खानापूर

व्हिडिओ: हत्ती थेट गुंजीच्या वेशीत; भात पिकांच्या नासधुसीने शेतकरी-नागरिक हादरले

खानापूर खानापूर तालुक्यातील भालके क्रॉस गुंजी परिसरात हत्तींचा उपद्रव दिवसेंदिवस वाढत असून, भर दिवसा हत्तींचा मुक्त संचार सुरू असल्याने शेतकरी आणि नागरिकांमध्ये भीतीचे वातावरण निर्माण झाले आहे. गेल्या महिनाभरापासून हत्ती दररोज वेगवेगळ्या शिवारात घुसून भात पिकाचे मोठ्या प्रमाणावर नुकसान करत आहेत. खळ्यातील भात, भातगंजी तसेच उभे पीकही हत्तीच्या तडाख्यात सापडत असल्याने शेतकरी वर्ग पुरता हवालदिल झाला आहे.

भर दिवसा दोन हत्ती व पिल्लाचा संचार

गेल्या दोन दिवसांपासून गुंजी परिसरात दोन हत्ती आणि त्यांच्यासोबत एक पिल्लू भर दिवसा शिवारात फिरताना दिसून येत आहे. यामुळे गावकऱ्यांमध्ये प्रचंड घबराट पसरली असून, शेतात काम करण्यास कोणीही धजावत नाही.

भात कापणी संकटात

या भागात अद्यापही मोठ्या प्रमाणावर भात कापणी शिल्लक आहे. मात्र हत्तींच्या भीतीमुळे दिवसाही शेतात जाऊन भात कापणे शेतकऱ्यांसाठी धोक्याचे ठरत आहे. हत्ती शिवारात कधी दाखल होतील याचा नेम नसल्याने शेतकरी सतत तणावाखाली आहेत.

कापणी रखडली; चिंता वाढली

या परिसरात सुमारे 20 टक्के भात कापणी अजूनही बाकी असून, काही शेतकरी मजुरांच्या कमतरतेमुळे तर काही भात पूर्ण परिपक्व होण्याची वाट पाहत कापणी पुढे ढकलत आहेत. मात्र हत्तींच्या धास्तीमुळे अनेक शेतकऱ्यांनी अर्धपक्व भात कापून तो घरी आणण्याचा निर्णय घेतला आहे.

वनखात्याच्या भूमिकेवर नाराजी

हत्तींचा ठाण मांडलेला संचार अद्यापही सुरूच असून, वनखात्याने हत्ती हटाव मोहीम तातडीने राबवावी, अशी मागणी शेतकरी वर्गाकडून होत आहे. मात्र अद्याप कोणतीही ठोस कारवाई न झाल्याने शेतकऱ्यांमधून तीव्र नाराजी व्यक्त केली जात आहे.

ಬೆಳೆಗಳಿಗೆ ಭಾರೀ ನಷ್ಟ; ಕಣದಲ್ಲಿನ ಭತ್ತ, ರಾಶಿ ಹಾಗೂ ನಿಂತ ಬೆಳೆಗಳನ್ನೂ ಆನೆಗಳು ನಾಶಪಡಿಸಿದವು

ಖಾನಾಪುರ ಪ್ರತಿನಿಧಿ

ಖಾನಾಪುರ ತಾಲ್ಲೂಕಿನ ಗುಂಜಿ ಪ್ರದೇಶದಲ್ಲಿ ಆನೆಗಳ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದ್ದು, ಹಗಲು ಹೊತ್ತಲ್ಲೇ ಆನೆಗಳು ಸಂಚರಿಸುತ್ತಿರುವುದರಿಂದ ರೈತರು ಹಾಗೂ ನಾಗರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಆನೆಗಳು ಪ್ರತಿದಿನವೂ ವಿಭಿನ್ನ ಹೊಲಗಳಿಗೆ ನುಗ್ಗಿ ರೈತರ ಭತ್ತದ ಬೆಳೆಗಳಿಗೆ ಭಾರೀ ಹಾನಿ ಉಂಟುಮಾಡುತ್ತಿವೆ. ಕಣದಲ್ಲಿರುವ ಭತ್ತ, ಭತ್ತದ ರಾಶಿಗಳು ಹಾಗೂ ನಿಂತ ಬೆಳೆಗಳೂ ಆನೆಗಳ ದಾಳಿಗೆ ಒಳಗಾಗಿ ರೈತರು ಸಂಪೂರ್ಣವಾಗಿ ನಲುಗಿದ್ದಾರೆ.

ಹಗಲು ಹೊತ್ತಲ್ಲೇ ಎರಡು ಆನೆಗಳು ಹಾಗೂ ಮರಿ ಸಂಚಾರ

ಕಳೆದ ಎರಡು ದಿನಗಳಿಂದ ಗುಂಜಿ ಸುತ್ತಮುತ್ತಲಿನ ಹೊಲಗಳಲ್ಲಿ ಹಗಲು ಹೊತ್ತಲ್ಲೇ ಎರಡು ಆನೆಗಳು ಹಾಗೂ ಒಂದು ಮರಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಜನರು ಹೊಲಗಳಿಗೆ ತೆರಳಿ ಕೆಲಸ ಮಾಡುವುದಕ್ಕೂ ಭಯಪಡುವ ಪರಿಸ್ಥಿತಿ ಉಂಟಾಗಿದೆ.

ಭತ್ತ ಕಟಾವು ಸಂಕಷ್ಟದಲ್ಲಿದೆ

ಈ ಭಾಗದಲ್ಲಿ ಇನ್ನೂ ಸಾಕಷ್ಟು ಭತ್ತದ ಕಟಾವು ಬಾಕಿಯಿದ್ದು, ಆನೆಗಳ ಭೀತಿಯಿಂದ ಹಗಲು ಹೊತ್ತಲ್ಲೇ ಹೊಲಕ್ಕೆ ತೆರಳಿ ಕಟಾವು ಮಾಡುವುದು ರೈತರಿಗೆ ದೊಡ್ಡ ಸವಾಲಾಗಿದೆ. ಆನೆಗಳು ಯಾವಾಗ ಹೊಲಕ್ಕೆ ನುಗ್ಗುತ್ತವೆಯೋ ಎಂಬ ಅನುಮಾನದಿಂದ ರೈತರು ಸದಾ ಒತ್ತಡದಲ್ಲಿದ್ದಾರೆ.

ಕಟಾವು ವಿಳಂಬ; ಆತಂಕ ಹೆಚ್ಚಳ

ಗುಂಜಿ ಪ್ರದೇಶದಲ್ಲಿ ಸುಮಾರು ೨೫ ಶೇಕಡಾ ಭತ್ತದ ಕಟಾವು ಇನ್ನೂ ಉಳಿದಿದ್ದು, ಕೆಲವರು ಕಾರ್ಮಿಕರ ಕೊರತೆಯಿಂದಾಗಿ, ಇನ್ನೂ ಕೆಲವರು ಭತ್ತ ಸಂಪೂರ್ಣವಾಗಿ ಪಕ್ವವಾಗಲು ಕಾಯುತ್ತಿರುವುದರಿಂದ ಕಟಾವು ಮುಂದೂಡಿದ್ದಾರೆ. ಆದರೆ ಆನೆಗಳ ಅಟ್ಟಹಾಸದಿಂದ ಹಲವರು ಅರೆಪಕ್ವ ಭತ್ತವನ್ನೇ ಕತ್ತರಿಸಿ ಮನೆಗೆ ತರುವಂತಾಗಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

ಆನೆಗಳು ಈ ಪ್ರದೇಶದಲ್ಲೇ ನೆಲೆಸಿರುವುದರಿಂದ ರೈತರಲ್ಲಿ ಭಯ ಮುಂದುವರಿದಿದ್ದು, ಅರಣ್ಯ ಇಲಾಖೆ ತಕ್ಷಣವೇ ಆನೆ ತೆರವು ಕಾರ್ಯಾಚರಣೆ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದರಿಂದ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या