हेम्माडगा-अनमोड रोडवर पाली जवळ अपघात, महिलेने गमावला जीव, चार दिवसात दुसरा बळी
खानापूर: हेम्माडगा-अनमोड मार्गावरील पाली परिसरात आज सायंकाळी सुमारे 4 वाजण्याच्या सुमारास झालेल्या भीषण अपघातात एका महिलेचा जागीच मृत्यू झाला, तर तिचे पती गंभीर जखमी झाले. समोरून येणाऱ्या अवजड वाहनाला चुकवण्याच्या प्रयत्नात कारवरील नियंत्रण सुटून ती रस्त्याशेजारील झाडावर आदळल्याने हा अपघात झाला.
या अपघातात जागृती दत्तप्रसाद हरिदास (माहेर कोणशेत, सध्या राहणार ओल्ड गोवा) यांचा मृत्यू झाला. त्यांचे पती दत्तप्रसाद हरिदास हे गंभीर जखमी असून, त्यांच्यावर गोवा येथील रुग्णालयात उपचार सुरू आहेत.
विवाह समारंभाहून परतताना दुर्घटना
हरिदास दांपत्य खानापूर येथे एका विवाह समारंभासाठी आले होते. कार्यक्रम आटोपून कार क्रमांक GA 08 N 3214 ने ओल्ड गोवाकडे परत जात असताना पाली वळणाजवळ समोरून वेगात येणाऱ्या अवजड वाहनाला चुकवताना चालकाचे नियंत्रण सुटले. यामुळे कार थेट झाडावर आदळली. अपघाताच्या जोरदार धडकेत डाव्या बाजूला बसलेल्या जागृती हरिदास यांचा जागीच मृत्यू झाला.अपघातप्रवण वळण ठरत आहे जीवघेणे
अपघातप्रवण वळण ठरत आहे जीवघेणे
विशेष म्हणजे, याच पाली वळणावर अवघ्या चार दिवसांपूर्वी १३ वर्षीय मुलाचा अपघाती मृत्यू झाला होता. तसेच गेल्या २० दिवसांत खानापूर पोलीस स्थानकाच्या हद्दीत सुमारे २० अपघातांची नोंद झाली आहे. यामुळे हा मार्ग अत्यंत अपघातप्रवण ठरत असल्याचे स्पष्ट झाले असून, प्रवाशांमध्ये भीतीचे वातावरण निर्माण झाले आहे.
खानापूर पोलिसांनी या घटनेची नोंद घेतली असून पुढील तपास सुरू आहे.
ಅನಮೋಡ–ಹೆಮಡಗಾ ಮಾರ್ಗದಲ್ಲಿ ಭೀಕರ ಅಪಘಾತ; ಕಾರು ಮರಕ್ಕೆ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತ್ಯು, ಪತಿ ಗಂಭೀರ
ಖಾನಾಪುರ:
ಅನಮೋಡ–ಹೆಮಡಗಾ ಮಾರ್ಗದ ಪಾಲಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎದುರಿನಿಂದ ವೇಗವಾಗಿ ಬಂದ ಭಾರೀ ವಾಹನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಈ ಅಪಘಾತದಲ್ಲಿ ಜಾಗೃತಿ ದತ್ತಪ್ರಸಾದ್ ಹರಿದಾಸ್ (: Old Goa) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ದತ್ತಪ್ರಸಾದ್ ಹರಿದಾಸ್ ಗಂಭೀರ ಗಾಯಗೊಂಡಿದ್ದು, ಗೋವಾ ರಾಜ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದುವೆ ಕಾರ್ಯಕ್ರಮದಿಂದ ವಾಪಸ್ಸಾಗುವಾಗ ದುರಂತ
ಹರಿದಾಸ್ ದಂಪತಿ ಖಾನಾಪುರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಕಾರ್ಯಕ್ರಮ ಮುಗಿಸಿ ಕಾರು ಸಂಖ್ಯೆ GA 08 N 3214 ನಲ್ಲಿ ಓಲ್ಡ್ ಗೋವಾಕ್ಕೆ ತೆರಳುತ್ತಿದ್ದ ವೇಳೆ ಪಾಲಿ ತಿರುವಿನ ಬಳಿ ಎದುರಿನಿಂದ ವೇಗವಾಗಿ ಬಂದ ಭಾರೀ ವಾಹನವನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರಿನ ನಿಯಂತ್ರಣ ತಪ್ಪಿ ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಎಡಭಾಗದಲ್ಲಿ ಕುಳಿತಿದ್ದ ಜಾಗೃತಿ ಹರಿದಾಸ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತಪ್ರವಣ ತಿರುವು; ನಾಗರಿಕರಲ್ಲಿ ಆತಂಕ
ವಿಶೇಷವೆಂದರೆ, ಇದೇ ಪಾಲಿ ತಿರುವಿನಲ್ಲಿ ನಾಲ್ಕು ದಿನಗಳ ಹಿಂದಷ್ಟೇ 13 ವರ್ಷದ ಬಾಲಕನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಕಳೆದ 20 ದಿನಗಳಲ್ಲಿ ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ರಸ್ತೆ ಅಪಘಾತಗಳು ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಇದರಿಂದ ಈ ಮಾರ್ಗವನ್ನು ಅತ್ಯಂತ ಅಪಘಾತಪ್ರವಣ ಪ್ರದೇಶವೆಂದು ಪರಿಗಣಿಸಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

