देवलत्ती पुलावर टायर फुटून ऊस वाहतूक करणारा ट्रॅक्टर नदीत कोसळला, चालक गंभीर| ದೇವಲತ್ತಿ ಸೇತುವೆ ಬಳಿ ಟೈರ್ ಸ್ಫೋಟ; ಕಬ್ಬು ಸಾಗಣೆ ಟ್ರ್ಯಾಕ್ಟರ್ ನದಿಗೆ ಉರುಳಿ
खानापूर : आज शुक्रवार, दिनांक 30 जानेवारी 2026 रोजी दुपारी सुमारे 1 वाजण्याच्या सुमारास लैला शुगर प्रायव्हेट लिमिटेड कारखान्याचा ऊस वाहतूक करणारा ट्रॅक्टर एम.के. हुबळी गावाकडे ऊस भरण्यासाठी जात असताना देवलत्ती गावाजवळील पुलावर त्याचा टायर अचानक फुटला. त्यामुळे ट्रॅक्टरचा ताबा सुटून तो थेट नदीत कोसळला. यामध्ये चालक गंभीर जखमी झाला आहे.
या अपघातात ट्रॅक्टरचे मोठ्या प्रमाणात नुकसान झाले असून लाखोंचे आर्थिक नुकसान झाल्याचा अंदाज आहे. घटनास्थळावरून मिळालेल्या माहितीनुसार अपघातानंतर जखमी चालकाला मदतीसाठी तब्बल अर्धा तास फोन करूनही एकही रुग्णवाहिका वेळेत उपलब्ध न झाल्याने नागरिकांतून संताप व्यक्त केला जात आहे.
या अपघातात ट्रॅक्टर चालक सुभाष शिंदे (वय अंदाजे 48, मूळ रा. बीड जिल्हा) हे गंभीर जखमी झाले असून सध्या त्यांना उपचारासाठी खानापूर येथील सरकारी रुग्णालयात सध्या दाखल करण्यात आले आहे.
घटनेची माहिती मिळताच स्थानिक नागरिकांनी घटनास्थळी धाव घेऊन मदतकार्य केले.
ದೇವಲತ್ತಿ ಸೇತುವೆ ಬಳಿ ಟೈರ್ ಸ್ಫೋಟ; ಕಬ್ಬು ಸಾಗಣೆ ಟ್ರ್ಯಾಕ್ಟರ್ ನದಿಗೆ ಉರುಳಿ — ಲಕ್ಷಾಂತರ ರೂಪಾಯಿ ನಷ್ಟ
ಖಾನಾಪುರ : ಇಂದು ಶುಕ್ರವಾರ, ದಿನಾಂಕ 30 ಜನವರಿ 2026 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಲೈಲಾ ಶುಗರ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಕಬ್ಬು ಸಾಗಣೆ ಮಾಡುವ ಮಹಾಲ್ ಟ್ರ್ಯಾಕ್ಟರ್ ಎಂ.ಕೆ. ಹುಬಳ್ಳಿ ಗ್ರಾಮದ ಕಡೆ ಕಬ್ಬು ತುಂಬಿಸಲು ತೆರಳುತ್ತಿದ್ದಾಗ ದೇವಲತ್ತಿ ಗ್ರಾಮದ ಸಮೀಪದ ಸೇತುವೆ ಮೇಲೆ ಟ್ರ್ಯಾಕ್ಟರ್ನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ನೇರವಾಗಿ ನದಿಗೆ ಉರುಳಿ ಬಿದ್ದಿದೆ.
ಈ ಅಪಘಾತದಲ್ಲಿ ಟ್ರ್ಯಾಕ್ಟರ್ಗೆ ಭಾರೀ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಅಪಘಾತದ ವೇಳೆ ಟ್ರ್ಯಾಕ್ಟರ್ನಲ್ಲಿ ಕಬ್ಬು ತುಂಬಿದ್ದ ಕಾರಣ ನಷ್ಟದ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಸುಭಾಷ ಶಿಂಧೆ (ವಯಸ್ಸು ಅಂದಾಜು 48, ಮೂಲ ನಿವಾಸಿ – ಬೀಡ್ ಜಿಲ್ಲೆ) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಗಾಯಾಳುವಿಗೆ ಸಹಾಯಕ್ಕಾಗಿ ಸತತವಾಗಿ ಸುಮಾರು ಅರ್ಧ ಗಂಟೆ ಕಾಲ ಕರೆ ಮಾಡಿದರೂ ಯಾವುದೇ ಆಂಬ್ಯುಲೆನ್ಸ್ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಂತರ ಸ್ಥಳೀಯರ ಸಹಕಾರದಿಂದ ಗಾಯಾಳು ಚಾಲಕನನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಗಾಯಾಳುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸೇವೆಗಳ ವಿಳಂಬ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

