खानापूर

जटगे गावात भव्य कीर्तन सोहळा; ह.भ.प. ओंकार महाराज सूर्यवंशी यांची रंगणार सेवा |  ಜಟಗೆ ಗ್ರಾಮದಲ್ಲಿ ಭವ್ಯ ಕೀರ್ತನೆ ಸೋಹಳ; ಹ.ಭ.ಪ. ಓಂಕಾರ ಮಹಾರಾಜ್ ಸೂರ್ಯವಂಶಿ ಅವರಿಂದ ಹರಿನಾಮ ಸಂಕೀರ್ತನೆ

जटगे: खानापूर(बेळगांव) तालुक्यातील जटगे गावामध्ये आध्यात्मिक चैतन्य निर्माण करणाऱ्या एका भव्य कीर्तन सोहळ्याचे आयोजन करण्यात आले आहे. ‘ज्ञानोबा-तुकोबा आध्यात्मिक वारकरी शिक्षण संस्था’ (तुरंबे, महाराष्ट्र) येथील प्रसिद्ध युवा कीर्तनकार ह.भ.प. ओंकार महाराज सूर्यवंशी यांची कीर्तन सेवा यानिमित्ताने आयोजित करण्यात आली असून, संपूर्ण गावात भक्तीमय वातावरण निर्माण झाले आहे.

४० ते ४५ युवा वारकऱ्यांचा सहभाग

या कीर्तन सोहळ्याचे विशेष आकर्षण म्हणजे यात वारकरी शिक्षण संस्थेतील ४० ते ४५ युवा वारकरी सक्रिय सहभाग घेणार आहेत. युवा पिढीचा वारकरी संप्रदायातील हा उत्साह आणि शिस्त जटगे गावाच्या सांस्कृतिक इतिहासातील एक सुवर्णक्षण ठरणार आहे. हा सोहळा २३ जानेवारी रोजी रात्री ठीक ९:०० वाजता चव्हाटा मंदिर येथे पार पडणार आहे.

परिसरातील भाविकांना उपस्थित राहण्याचे आवाहन

या ऐतिहासिक भक्ती सोहळ्याला अनेक मान्यवर पाहुणे उपस्थित राहणार आहेत. जटगे गावासह आजूबाजूच्या परिसरातील सर्व वारकरी बांधव, युवक-युवती आणि माता-भगिनींनी या सामूहिक पारायण व कीर्तन सोहळ्यास मोठ्या संख्येने उपस्थित राहावे. हरिनामाच्या गजरात आणि भक्तिरसात सहभागी होऊन या सोहळ्याचे साक्षीदार व्हावे, असे आवाहन समस्त ग्रामस्थांच्या वतीने करण्यात आले आहे.

ಜಟಗೆ ಗ್ರಾಮದಲ್ಲಿ ಭವ್ಯ ಕೀರ್ತನೆ ಸೋಹಳ; ಹ.ಭ.ಪ. ಓಂಕಾರ ಮಹಾರಾಜ್ ಸೂರ್ಯವಂಶಿ ಅವರಿಂದ ಹರಿನಾಮ ಸಂಕೀರ್ತನೆ

ಜಟಗೆ (ಖಾನಾಪುರ):

ತಾಲೂಕಿನ ಜಟಗೆ ಗ್ರಾಮದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚೈತನ್ಯ ಮೂಡಿಸುವ ನಿಟ್ಟಿನಲ್ಲಿ ಐತಿಹಾಸಿಕ ಕೀರ್ತನೆ ಸೋಹಳವನ್ನು ಹಮ್ಮಿಕೊಳ್ಳಲಾಗಿದೆ. ಮಹಾರಾಷ್ಟ್ರದ ತುರಂಬೆಯ ‘ಜ್ಞಾನೋಬಾ-ತುಕೋಬಾ ಆಧ್ಯಾತ್ಮಿಕ ವಾರಕರಿ ಶಿಕ್ಷಣ ಸಂಸ್ಥೆ’ಯ ಖ್ಯಾತ ಯುವ ಕೀರ್ತನೆಕಾರರಾದ ಹ.ಭ.ಪ. ಓಂಕಾರ ಮಹಾರಾಜ್ ಸೂರ್ಯವಂಶಿ ಅವರು ಈ ಭಕ್ತಿ ಸೇವೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವು ಜನವರಿ 23 ರಂದು ರಾತ್ರಿ 9:00 ಗಂಟೆಗೆ ಸರಿಯಾಗಿ ಗ್ರಾಮದ ಚವ್ವಾಟಾ ಮಂದಿರದಲ್ಲಿ ಜರುಗಲಿದೆ.

ಯುವ ವಾರಕರಿಗಳ ಭರ್ಜರಿ ಸಹಭಾಗಿತ್ವ

ಈ ಸಮಾರಂಭದ ವಿಶೇಷವೆಂದರೆ, ಜ್ಞಾನೋಬಾ-ತುಕೋಬಾ ವಾರಕರಿ ಶಿಕ್ಷಣ ಸಂಸ್ಥೆಯ ಸುಮಾರು 40 ರಿಂದ 45 ಯುವ ವಾರಕರಿಗಳು ಈ ಕೀರ್ತನೆ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ತಾಳ-ಮೃದಂಗಗಳ ನಾದದೊಂದಿಗೆ ನಡೆಯಲಿರುವ ಈ ಸೋಹಳವು ಗ್ರಾಮದ ಧಾರ್ಮಿಕ ಇತಿಹಾಸದಲ್ಲಿ ಒಂದು ಸುವರ್ಣ ಕ್ಷಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಕ್ತಾದಿಗಳಿಗೆ ಮುಕ್ತ ಆಹ್ವಾನ

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಟಗೆ ಗ್ರಾಮದ ಸಮಸ್ತ ಭಕ್ತರು, ವಾರಕರಿ ಸಂಪ್ರದಾಯದ ಅನುಯಾಯಿಗಳು, ಯುವಕ-ಯುವತಿಯರು ಮತ್ತು ಮಾತೃಶಕ್ತಿಯು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಸಾಮೂಹಿಕ ಕೀರ್ತನೆಯ ಭಕ್ತಿರಸವನ್ನು ಸವಿಯಬೇಕೆಂದು ಗ್ರಾಮಸ್ಥರ ಪರವಾಗಿ ವಿನಂತಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಸಹ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕೆಂದು ಕೋರಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या