आरटीओ कार्यालयात बनावट कागदपत्रांवर कठोर कारवाईचा इशारा : मंत्री रामलिंग रेड्डी | ಆರ್ಟಿಒ ಕಚೇರಿಗಳಲ್ಲಿ ನಕಲಿ ದಾಖಲೆ ಪತ್ತೆಯಾದರೆ ಕಠಿಣ ಕ್ರಮ : ಸಚಿವ ರಾಮಲಿಂಗ ರೆಡ್ಡಿ
बेळगाव : राज्यातील कोणत्याही आरटीओ कार्यालयात वाहन नोंदणीदरम्यान बनावट कागदपत्रे तयार करणे अथवा वाहनाची खरी किंमत लपवून नोंदणी केल्याचे आढळल्यास संबंधित अधिकारी व कर्मचाऱ्यांवर कठोर कारवाई केली जाईल, असा इशारा परिवहन मंत्री रामलिंग रेड्डी यांनी दिला.
बुधवारी सकाळी विधान परिषदेत सदस्य सरवण टी.ए. यांनी विचारलेल्या प्रश्नाला उत्तर देताना मंत्री रेड्डी यांनी सांगितले की, मंगळुरू व उडुपी येथील आरटीओ कार्यालयांत कारची खरी किंमत लपवून बनावट कागदपत्रांच्या आधारे नोंदणी करून सरकारचे आर्थिक नुकसान झाल्याचे प्रकरण समोर आले आहे.

या प्रकरणात मंगळुरू आरटीओ कार्यालयातील केंद्रीय सहाय्यक, अधीक्षक व प्रथम श्रेणी सहाय्यक, तसेच उडुपी आरटीओ कार्यालयातील अधीक्षक यांना सेवेतून निलंबित करण्यात आले असून, संबंधितांवर विभागीय चौकशी सुरू आहे.
तसेच, या प्रकरणी लोकायुक्त पोलिसांच्या प्रस्तावावरून उडुपी प्रादेशिक परिवहन अधिकाऱ्यांविरुद्ध चौकशी करण्यासाठी भ्रष्टाचार प्रतिबंधक कायद्याच्या कलम १७(अ) अंतर्गत पूर्वपरवानगी देण्यात आल्याची माहितीही मंत्री रेड्डी यांनी दिली.
ಆರ್ಟಿಒ ಕಚೇರಿಗಳಲ್ಲಿ ನಕಲಿ ದಾಖಲೆ ಪತ್ತೆಯಾದರೆ ಕಠಿಣ ಕ್ರಮ : ಸಚಿವ ರಾಮಲಿಂಗ ರೆಡ್ಡಿ
ಬೆಳಗಾವಿ : ರಾಜ್ಯದ ಯಾವುದೇ ಆರ್ಟಿಒ ಕಚೇರಿಯಲ್ಲಿ ವಾಹನ ನೋಂದಣಿಯ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಅಥವಾ ವಾಹನದ ನಿಜವಾದ ಬೆಲೆಯನ್ನು ಮರೆಮಾಚಿ ನೋಂದಣಿ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯ ಸರ್ವಣ ಟಿ.ಎ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು ಮತ್ತು ಉಡುಪಿ ಆರ್ಟಿಒ ಕಚೇರಿಗಳಲ್ಲಿ ಕಾರುಗಳ ನಿಜವಾದ ಮೌಲ್ಯವನ್ನು ಮರೆಮಾಚಿ ನಕಲಿ ದಾಖಲೆಗಳ ಮೂಲಕ ನೋಂದಣಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಆರ್ಟಿಒ ಕಚೇರಿಯ ಕೇಂದ್ರ ಸಹಾಯಕ, ಅಧೀಕ್ಷಕ ಹಾಗೂ ಪ್ರಥಮ ದರ್ಜೆ ಸಹಾಯಕರು ಮತ್ತು ಉಡುಪಿ ಆರ್ಟಿಒ ಕಚೇರಿಯ ಅಧೀಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದೆ.
ಇದಲ್ಲದೆ, ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ಗಳ ಪ್ರಸ್ತಾವನೆಯ ಮೇರೆಗೆ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಷೇಧ ಕಾಯ್ದೆಯ ಕಲಂ 17(ಎ) ಅಡಿಯಲ್ಲಿ ಪೂರ್ವಾನುಮತಿ ನೀಡಲಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದರು.
