खानापूर

या गावांमध्ये जंगली हत्तींचा वावर वाढला; वनखात्याचा इशारा | ತಾಲ್ಲೂಕಿನ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ; ಸಾರ್ವಜನಿಕರಿಗೆ ಎಚ್ಚರಿಕೆ

खानापूर: खानापूर व बेळगाव तालुक्यांच्या सीमावर्ती भागातील काही गावांमध्ये जंगली हत्तींच्या कळपाचा वावर आढळून आला असल्याची माहिती वन विभागाने दिली आहे. नागरिकांची सुरक्षितता तसेच मालमत्तेचे संरक्षण लक्षात घेता, पुढील गावांतील नागरिकांना सतर्कतेचा इशारा देण्यात आला आहे.

इशारा देण्यात आलेली गावे :
बकानूर, बेळवट्टी, बैलूर, कुसमळी,
किनये, हब्बनहट्टी, देवाचीहट्टी.

नागरिकांसाठी सूचना :

  • वन परिसर टाळावा : सायंकाळी 6 ते सकाळी 8 या वेळेत हत्तींचा वावर अधिक असल्याने, या कालावधीत वनालगतच्या भागात किंवा शेतशिवारात एकटे जाणे टाळावे.
  • हत्तींची छेडछाड करू नये : हत्ती दिसल्यास दगडफेक, आरडाओरड किंवा मोबाईल फ्लॅश वापरून छायाचित्रे काढू नयेत. यामुळे हत्ती चिडण्याची शक्यता असते.
  • बेकायदेशीर विद्युत कुंपण निषिद्ध : अनधिकृत विद्युत कुंपण लावणे हा दंडनीय गुन्हा असून यामुळे मानव व वन्यजीवांना गंभीर धोका निर्माण होतो.
  • गटाने हालचाल करावी : अत्यावश्यक असल्यास गटानेच हालचाल करावी तसेच चालताना आवाज करून हत्तींच्या निदर्शनास मानवी उपस्थिती आणावी.

वन विभागाची कार्यवाही :

हत्तींच्या हालचालींवर लक्ष ठेवण्यासाठी वन विभागाने जलद प्रतिसाद पथक (आरआरटी) व वन कर्मचारी 24 तास तैनात केले आहेत. हत्तींचा सुरक्षितपणे वन क्षेत्रात परत जाण्यासाठी आवश्यक उपाययोजना करण्यात येत आहेत.

संपर्क :

आपल्या परिसरात हत्ती दिसून आल्यास तात्काळ जवळच्या वन कार्यालयाशी संपर्क साधावा किंवा पुढील क्रमांकावर माहिती द्यावी :

  • बेळगावी वन नियंत्रण कक्ष : 1926
  • वनपरिक्षेत्र अधिकारी (आरएफओ), खानापूर : 8105344308

नागरिकांनी वन विभागास पूर्ण सहकार्य करण्याचे आवाहन करण्यात आले आहे.

ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ; ಸಾರ್ವಜನಿಕರಿಗೆ ಎಚ್ಚರಿಕೆ

ಬೆಳಗಾವಿ :
ಖಾನಾಪುರ ಮತ್ತು ಬೆಳಗಾವಿ ತಾಲ್ಲೂಕುಗಳ ಗಡಿಭಾಗದ ಕೆಲವು ಗ್ರಾಮಗಳಲ್ಲಿ ಕಾಡಾನೆಗಳ ಗುಂಪಿನ ಸಂಚಾರ ಕಂಡುಬಂದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಆಸ್ತಿ ರಕ್ಷಣೆಯ ಹಿತದೃಷ್ಟಿಯಿಂದ ಕೆಳಕಂಡ ಗ್ರಾಮಗಳ ನಿವಾಸಿಗಳಿಗೆ ತುರ್ತು ಎಚ್ಚರಿಕೆ ನೀಡಲಾಗಿದೆ.

ಎಚ್ಚರಿಕೆ ನೀಡಲಾದ ಗ್ರಾಮಗಳು :
ಬಕಾನೂರು, ಬೆಳವಟ್ಟಿ, ಬೈಲೂರು, ಕುಸಮಳ್ಳಿ,
ಕಿನಯೆ, ಹಬ್ಬನಹಟ್ಟಿ, ದೇವಚಿಹಟ್ಟಿ.

ಸಾರ್ವಜನಿಕರಿಗೆ ಸೂಚನೆಗಳು :

ಅರಣ್ಯ ಪ್ರದೇಶಗಳಿಗೆ ತೆರಳಬೇಡಿ : ಸಂಜೆ 6 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಕಾಡಾನೆಗಳ ಸಂಚಾರ ಹೆಚ್ಚಿರುವುದರಿಂದ, ಈ ಸಮಯದಲ್ಲಿ ಅರಣ್ಯ ಅಂಚುಗಳು ಹಾಗೂ ಕೃಷಿಭೂಮಿಗಳ ಬಳಿ ಒಂಟಿಯಾಗಿ ತೆರಳುವುದನ್ನು ತಪ್ಪಿಸಬೇಕು.

ಕಾಡಾನೆಗಳಿಗೆ ಕಿರಿಕಿರಿ ಮಾಡಬೇಡಿ : ಕಾಡಾನೆಗಳು ಕಂಡುಬಂದರೆ ಕಲ್ಲು ಎಸೆಯುವುದು, ಕೂಗಾಡುವುದು ಅಥವಾ ಮೊಬೈಲ್ ಫ್ಲ್ಯಾಶ್ ಬಳಸಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಇದರಿಂದ ಕಾಡಾನೆಗಳು ಆಕ್ರಮಕವಾಗುವ ಸಾಧ್ಯತೆ ಇದೆ.

ಅಕ್ರಮ ವಿದ್ಯುತ್ ಬೇಲಿ ನಿಷೇಧ : ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸುವುದು ದಂಡನೀಯ ಅಪರಾಧವಾಗಿದ್ದು, ಮಾನವರು ಹಾಗೂ ವನ್ಯಜೀವಿಗಳಿಗೆ ಗಂಭೀರ ಅಪಾಯ ಉಂಟುಮಾಡುತ್ತದೆ.

ಗುಂಪಾಗಿ ಸಂಚರಿಸಿ : ಅನಿವಾರ್ಯ ಸಂದರ್ಭಗಳಲ್ಲಿ ಗುಂಪಾಗಿ ಸಂಚರಿಸಿ, ನಡೆಯುವಾಗ ಶಬ್ದ ಮಾಡುತ್ತಾ ಕಾಡಾನೆಗಳಿಗೆ ಮಾನವ ಸಾನ್ನಿಧ್ಯವನ್ನು ತಿಳಿಸಬೇಕು.


ಅರಣ್ಯ ಇಲಾಖೆಯ ಕ್ರಮ :

ಕಾಡಾನೆಗಳ ಸಂಚಾರದ ಮೇಲ್ವಿಚಾರಣೆಗೆ ಅರಣ್ಯ ಇಲಾಖೆಯ ವೇಗದ ಪ್ರತಿಕ್ರಿಯಾ ತಂಡ (ಆರ್‌ಆರ್‌ಟಿ) ಹಾಗೂ ಅರಣ್ಯ ಸಿಬ್ಬಂದಿಯನ್ನು 24 ಗಂಟೆಗಳ ಕಾಲ ನಿಯೋಜಿಸಲಾಗಿದೆ. ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಮರಳಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಂಪರ್ಕ :

ನಿಮ್ಮ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಸಮೀಪದ ಅರಣ್ಯ ಕಚೇರಿಯನ್ನು ಸಂಪರ್ಕಿಸಬೇಕು ಅಥವಾ ಕೆಳಗಿನ ಸಂಖ್ಯೆಗೆ ಮಾಹಿತಿ ನೀಡಬೇಕು :

ಬೆಳಗಾವಿ ಅರಣ್ಯ ನಿಯಂತ್ರಣ ಕೇಂದ್ರ : 1926

ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ), ಖಾನಾಪುರ : 8105344308

ಸಾರ್ವಜನಿಕರು ಅರಣ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या