खानापूर: गवत अडकताना हातातील आकडी पोटात घुसली; शेतकऱ्याचा मृत्यू | ಖಾನಾಪುರದಲ್ಲಿ ದುರ್ಘಟನೆ; ಹುಲ್ಲಿನ ರಾಶಿಯಿಂದ ಬಿದ್ದು ರೈತನ ಸಾವು
खानापूर: गवत उतरवत असताना अचानक पाय घसरून खाली पडल्याने आणि हातातील आकडी पोटात घुसल्याने एका 45 वर्षीय शेतकऱ्याचा जागीच मृत्यू झाल्याची हृदयद्रावक घटना खानापूर तालुक्यातील मोहिशेत येथे गुरुवारी सायंकाळी घडली. कृष्णा गोविंद मिराशी (वय 45) असे या दुर्दैवी शेतकऱ्याचे नाव आहे.
मिळालेल्या माहितीनुसार कृष्णा मिराशी हे गुरुवारी इतर शेतकऱ्यांच्या सोबतीने राघोबा यांच्या मालकीच्या सर्वे नंबर १ मधील शेतात गवत काढणी व वाहतुकीचे काम करत होते. दिवसभर काम केल्यानंतर सायंकाळच्या सुमारास चहा पिण्यासाठी ते गवताच्या गंजीवरून खाली उतरत होते.
काळजाचा थरकाप उडवणारा प्रसंग
गंजीवरून उतरत असताना कृष्णा यांच्या हातात गवत ओढण्यासाठी वापरली जाणारी लोखंडी ‘आकडी’ होती. खाली उतरत असताना अचानक त्यांचा पाय घसरला आणि तोल गेल्याने ते जमिनीवर जोरात आदळले. दुर्दैवाने, पडत असताना त्यांच्या हातातील आकडीचे धारदार लोखंडी टोक थेट त्यांच्या पोटात आरपार घुसले.
उपचारापूर्वीच प्राणज्योत मालवली
हा भीषण अपघात पाहताच परिसरातील शेतकऱ्यांनी तातडीने त्यांना खानापूर येथील सरकारी रुग्णालयात हलवले. मात्र, मोठ्या प्रमाणात रक्तस्त्राव झाल्यामुळे रुग्णालयात पोहोचण्यापूर्वीच त्यांची प्राणज्योत मालवली होती. डॉक्टरांनी त्यांना ‘मृत’ घोषित केले.
या घटनेमुळे मोहिशेत परिसरात हळहळ व्यक्त होत असून मिराशी कुटुंबावर दुःखाचा डोंगर कोसळला आहे. खानापूर पोलीस ठाण्याचे निरीक्षक एल. एच. गवंडी यांच्या मार्गदर्शनाखाली पोलीस या प्रकरणाचा अधिक तपास करत आहेत.
टीप: आपण अशा कामात गुंतलेले असताना सुरक्षिततेची काळजी घेणे आवश्यक आहे.
ಖಾನಾಪುರ : ಖಾನಾಪುರ ತಾಲ್ಲೂಕಿನ ಮೋಹಿಶೆಟ್ (ತಾ. ಖಾನಾಪುರ) ಗ್ರಾಮದಲ್ಲಿ ಗುರುವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಹುಲ್ಲು ತರಲು ತೆರಳಿದ್ದ ರೈತನು ಹುಲ್ಲಿನ ರಾಶಿಯಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಅಪಘಾತದಲ್ಲಿ ಕೈಯಲ್ಲಿದ್ದ ಆಕಡಿ ಹೊಟ್ಟೆಗೆ ಚುಚ್ಚಿಕೊಂಡು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ರೈತನನ್ನು ಕೃಷ್ಣ ಗೋವಿಂದ ಮಿರಾಶಿ (ವಯಸ್ಸು 45) ಎಂದು ಗುರುತಿಸಲಾಗಿದೆ.
ಲಭ್ಯವಾದ ಮಾಹಿತಿಯಂತೆ, ಕೃಷ್ಣ ಮಿರಾಶಿ ಅವರು ಇತರ ರೈತರೊಂದಿಗೆ ರಾಘೋಬಾ ಆಯ್ಕರ್ ಅವರ ಸರ್ವೆ ನಂಬರ್–1 ರ ಹೊಲದಲ್ಲಿ ಹುಲ್ಲು ಸಾಗಣೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಸಂಜೆ ವೇಳೆ ಚಹಾ ಕುಡಿಯಲು ಕೈಯಲ್ಲಿ ಆಕಡಿ ಹಿಡಿದು ಹುಲ್ಲಿನ ರಾಶಿಯಿಂದ ಕೆಳಗೆ ಇಳಿಯುವಾಗ ಏಕಾಏಕಿ ಸಮತೋಲನ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಕೈಯಲ್ಲಿದ್ದ ಆಕಡಿಯ ಕಬ್ಬಿಣದ ಭಾಗ ಅವರ ಹೊಟ್ಟೆಗೆ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ರಕ್ತಸ್ರಾವದಿಂದ ಆಸ್ಪತ್ರೆಗೆ ತಲುಪುವ ಮೊದಲುವೇ ಅವರು ಮೃತಪಟ್ಟಿದ್ದರು.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಎಲ್. ಎಚ್. ಗವಂಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
