खानापूर

खानापूर येथे आमदारांच्या हस्ते दिव्यांग, महिला व विद्यार्थ्यांना साहित्य वितरण | ಖಾನಾಪುರದಲ್ಲಿ ಶಾಸಕರಿಂದ ಅಂಗವಿಕಲರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಣೆ

खानापूर: येथील पट्टण पंचायत आवारात आज आयोजित करण्यात आलेल्या कार्यक्रमात आमदार श्री. विठ्ठलराव सो. हलगेकर यांच्या हस्ते तालुक्यातील दिव्यांग बांधव, महिला भगिनी आणि गुणवंत विद्यार्थ्यांना विविध सरकारी योजनांअंतर्गत उपयुक्त साहित्याचे वितरण करण्यात आले.

या कार्यक्रमात दिव्यांग बांधवांसाठी तीन चाकी मोटार सायकल (स्कुटी), महिला भगिनींसाठी स्वयंरोजगारासाठी शिलाई मशीन तसेच विद्यार्थ्यांसाठी आधुनिक शिक्षणासाठी लॅपटॉप व शैक्षणिक पुस्तिकांचे वाटप करण्यात आले. शासनाच्या योजनांचा प्रत्यक्ष लाभ गरजूंपर्यंत पोहोचावा, या उद्देशाने हा उपक्रम राबविण्यात आला.

यावेळी आमदार विठ्ठलराव हलगेकर यांनी  “समाजातील शेवटच्या घटकापर्यंत विकास पोहोचवणे हेच आपले मुख्य ध्येय असल्याचे सांगितले. दिव्यांग व्यक्तींनी स्वावलंबी व्हावे, महिलांनी स्वयंरोजगाराच्या माध्यमातून आर्थिकदृष्ट्या सक्षम व्हावे आणि विद्यार्थ्यांनी तंत्रज्ञानाच्या युगात मागे राहू नये, यासाठी या साहित्याचा निश्चितच उपयोग होईल, असा विश्वास त्यांनी व्यक्त केला.

तसेच या कल्याणकारी योजनांची माहिती तालुक्यातील प्रत्येक गावातील पात्र लाभार्थ्यांपर्यंत पोहोचवावी, जेणेकरून कोणताही गरजू नागरिक योजनांपासून वंचित राहणार नाही, अशा सूचना त्यांनी प्रशासकीय अधिकाऱ्यांना दिल्या.

या कार्यक्रमाला पट्टण पंचायत अधिकारी, स्थानिक लोकप्रतिनिधी तसेच तालुक्यातील नागरिक मोठ्या संख्येने उपस्थित होते. लाभार्थ्यांच्या चेहऱ्यावरील आनंद आणि समाधान पाहून कार्यक्रमाला उत्साहपूर्ण वातावरण लाभले.

ಖಾನಾಪುರದಲ್ಲಿ ಅಂಗವಿಕಲರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಣೆ

ಖಾನಾಪುರ: ಖಾನಾಪುರ ಪಟ್ಟಣ ಪಂಚಾಯತ್ ಆವರಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಶಾಸಕ ಹಲಗೆಕರ್ ಅವರಿಂದ ತಾಲೂಕಿನ ಅಂಗವಿಕಲರು, ಮಹಿಳೆಯರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಆಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಮೂರು ಚಕ್ರದ ಮೋಟಾರ್ ಸೈಕಲ್ (ಸ್ಕೂಟರ್), ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳು ಹಾಗೂ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್ ಮತ್ತು ಶೈಕ್ಷಣಿಕ ಪುಸ್ತಕಗಳನ್ನು ನೀಡಲಾಯಿತು. ಸರ್ಕಾರದ ಯೋಜನೆಗಳ ಸದುಪಯೋಗವನ್ನು ನೇರವಾಗಿ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಶಾಸಕ ವಿಠ್ಠಲ ಹಲಗೇಕರ ಅವರು, ಸಮಾಜದ ಕೊನೆಯ ವರ್ಗದವರೆಗೂ ಅಭಿವೃದ್ಧಿ ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಅಂಗವಿಕಲರು ಸ್ವಾವಲಂಬಿಗಳಾಗಬೇಕು, ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಮತ್ತು ವಿದ್ಯಾರ್ಥಿಗಳು ತಂತ್ರಜ್ಞಾನದ ಯುಗದಲ್ಲಿ ಹಿಂದೆ ಬೀಳಬಾರದು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ಇದಲ್ಲದೆ, ಕಲ್ಯಾಣ ಯೋಜನೆಗಳ ಮಾಹಿತಿಯನ್ನು ತಾಲೂಕಿನ ಪ್ರತಿಯೊಂದು ಹಳ್ಳಿಯ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಯಾವುದೇ ಅರ್ಹ ವ್ಯಕ್ತಿ ಯೋಜನೆಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಫಲಾನುಭವಿಗಳ ಮುಖದ ಸಂತೋಷ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या