೀಯರಿಗೇ ವಂಚಿಸುವ ಕೆಲಸ
ಕಾಂಬೋಡಿಯಾ ತಲುಪಿದ ಇವರನ್ನು ಚೀನಾ ಮೂಲದ ವ್ಯಕ್ತಿಗಳು ನಡೆಸುತ್ತಿದ್ದ ಕಂಪನಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಡೇಟಾ ಎಂಟ್ರಿ ಕೆಲಸದ ಬದಲಿಗೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಡೇಟಿಂಗ್ ಆಪ್ಗಳ ಮೂಲಕ ಭಾರತೀಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಸೈಬರ್ ವಂಚನೆ (ಫಿಶಿಂಗ್) ಮಾಡುವಂತೆ ಒತ್ತಾಯಿಸಲಾಯಿತು. ಈ ಕೆಲಸ ಮಾಡಲು ನಿರಾಕರಿಸಿದ ಇಬ್ಬರು ಯುವಕರು, “ನಮ್ಮ ದೇಶದವರಿಗೇ ಮೋಸ ಮಾಡಲು ನಮಗೆ ಸಾಧ್ಯವಿಲ್ಲ” ಎಂದು ಕಡಾಖಂಡಿತವಾಗಿ ತಿಳಿಸಿದರು.
ಸಂಕಷ್ಟದ ನಡುವೆ ತಾಯ್ನಾಡಿಗೆ ವಾಪಸ್
ಕೆಲಸ ಮಾಡಲು ಒಪ್ಪದ ಕಾರಣ ಈ ಯುವಕರನ್ನು ಕಂಪನಿಯಿಂದ ಹೊರಹಾಕಲಾಯಿತು. ಅಪರಿಚಿತ ದೇಶದಲ್ಲಿ ಭಾಷೆ ಮತ್ತು ಹಣದ ಸಮಸ್ಯೆಯ ನಡುವೆಯೂ ಧೈರ್ಯಗುಂದದ ಇವರು, ಹೇಗೋ ಬಾಡಿಗೆ ಕೊಠಡಿ ಹಿಡಿದು ಕೆಲ ದಿನಗಳನ್ನು ಕಳೆದರು. ಅಂತಿಮವಾಗಿ ಡಿಸೆಂಬರ್ 30 ರಂದು ಸುರಕ್ಷಿತವಾಗಿ ಬೆಳಗಾವಿಗೆ ಮರಳುವಲ್ಲಿ ಯಶಸ್ವಿಯಾದರು.
ಯುವಕರಿಗೆ ಎಚ್ಚರಿಕೆ
ತಮ್ಮ ಅನುಭವ ಹಂಚಿಕೊಂಡ ಈ ಯುವಕರು, “ಕಾಂಬೋಡಿಯಾದಲ್ಲಿ ಇಂದಿಗೂ ಸಾವಿರಾರು ಭಾರತೀಯ ಯುವಕರು ಸೈಬರ್ ವಂಚನೆಯ ಕಾಲ್ ಸೆಂಟರ್ಗಳಲ್ಲಿ ಗುಲಾಮರಂತೆ ಸಿಲುಕಿಕೊಂಡಿದ್ದಾರೆ. ಆದ್ದರಿಂದ ಯಾರೂ ಕೂಡ ಇಂತಹ ವಿದೇಶಿ ಉದ್ಯೋಗದ ಆಮಿಷಕ್ಕೆ ಬಲಿಯಾಗಬೇಡಿ” ಎಂದು ಮನವಿ ಮಾಡಿದ್ದಾರೆ.
