गणेबैल टोलवर कर्मचाऱ्यांचे पुन्हा ‘तळठोक’ आंदोलन | ಗಣೇಬೈಲ್ ಟೋಲ್ ಕಾರ್ಮಿಕರಿಂದ ಮತ್ತೆ ಟೋಲ್ ಬಂದ್ ಪ್ರತಿಭಟನೆ
खानापूर: गणेबैल टोल नाक्यावरील स्थानिक कामगारांच्या किमान वेतनाचा प्रश्न सुटण्याऐवजी अधिकच चिघळला आहे. NHAI च्या प्रोजेक्ट डायरेक्टरनी स्पष्ट आदेश देऊनही टोल प्रशासनाने आडमुठी भूमिका घेतल्याने, आज सकाळी ११ वाजेपासून कर्मचाऱ्यांनी पुन्हा एकदा ‘टोलबंद’ आंदोलन पुकारले आहे. गेल्या काही तासांपासून टोल वसुली पूर्णपणे बंद असून, सर्व वाहने विनाशुल्क (Free) सोडली जात आहेत.

प्रशासनाचा आदेश धाब्यावर
मिळालेल्या माहितीनुसार, काल NHAI च्या प्रोजेक्ट डायरेक्टरनी टोल मॅनेजमेंटला आज सकाळी १०:३० वाजेपर्यंत कामगारांच्या किमान वेतनाचा (Minimum Wage) प्रश्न मार्गी लावण्याचे कडक निर्देश दिले होते. मात्र, दिलेल्या मुदतीत व्यवस्थापनाकडून कोणताही सकारात्मक निर्णय न झाल्याने कर्मचाऱ्यांमध्ये संतापाची लाट उसळली. सरकारी नियम आणि लेबर कमिशनरच्या निकषांनुसार किमान वेतन मिळणे हा कामगारांचा कायदेशीर हक्क असताना, टोलचालक मात्र या मागणीकडे जाणीवपूर्वक दुर्लक्ष करत असल्याचा आरोप होत आहे.
राजकीय नेत्यांच्या भूमिकेवर प्रश्नचिन्ह
गेल्या ३ वर्षांपासून हे स्थानिक तरुण अत्यंत तुटपुंज्या पगारात काम करत आहेत. या पार्श्वभूमीवर काही लोकप्रतिनिधींच्या भूमिकेवरही आता तालुक्यात चर्चा रंगू लागली आहे. खानापूर भाजपची काही मंडळी केवळ स्वतःला टोलमुक्त करून घेण्यात धन्यता मानत आहेत, मात्र भूमिपुत्रांच्या पोटापाण्याच्या मूळ प्रश्नाकडे त्यांनी पाठ फिरवली असल्याची टीका काँग्रेस व आंदोलकांकडून होत आहे.
काँग्रेसचा आंदोलनाला खंबीर पाठिंबा
या लढ्यात खानापूर ब्लॉक काँग्रेस पूर्णपणे कर्मचाऱ्यांच्या पाठीशी उभी राहिली आहे. “जोपर्यंत कामगारांना न्याय मिळत नाही आणि किमान वेतन लागू होत नाही, तोपर्यंत हा लढा मागे घेतला जाणार नाही,” असा पवित्रा काँग्रेस नेत्यांनी घेतला आहे.
यावेळी कर्मचाऱ्यांना भेट देण्यासाठी सुरेश जाधव, प्रसाद पाटील, राजू नाईक, प्रमोद सुतार, पत्रकार विवेक गिरी, पत्रकार वासुदेव चौगुले, तोहीद चांदखानवर, लक्षण मोरे आणि परिसरातील मोठ्या संख्येने गावकरी व टोल कर्मचारी उपस्थित होते.
ಗಣೇಬೈಲ್ ಟೋಲ್ ಕಾರ್ಮಿಕರಿಂದ ಮತ್ತೆ ಟೋಲ್ ಬಂದ್ ಪ್ರತಿಭಟನೆ; ಆಡಳಿತ ಮಂಡಳಿಯ ಹಠಮಾರಿ ಧೋರಣೆಗೆ ಆಕ್ರೋಶ
ಖಾನಾಪುರ:
ಗಣೇಬೈಲ್ ಟೋಲ್ ನಾಕಾದ ಸ್ಥಳೀಯ ಕಾರ್ಮಿಕರ ಕನಿಷ್ಠ ವೇತನದ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಉಲ್ಬಣಗೊಂಡಿದೆ. NHAI ನ ಯೋಜನಾ ನಿರ್ದೇಶಕರು (Project Director) ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಸಹ, ಟೋಲ್ ಆಡಳಿತ ಮಂಡಳಿಯು ಹಠಮಾರಿ ಧೋರಣೆ ಮುಂದುವರಿಸಿದೆ. ಇದರ ಪರಿಣಾಮವಾಗಿ ಇಂದು ಬೆಳಿಗ್ಗೆ 11 ಗಂಟೆಯಿಂದ ಕಾರ್ಮಿಕರು ಮತ್ತೆ ‘ಟೋಲ್ ಬಂದ್’ ಚಳುವಳಿಯನ್ನು ಆರಂಭಿಸಿದ್ದಾರೆ. ಕಳೆದ ಎರಡು ಗಂಟೆಗಳಿಂದ ಟೋಲ್ ವಸೂಲಾತಿ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನಗಳನ್ನು ಉಚಿತವಾಗಿ ಬಿಡಲಾಗುತ್ತಿದೆ.
ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ
ಮೂಲಗಳ ಪ್ರಕಾರ, ನಿನ್ನೆ NHAI ಯೋಜನಾ ನಿರ್ದೇಶಕರು ಟೋಲ್ ಮ್ಯಾನೇಜ್ಮೆಂಟ್ಗೆ ಇಂದು ಬೆಳಿಗ್ಗೆ 10:30 ರೊಳಗೆ ಕಾರ್ಮಿಕರ ಕನಿಷ್ಠ ವೇತನದ (Minimum Wage) ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಆದರೆ, ನೀಡಿದ ಗಡುವಿನೊಳಗೆ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಕಾರ್ಮಿಕರಲ್ಲಿ ಆಕ್ರೋಶ ಭುಗಿಲೆದ್ದಿದೆ. ಸರ್ಕಾರಿ ನಿಯಮಗಳು ಮತ್ತು ಲೇಬರ್ ಕಮಿಷನರ್ ಮಾನದಂಡಗಳ ಪ್ರಕಾರ ಕನಿಷ್ಠ ವೇತನ ಪಡೆಯುವುದು ಕಾರ್ಮಿಕರ ಕಾನೂನುಬದ್ಧ ಹಕ್ಕಾಗಿದ್ದರೂ, ಟೋಲ್ ಮಾಲೀಕರು ಮಾತ್ರ ಈ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದ್ದಾರೆ.
ರಾಜಕೀಯ ನಾಯಕರ ಮೌನಕ್ಕೆ ಟೀಕೆ
ಕಳೆದ 3 ವರ್ಷಗಳಿಂದ ಈ ಸ್ಥಳೀಯ ಯುವಕರು ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಖಾನಾಪುರ ಬಿಜೆಪಿಯ ಕೆಲವು ಮುಖಂಡರು ಕೇವಲ ತಮ್ಮ ವಾಹನಗಳಿಗೆ ಟೋಲ್ ವಿನಾಯಿತಿ ಪಡೆಯುವುದರಲ್ಲಿ ಸಂತೃಪ್ತರಾಗಿದ್ದಾರೆ, ಆದರೆ ಭೂಮಿಪುತ್ರರಾದ ಕಾರ್ಮಿಕರ ಹಿತಾಸಕ್ತಿಯನ್ನು ಮರೆತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದರೂ ಸಂಸದರು ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಚುನಾವಣೆ ಬಂದಾಗ ಮಾತ್ರ ‘ಭೂಮಿಪುತ್ರ’ ಎನ್ನುವವರು ಈಗ ಎಲ್ಲಿ ಹೋಗಿದ್ದಾರೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
ಈ ಹೋರಾಟದಲ್ಲಿ ಖಾನಾಪುರ ಬ್ಲಾಕ್ ಕಾಂಗ್ರೆಸ್ ಸಂಪೂರ್ಣವಾಗಿ ಕಾರ್ಮಿಕರ ಪರವಾಗಿ ನಿಂತಿದೆ. ಕಾರ್ಮಿಕರಿಗೆ ನ್ಯಾಯ ಸಿಗುವವರೆಗೆ ಮತ್ತು ಕನಿಷ್ಠ ವೇತನ ಜಾರಿಯಾಗುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂಬ ನಿಲುವನ್ನು ತೆಗೆದುಕೊಳ್ಳಲಾಗಿದೆ.
