बीपीएल कार्डधारकांनी ‘हे’ केल्यास मिळणार नाही अन्नभाग्य योजनेचा लाभ | ಅಕ್ಕಿ ಮಾರಾಟ ಮಾಡಿದರೆ ಬಿಪಿjಎಲ್ ಕಾರ್ಡ್ ರದ್ದು

बेळगाव: राज्य सरकारच्या महत्त्वाकांक्षी अन्नभाग्य योजनेंतर्गत बीपीएल रेशनकार्डधारकांना दर महिन्याला प्रति माणसी दहा किलो तांदूळ दिला जात आहे. मात्र, या योजनेचा गैरफायदा घेत बहुतांश लाभार्थी पैशासाठी या तांदळाची काळ्या बाजारात विक्री करत असल्याचे गंभीर प्रकरण जिल्हा प्रशासनाच्या निदर्शनास आले आहे. याची गंभीर दखल घेत बेळगाव तहसीलदारांनी कडक इशारा दिला आहे.
कुटुंबाच्या उपयोगासाठी दिलेला तांदूळ पैशापोटी काळ्याबाजारात विकताना आढळून आल्यास संबंधितांचे बीपीएल रेशनकार्ड त्वरित रद्द केले जाईल, असे बेळगावचे तहसीलदार बसवराज नागराळ यांनी स्पष्ट केले आहे.
योजनेचा उद्देश आणि गैरवापर
गरीब आणि गरजू जनतेला खाण्यासाठी तांदूळ उपलब्ध व्हावा या दृष्टिकोनातून अन्नभाग्य योजना प्रभावीपणे राबवली जात आहे. सुरुवातीला तांदळाऐवजी काही रक्कम थेट लाभार्थ्यांच्या बँक खात्यात (डीबीटी) जमा केली जात होती. मात्र, फेब्रुवारी महिन्यापासून पुन्हा प्रति माणसी १० किलो तांदूळ दिला जात आहे.
परंतु, सरकारच्या या महत्त्वपूर्ण योजनेचा गैरफायदा घेत काही बीपीएल कार्डधारक रेशनमध्ये मिळालेल्या तांदळाची मोठ्या प्रमाणात काळ्याबाजारात विक्री करत आहेत. यासाठी भरमसाट पैसे आकारले जात असल्याचे समोर आले आहे.
प्रशासनाची कारवाई
काळ्याबाजारात होणाऱ्या या विक्रीमुळे अनेक वेळा वादावादीचे प्रसंग घडले आहेत. या गैरप्रकारांना आळा घालण्यासाठी अन्न व नागरी पुरवठा खाते आणि पोलीस खात्याकडून सातत्याने कारवाईदेखील केली जात आहे. आता जिल्हा प्रशासनाने या बाबीची अत्यंत गांभीर्याने दखल घेतली असून, काळ्याबाजारात तांदूळ विकणाऱ्यांवर थेट रेशनकार्ड रद्द करण्याची कठोर कारवाई करण्याचा इशारा दिला आहे.
रेशनचा तांदूळ केवळ कुटुंबाच्या अन्नसुरक्षेसाठी आहे, त्याची विक्री करणे हा कायद्याने गुन्हा आहे. त्यामुळे लाभार्थ्यांनी याचा गैरवापर न करता योग्य कारणासाठी उपयोग करावा, असे आवाहन प्रशासनाने केले आहे.
:
ಹಣಕ್ಕಾಗಿ ಪಡಿತರ ಅಕ್ಕಿ ಮಾರಾಟ ಮಾಡಿದರೆ ಬಿಪಿಎಲ್ ಕಾರ್ಡ್ ರದ್ದು
ಬೆಳಗಾವಿ ತಹಸೀಲ್ದಾರರ ಎಚ್ಚರಿಕೆ: ಜಿಲ್ಲಾಡಳಿತದಿಂದ ಗಂಭೀರ ಕ್ರಮ
ಬೆಳಗಾವಿ (ಪ್ರತಿನಿಧಿ):
ರಾಜ್ಯ ಸರ್ಕಾರದ ಯೋಜನೆಯಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರತಿ ತಿಂಗಳು ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ತಲಾ ಒಬ್ಬರಿಗೆ ಹತ್ತು ಕಿಲೋ ಅಕ್ಕಿ ನೀಡಲಾಗುತ್ತಿದೆ. ಆದರೆ, ಹೆಚ್ಚಿನ ಜನರು ಹಣಕ್ಕಾಗಿ ಈ ಪಡಿತರ ಅಕ್ಕಿಯನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಕ್ಕಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಪಡಿಸಲಾಗುವುದು ಎಂದು ಬೆಳಗಾವಿ ತಹಸೀಲ್ದಾರರಾದ ಬಸವರಾಜ್ ನಾಗರಾಳ ಅವರು ಎಚ್ಚರಿಕೆ ನೀಡಿದ್ದಾರೆ.
ಯೋಜನೆಯ ಉದ್ದೇಶ ಮತ್ತು ದುರುಪಯೋಗ
ಸಾಮಾನ್ಯ ಬಡ ಜನರಿಗೆ ಆಹಾರಕ್ಕಾಗಿ ಅಕ್ಕಿ ಸಿಗುವ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಹಿಂದೆ ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಫೆಬ್ರವರಿ ತಿಂಗಳಿಂದ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿದೆ.
ಆದರೆ, ಸರ್ಕಾರದ ಈ ಯೋಜನೆಯನ್ನು ಹಲವು ಬಿಪಿಎಲ್ ಕಾರ್ಡ್ದಾರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪಡಿತರದಲ್ಲಿ ಸಿಗುವ ಅಕ್ಕಿಯನ್ನು ಕಪ್ಪು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ
ಕಪ್ಪು ಮಾರುಕಟ್ಟೆಯಲ್ಲಿನ ಈ ಮಾರಾಟದಿಂದ ಹಲವು ಬಾರಿ ಗಲಾಟೆಗಳೂ ಸಂಭವಿಸಿವೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಪೊಲೀಸ್ ಇಲಾಖೆಗಳಿಂದ ನಿರಂತರವಾಗಿ ಕಾರ್ಯಚರಣೆಗಳನ್ನು ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕುಟುಂಬದ ಬಳಕೆಗಾಗಿ ನೀಡಲಾದ ಅಕ್ಕಿಯನ್ನು ಹಣದಾಸೆಗೆ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಅವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದು ತಹಸೀಲ್ದಾರರು ಖಚಿತಪಡಿಸಿದ್ದಾರೆ.
ಪಡಿತರ ಅಕ್ಕಿಯ ದುರುಪಯೋಗ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.