कोडगई क्रॉसजवळ भीषण अपघात; तरुणाचा जागीच मृत्यू, एक गंभीर
रामनगर: रामनगर–धारवाड मार्गावरील कोडगई क्रॉसजवळ आज पहाटे झालेल्या भीषण अपघातात दुचाकीवर मागे बसलेल्या तरुणाचा जागीच मृत्यू झाला, तर दुचाकी चालक गंभीर जखमी झाला आहे.
हुबळीहून फोंडा (गोवा) कडे जाणाऱ्या बुलेरो पिकअप वाहनाने समोरून येणाऱ्या अॅक्टिवा दुचाकीला (क्रमांक GA 05 R 6404 जोरदार धडक दिली. या अपघातात दुचाकीवर मागे बसलेला मोहम्मद इजाज (वय 18, रा. बेतोडा, फोंडा-गोवा) याचा जागीच मृत्यू झाला. तर दुचाकी चालक अब्दुल लतीफ (वय 22, रा. बेतोडा, फोंडा-गोवा) हा गंभीर जखमी झाला असून त्याला 108 रुग्णवाहिकेद्वारे तातडीने बेळगाव येथील रुग्णालयात दाखल करण्यात आले आहे.
अपघातानंतर बुलेरो चालक वाहनासह धारवाडच्या दिशेने पळून गेला. मात्र कुंभार्डा नजीक वाहनाचा टायर फुटल्याने तो थांबला. दरम्यान, अपघातग्रस्तांच्या मित्र व नातेवाईकांनी पाठलाग करून बुलेरो चालकाला पकडले व पोलिसांच्या स्वाधीन केले.
मृत व जखमी हे दोघे रविवारी हुबळी येथे एका कार्यक्रमासाठी गेले होते. या प्रकरणाची नोंद खानापूर पोलीस ठाण्यात करण्यात आली आहे.
या अपघातामुळे परिसरात हळहळ व्यक्त होत असून, संबंधित यंत्रणांनी तातडीच्या वैद्यकीय सेवेबाबत गंभीर दखल घ्यावी, अशी मागणी नागरिकांतून होत आहे.
ರಾಮನಗರ–ಧಾರವಾಡ ರಸ್ತೆ ಮೇಲೆ ಭೀಕರ ಅಪಘಾತ; ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಂಭೀರ
ರಾಮನಗರ:
ರಾಮನಗರ–ಧಾರವಾಡ ಮುಖ್ಯ ರಸ್ತೆಯ ಕೋಡಗಈ ಕ್ರಾಸ್ ಸಮೀಪ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರನಾಗಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹುಬ್ಬಳಿಯಿಂದ ಫೊಂಡಾ (ಗೋವಾ) ಕಡೆಗೆ ತೆರಳುತ್ತಿದ್ದ ಬುಲೆರೊ ಪಿಕಪ್ ವಾಹನ ಎದುರಿನಿಂದ ಬರುತ್ತಿದ್ದ ಆಕ್ಟಿವಾ ದ್ವಿಚಕ್ರ ವಾಹನಕ್ಕೆ ನೋಂದಣಿ ಸಂಖ್ಯೆ GA 05 R 6404) ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಕ್ಟಿವಾ ಮೇಲೆ ಹಿಂಬದಿ ಕುಳಿತಿದ್ದ ಮೊಹಮ್ಮದ್ ಇಜಾಜ್ (18), ನಿವಾಸಿ ಬೆತೊಡಾ, ಫೊಂಡಾ – ಗೋವಾ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನ ಚಾಲಕ ಅಬ್ದುಲ್ ಲತೀಫ್ (22), ನಿವಾಸಿ ಬೆತೊಡಾ, ಫೊಂಡಾ – ಗೋವಾ ಗಂಭೀರವಾಗಿ ಗಾಯಗೊಂಡಿದ್ದು, 108 ಆಂಬ್ಯುಲೆನ್ಸ್ ಮೂಲಕ ತಕ್ಷಣ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಂತರ ಬುಲೆರೊ ಚಾಲಕ ವಾಹನದೊಂದಿಗೆ ಧಾರವಾಡದ ದಿಕ್ಕಿನಲ್ಲಿ ಪರಾರಿಯಾಗಿದ್ದಾನೆ. ಆದರೆ ಕುಂಭಾರ್ಡಾ ಗ್ರಾಮದ ಬಳಿ ಬುಲೆರೊ ವಾಹನದ ಟೈರ್ ಸ್ಫೋಟಗೊಂಡ ಕಾರಣ ಚಾಲಕ ನಿಂತಿದ್ದಾನೆ. ಈ ವೇಳೆ ಅಪಘಾತಕ್ಕೊಳಗಾದವರ ಸ್ನೇಹಿತರು ಮತ್ತು ಸಂಬಂಧಿಕರು ವಾಹನವನ್ನು ಹಿಂಬಾಲಿಸಿ ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮೃತ ಮೊಹಮ್ಮದ್ ಇಜಾಜ್ ಹಾಗೂ ಗಾಯಗೊಂಡ ಅಬ್ದುಲ್ ಲತೀಫ್ ಇಬ್ಬರೂ ಭಾನುವಾರ ಹುಬ್ಬಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದು, ಸೋಮವಾರ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
