आंबेवाडीच्या शहीद जवानाला बेळगाव व खानापूर तालुक्याची मानवंदना | ಆಂಬೇವಾಡಿಯ ಶಹೀದ ಸೈನಿಕನಿಗೆ ಬೆಳಗಾವಿ- ಖಾನಾಪುರ ತಾಲ್ಲೂಕಿನ ಗೌರವಾಂಜಲಿ
बेळगाव : सैन्यात सेवा बजावत असताना हौतात्म्य पत्करलेल्या आंबेवाडी (ता. बेळगाव, जि. बेळगाव) येथील जवान मयूर लक्ष्मण ढोपे (वय २८) यांना संपूर्ण बेळगाव जिल्हा, बेळगाव तालुका आणि खानापूर तालुक्याने अश्रूंनी निरोप दिला. बुधवारी सकाळी त्यांच्या मूळ गावी आंबेवाडी येथे लष्करी इतमामात अंत्यसंस्कार करण्यात आले. या वेळी संपूर्ण परिसर हळहळला.
युद्धासंबंधी प्रशिक्षण सुरू असताना मयूर ढोपे गंभीर जखमी झाले होते. १० नोव्हेंबर रोजी प्रशिक्षणादरम्यान ते गंभीर भाजले गेले. त्यांना उपचारासाठी कोलकाता येथील रुग्णालयात दाखल करण्यात आले होते. गेल्या महिनाभर त्यांच्यावर उपचार सुरू होते. मात्र उपचारांचा उपयोग न होता १४ डिसेंबर रोजी त्यांचे निधन झाले. याबाबतची माहिती लष्कराकडून त्यांच्या कुटुंबीयांना देण्यात आली होती.
मयूर ढोपे सात वर्षांपूर्वी भारतीय सैन्यात भरती झाले होते. मंगळवारी रात्री त्यांचे पार्थिव मराठा लाईट इन्फंट्री केंद्रात आणण्यात आले. त्यानंतर बुधवारी सकाळी लष्करी वाहनातून पार्थिव आंबेवाडी येथे आणण्यात आले. गावात पार्थिव दाखल होताच कुटुंबीयांचा आक्रोश पाहून उपस्थितांचे डोळे पाणावले.
लष्करी सन्मानासह शहीद जवानावर अंत्यसंस्कार करण्यात आले. यावेळी लष्कराचे अधिकारी, प्रशासनाचे प्रतिनिधी, लोकप्रतिनिधी, माजी सैनिक तसेच मोठ्या संख्येने नागरिक उपस्थित होते. सर्वांनी शहीद जवान मयूर लक्ष्मण ढोपे यांना श्रद्धांजली अर्पण केली.
शौर्य आणि बलिदानाच्या या घटनेमुळे बेळगाव जिल्ह्यासह बेळगाव व खानापूर तालुका शोकसागरात बुडाले आहेत.
ಆಂಬೇವಾಡಿಯ ಶಹೀದ ಸೈನಿಕನಿಗೆ ಬೆಳಗಾವಿ- ಖಾನಾಪುರ ತಾಲ್ಲೂಕಿನ ಗೌರವಾಂಜಲಿ
ಬೆಳಗಾವಿ : ಪ್ರತಿನಿಧಿ
ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಶಹೀದರಾದ ಆಂಬೇವಾಡಿ (ತಾ. ಬೆಳಗಾವಿ, ಜಿ. ಬೆಳಗಾವಿ) ಗ್ರಾಮದ ಸೈನಿಕ ಮಯೂರ ಲಕ್ಷ್ಮಣ ಧೋಪೆ (ವಯಸ್ಸು 28) ಅವರಿಗೆ ಸಂಪೂರ್ಣ ಬೆಳಗಾವಿ ಜಿಲ್ಲೆ, ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನ ಜನತೆ ಕಂಬನಿಯೊಂದಿಗೆ ಅಂತಿಮ ವಿದಾಯ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ಆಂಬೇವಾಡಿಯಲ್ಲಿ ಸೈನಿಕ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಇಡೀ ಪ್ರದೇಶವೇ ಶೋಕದಲ್ಲಿ ಮುಳುಗಿತ್ತು.
ಯುದ್ಧಾಭ್ಯಾಸ ಸಂಬಂಧಿತ ತರಬೇತಿ ನಡೆಯುತ್ತಿದ್ದ ಸಂದರ್ಭದಲ್ಲಿ ಮಯೂರ ಧೋಪೆ ಗಂಭೀರವಾಗಿ ಗಾಯಗೊಂಡಿದ್ದರು. ನವೆಂಬರ್ 10ರಂದು ತರಬೇತಿಯ ವೇಳೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಮುಂದುವರಿದಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 14ರಂದು ಅವರು ಕೊನೆಯುಸಿರೆಳೆದರು. ಈ ಕುರಿತು ಸೈನ್ಯಾಧಿಕಾರಿಗಳು ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಮಯೂರ ಧೋಪೆ ಅವರು ಏಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಮಂಗಳವಾರ ರಾತ್ರಿ ಅವರ ಪಾರ್ಥಿವ ಶರೀರವನ್ನು ಮರಾಠಾ ಲೈಟ್ ಇನ್ಫ್ಯಾಂಟ್ರಿ ಕೇಂದ್ರಕ್ಕೆ ತರಲಾಗಿತ್ತು. ಬಳಿಕ ಬುಧವಾರ ಬೆಳಿಗ್ಗೆ ಸೈನಿಕ ವಾಹನದ ಮೂಲಕ ಆಂಬೇವಾಡಿಗೆ ಪಾರ್ಥಿವ ಶರೀರ ತರಲಾಯಿತು. ಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಎಲ್ಲರ ಮನಸ್ಸುಗಳನ್ನು ಕಲಕಿತು.
ಸೈನಿಕ ಗೌರವಗಳೊಂದಿಗೆ ಶಹೀದ ಸೈನಿಕನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಸೈನ್ಯಾಧಿಕಾರಿಗಳು, ಆಡಳಿತದ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಮಾಜಿ ಸೈನಿಕರು ಹಾಗೂ ಅಪಾರ ಸಂಖ್ಯೆಯ ನಾಗರಿಕರು ಉಪಸ್ಥಿತರಿದ್ದು ಶಹೀದ ಮಯೂರ ಲಕ್ಷ್ಮಣ ಧೋಪೆ ಅವರಿಗೆ ಗೌರವಾಂಜಲಿ ಸಲ್ಲಿಸಿದರು.
ಈ ವೀರ ಸೈನಿಕನ ಬಲಿದಾನದಿಂದ ಬೆಳಗಾವಿ ಜಿಲ್ಲೆ, ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕು ಶೋಕಸಾಗರದಲ್ಲಿ ಮುಳುಗಿದೆ.

