सरकारी बसच्या धडकेत एक म्हैस व दोन रेडके ठार; शेतकरी संकटात | ಸರ್ಕಾರಿ ಬಸ್ ಡಿಕ್ಕಿಗೆ ಎಮ್ಮೆ, ಎರಡು ಕರುಗಳು ಬಲಿ; ಜಗಲಬೆಟ್ ರೈತನಿಗೆ ಭಾರೀ ನಷ್ಟ
रामनगर, दि. 19 जून: रामनगर–जगलबेट मार्गावरील चांदवाडी क्रॉसजवळ, बुरभुसा गावाकडे जाणाऱ्या फाट्याजवळ आज सायंकाळी साडेसहा वाजण्याच्या सुमारास भीषण अपघात घडला. दांडेलीहून रामनगरकडे येणाऱ्या सरकारी बसने रस्त्याच्या कडेला असलेल्या म्हशींच्या कळपाला जोरदार धडक दिली.
या अपघातात जगलबेट येथील तुकाराम हानबर यांच्या मालकीची एक म्हैस व दोन रेडके जागीच ठार झाली. तसेच चार म्हशी जखमी झाल्या आहेत. या दुर्घटनेमुळे पशुपालकाचे लाखो रुपयांचे नुकसान झाले असून परिसरात हळहळ व्यक्त होत आहे.
घटनेची माहिती मिळताच स्थानिक नागरिकांनी घटनास्थळी धाव घेतली. जखमी जनावरांवर उपचारासाठी पशुवैद्यकीय विभागाशी संपर्क साधण्यात आला आहे. अपघातामुळे काही काळ वाहतुकीवरही परिणाम झाला.
या घटनेमुळे पशुपालकावर आर्थिक संकट कोसळले असून शासनाने तातडीने नुकसानभरपाई द्यावी, अशी मागणी स्थानिक नागरिकांकडून करण्यात येत आहे.
ಸರ್ಕಾರಿ ಬಸ್ ಡಿಕ್ಕಿ: ಒಂದು ಎಮ್ಮೆ, ಎರಡು ಕರುಗಳು ಸ್ಥಳದಲ್ಲೇ ಸಾವು; ರೈತನಿಗೆ ಲಕ್ಷಾಂತರ ರೂ. ನಷ್ಟ
ರಾಮನಗರ, ಜೂನ್ 19: ರಾಮನಗರ–ಜಗಲಬೆಟ್ ರಸ್ತೆಯ ಚಾಂದವಾಡಿ ಕ್ರಾಸ್ ಸಮೀಪ, ಬುರಭುಸಾ ಕಡೆಗೆ ಹೋಗುವ ತಿರುವಿನ ಬಳಿ ಇಂದು ಸಂಜೆ ಸುಮಾರು 6.30 ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ. ದಾಂಡೇಲಿಯಿಂದ ರಾಮನಗರದ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಎಮ್ಮೆಗಳ ಹಿಂಡಿಗೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಜಗಲಬೆಟ್ ಗ್ರಾಮದ ತುಕಾರಾಮ ಹನಬರ ಅವರ ಮಾಲೀಕತ್ವದ ಒಂದು ಎಮ್ಮೆ ಹಾಗೂ ಎರಡು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೆ ನಾಲ್ಕು ಎಮ್ಮೆಗಳು ಗಾಯಗೊಂಡಿದ್ದು, ಅವುಗಳಿಗೆ ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರ್ಘಟನೆಯಿಂದ ಪಶುಪಾಲಕನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೆರವು ಕಾರ್ಯದಲ್ಲಿ ತೊಡಗಿದರು.
ಅಪಘಾತದ ಪರಿಣಾಮವಾಗಿ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಯಿತು. ಮೃತಪಟ್ಟ ಹಾಗೂ ಗಾಯಗೊಂಡ ಜಾನುವಾರುಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

