कोंगळा गावातील वृद्धाला खुर्चीवरून नदी पार; जिल्हाधिकारी म्हणतात पुनर्वसन योजना..
खानापूर: तालुक्यातील भिमगड अभयारण्य परिसरात राहणाऱ्या नागरिकांना आजही मूलभूत सुविधा मिळत नाहीत. याचे ताजे उदाहरण म्हणजे कोंगळा गावातील एका वृद्ध व्यक्तीला खुर्चीवर बांधून साकव पार करावा लागला. सततच्या मुसळधार पावसामुळे रस्त्यांची दुरवस्था झाली असून, या भागात वाहनाने जाणे शक्य नसल्याने आरोग्य सेवा वेळेवर पोहोचू शकत नाही. अशाच परिस्थितीत श्री. वेंकट गावकर (वय 52) यांची प्रकृती अचानक खालावल्याने त्यांना रुग्णालयात हलवावे लागले. मात्र रस्ता नसल्याने गावकऱ्यांनी एका खुर्चीला पळकीसारखे तयार करून, त्यांना खांद्यावर उचलून नदी पार केली. एवढ्या प्रयत्नांनंतरही त्यांना वेळेवर वैद्यकीय मदत मिळू शकली नाही.
या घटनेनंतर बेळगाव जिल्हाधिकारी मोहम्मद रोशन यांनी याची गंभीर दखल घेतली आहे. त्यांनी शुक्रवारी सांगितले की, अशा घटनांवर कायमचा उपाय म्हणून सरकारने जंगलातील दुर्गम गावांसाठी पुनर्वसन योजना सुरू केली आहे. मागील वर्षी ‘तळेवाडी’ गावातील 30 कुटुंबांतील सुमारे 140 लोकांचे पुनर्वसन करण्यात आले होते. यंदा ‘आमगाव’ गावानंतर आता ‘कोंगळा’ गावासाठीही ही योजना राबविण्याचे प्रयत्न सुरू आहेत.
जिल्हाधिकाऱ्यांनी स्पष्ट केले की, ही पुनर्वसन योजना पूर्णतः ऐच्छिक असून कोणत्याही रहिवाशावर दबाव टाकला जाणार नाही. मात्र, अभयारण्याच्या आत शासकीय सेवा पोहोचवणे खूप कठीण आहे आणि नैसर्गिक आपत्तीमुळे जनजीवन संकटात सापडते. त्यामुळे रहिवाशांनी वसाहती क्षेत्रात स्थलांतर केल्यास त्यांना आवश्यक त्या सर्व सुविधांची पूर्तता करण्यात येईल.
ही घटना शासन आणि नागरिक दोघांसाठीही एक जागृतीची घंटा आहे. दुर्गम भागात राहणाऱ्यांसाठी तात्काळ व दीर्घकालीन उपाययोजना करणं अत्यंत गरजेचं बनलं आहे.
ಖಾನಾಪುರ: ತಾಲ್ಲೂಕಿನ ಭಿಮಗಡ ಅಭಯಾರಣ್ಯದ ಸುತ್ತಮುತ್ತದ ಗ್ರಾಮಗಳಲ್ಲಿ ಇಂದಿಗೂ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಇತ್ತೀಚಿನ ಉದಾಹರಣೆಯಾಗಿ ಕೋಗಳ ಗ್ರಾಮದಲ್ಲಿ ವೃದ್ಧನೊಬ್ಬನನ್ನು ಕುರ್ಚಿಗೆ ಕಟ್ಟಿಕೊಂಡು ಕಾಲುವೆ ದಾಟಿಸಿ ಆಸ್ಪತ್ರೆಗೆ ಸಾಗಿಸಬೇಕಾದ ದುರ್ಘಟನೆ ನಡೆದಿದೆ.
ಅತಿವೃಷ್ಟಿಯಿಂದ ರಸ್ತೆಗಳು ಕೆಸರುಮಯವಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಇದರ ಪರಿಣಾಮವಾಗಿ ಆರೋಗ್ಯ ಸೇವೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶ್ರೀ ವೆಂಕಟ್ ಗಾವಕರ (ವಯಸ್ಸು 52) ಅವರ ಆರೋಗ್ಯ ಏಕಾಏಕ ಕುಸಿದಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅಗತ್ಯವಾಯಿತು. ಆದರೆ ರಸ್ತೆ ಇಲ್ಲದ ಕಾರಣ, ಗ್ರಾಮಸ್ಥರು ಕುರ್ಚಿಯನ್ನು ಪಲಖಿಯ ರೂಪದಲ್ಲಿ ಸಿದ್ಧಪಡಿಸಿ, ಹೊತ್ತಕೊಂಡು ನದಿಯನ್ನು ದಾಟಿಸಿ ಸಾಗಿಸಬೇಕಾಯಿತು. ಇದಾದರೂ ಕೂಡ ಅವರನ್ನು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಹಾಯಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ.
ಈ ಘಟನೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗಂಭೀರವಾಗಿ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸರ್ಕಾರದ ಅತಿದುರಸ್ಥ ಅರಣ್ಯ ಪ್ರದೇಶಗಳ ಜನರಿಗೆ ಪುನರ್ವಸತಿ ಯೋಜನೆ ಜಾರಿಯಲ್ಲಿದ್ದು, ಕಳೆದ ವರ್ಷ ‘ತಲೆವಾಡಿ’ ಎಂಬ ಗ್ರಾಮದಿಂದ ಸುಮಾರು 30 ಕುಟುಂಬಗಳನ್ನು ಪುನರ್ವಸತಿ ಮಾಡಲಾಗಿದೆ. ಈ ವರ್ಷ ‘ಆಮಗಾವ್’ ನಂತರ ‘ಕೋಗಳ’ ಗ್ರಾಮವನ್ನೂ ಈ ಯೋಜನೆಗೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಜಿಲ್ಲಾಧಿಕಾರಿಯವರ ಪ್ರಕಾರ ಈ ಯೋಜನೆ ಪೂರ್ಣವಾಗಿ ಐಚ್ಛಿಕವಾಗಿದ್ದು, ಯಾರ ಮೇಲೂ ಬಲಾತ್ಕಾರ ಇರುವುದಿಲ್ಲ. ಆದರೆ ಅಭಯಾರಣ್ಯದ ಒಳಗೆ ಸರ್ಕಾರಿ ಸೇವೆಗಳು ತಲುಪುವುದು ಬಹಳ ಕಷ್ಟಕರವಾಗಿದ್ದು, ಪ್ರಕೃತಿ ವಿಕೋಪದ ಸಮಯದಲ್ಲಿ ನಾಗರಿಕ ಜೀವನ ಸಂಕಟಕ್ಕೀಡಾಗುತ್ತದೆ. ಆದ್ದರಿಂದ ಜನರು ಪುನರ್ವಸತಿ ಪ್ರದೇಶಕ್ಕೆ ಸ್ಥಳಾಂತರವಾದರೆ, ಅವರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ಘಟನೆ ಸರ್ಕಾರ ಮತ್ತು ನಾಗರಿಕರಿಬ್ಬರಿಗೂ ಎಚ್ಚರಿಕೆಯ ಘಂಟೆಯಾಗಿದ್ದು, ಅತಿದುರಸ್ಥ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಕ್ಷಣ ಹಾಗೂ ದೀರ್ಘಕಾಲಿಕ ಪರಿಹಾರ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.